Article Image

ಎಕ್ಸಲೆಂಟ್: ನೂತನ ಪ್ರಾಂಶುಪಾಲರಾಗಿ ಪುಷ್ಪರಾಜ್ ಬಿ. ಅಧಿಕಾರ ಸ್ವೀಕಾರ

Article Image

ಎಕ್ಸಲೆಂಟ್: ನೂತನ ಪ್ರಾಂಶುಪಾಲರಾಗಿ ಪುಷ್ಪರಾಜ್ ಬಿ. ಅಧಿಕಾರ ಸ್ವೀಕಾರ

ಮೂಡುಬಿದಿರೆ: ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನ ನೂತನ ಪ್ರಾಂಶುಪಾಲರಾಗಿ ಪ್ರಸಿದ್ಧ ಶಿಕ್ಷಣ ತಜ್ಞ ಹಾಗೂ ಆಡಳಿತಗಾರರಾದ ಪುಷ್ಪರಾಜ್ ಬಿ. ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ಅವರು ಇದೇ ಸಂಸ್ಥೆಯಲ್ಲಿ ಶೈಕ್ಷಣಿಕ ನಿರ್ದೇಶಕರಾಗಿ (Academic Director) ಯಶಸ್ವಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿವಿಧ ಶಿಕ್ಷಣ ಸಂಸ್ಥೆಗಳಲ್ಲಿ ವಿವಿಧ ಹುದ್ದೆಗಳಲ್ಲಿ ಬರೋಬ್ಬರಿ 30 ವರ್ಷಗಳ ಸುದೀರ್ಘ ಬೋಧನಾ ಮತ್ತು ಆಡಳಿತಾತ್ಮಕ ಅನುಭವ ಹೊಂದಿರುವ ಪುಷ್ಪರಾಜ್ ಅವರು ಶಿಕ್ಷಣ ಕ್ಷೇತ್ರದಲ್ಲಿ ಅತ್ಯಂತ ಪರಿಚಿತ ಹಾಗೂ ಗೌರವಾನ್ವಿತ ಹೆಸರಾಗಿದ್ದಾರೆ. ಅವರು ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಆಪ್ತಸಮಾಲೋಚಕರು (Counsellor), ತರಬೇತುದಾರರು ಮತ್ತು ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದಾರೆ. ತಮ್ಮ ಸುದೀರ್ಘ ವೃತ್ತಿಜೀವನದಲ್ಲಿ ಅವರು ಸಾವಿರಾರು ವಿದ್ಯಾರ್ಥಿಗಳಿಗೆ ಆಧುನಿಕ ಕಲಿಕಾ ವಿಧಾನಗಳ ಕುರಿತು ತರಬೇತಿ ನೀಡಿದ್ದಾರೆ. ಇದರೊಂದಿಗೆ, ರಾಜ್ಯದಾದ್ಯಂತ ವಿವಿಧ ಕಾಲೇಜುಗಳ 20,000 ಕ್ಕೂ ಹೆಚ್ಚು ಶಿಕ್ಷಕರಿಗೆ 'ತರಗತಿ ನಿರ್ವಹಣೆ' (Classroom Management) ಕುರಿತು ವಿಶೇಷ ಕಾರ್ಯಾಗಾರ ಹಾಗೂ ತರಬೇತಿಯನ್ನು ನೀಡಿದ್ದಾರೆ. ದಕ್ಷ ಆಡಳಿತಗಾರರಾಗಿರುವ ಪುಷ್ಪರಾಜ್ ಬಿ. ಅವರು ಇದೀಗ ಪ್ರಾಂಶುಪಾಲರಾಗಿ ಅಧಿಕಾರ ವಹಿಸಿಕೊಂಡ ಈ ಸಂದರ್ಭದಲ್ಲಿ, ಎಕ್ಸಲೆಂಟ್ ಸಮೂಹ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಹಾಗೂ ಕಾರ್ಯದರ್ಶಿ ರಶ್ಮಿತಾ ಜೈನ್, ಅವರು ನೂತನ ಪ್ರಾಂಶುಪಾಲರನ್ನು ಅಭಿನಂದಿಸಿ, ಇವರ ಸಮರ್ಥ ನಾಯಕತ್ವದಲ್ಲಿ ಕಾಲೇಜು ಶೈಕ್ಷಣಿಕವಾಗಿ ಮತ್ತಷ್ಟು ಉನ್ನತ ಯಶಸ್ಸನ್ನು ಸಾಧಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ನಿರ್ದೇಶಕರಾದ ಸಂಪತ್ ಕುಮಾರ್, ಆಡಳಿತಾಧಿಕಾರಿ ಹರೀಶ್ ಶೆಟ್ಟಿ ಹಾಗೂ ಕಾಲೇಜಿನ ಹಿರಿಯ ಉಪನ್ಯಾಸಕರು ಮತ್ತು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಪುಣೆ: ವಧು ವರರ ಪರಿಚಯಾತ್ಮಕ ಮಹಾಮೇಳ

Article Image

ಪುಣೆ: ವಧು ವರರ ಪರಿಚಯಾತ್ಮಕ ಮಹಾಮೇಳ

ಬದಲಾಗುತ್ತಿರುವ ಇಂದಿನ ಕಾಲಘಟ್ಟದಲ್ಲಿ ವರನಿಗೆ ವಧು, ವಧುವಿಗೆ ವರ ಸುಲಭವಾಗಿ ಸಿಕ್ಕಿ ಮದುವೆಯಾಗುವುದು ತುಂಬಾ ಕಷ್ಟಸಾಧ್ಯವಾಗಿದೆ. ಅದರಲ್ಲೂ ಮುಖ್ಯವಾಗಿ ಹುಡುಗರಿಗೆ ಹುಡುಗಿಯರು ಸಿಗದಿರುವುದೇ ಗಂಭೀರವಾದ ಸಮಸ್ಯೆಯಾಗಿದೆ. ಈ ಸಮಸ್ಯೆ ಎಲ್ಲಾ ಸಮುದಾಯದಲ್ಲೂ ಇದೆ ಆದರೆ ಜೈನ ಸಮುದಾಯದಲ್ಲಿ ತುಸು ಹೆಚ್ಚು ಎಂದೇ ಹೇಳಬೇಕು. ಈ ಸಮಸ್ಯೆ ಪರಿಹಾರ ಕಂಡುಕೊಳ್ಳಲು ಅನೇಕ ಮಾಹಿತಿ ಕೇಂದ್ರಗಳು, ಮೇಳಗಳು ಮತ್ತು ಮೆಟ್ರಿಮೊನಿ ಇತ್ಯಾದಿ ಸಂಸ್ಥೆಗಳು ಹುಟ್ಟಿಕೊಂಡಿವೆಯಾದರೂ ಅವೆಲ್ಲವೂ ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಇದನ್ನು ಮನಗಂಡು ಮಹಾರಾಷ್ಟ್ರ ರಾಜ್ಯದ ಪುಣೆ ನಗರದ ಪ್ರತಿಷ್ಠಿತ ಸಮಾಜ ಸೇವಾ ಸಂಸ್ಥೆಯೊಂದು "ಮನೋಮಿಲನ್ " ಎಂಬ ಹೆಸರಿನಿಂದ ಜೈನ ಸಮಾಜದ ಹಿತದೃಷ್ಟಿಯಿಂದ ರಾಷ್ಟ್ರಮಟ್ಟದಲ್ಲಿ "ಆರ್ಯನ್ ಸಂಸ್ಥೆ ಪ್ರಾಯೋಜಕತ್ವದಲ್ಲಿ "*ಮನೋಮಿಲನ್ " ಎಂಬ ವಧು ವರರ ಪರಿಚಯಾತ್ಮಕ ಮಹಾ ಮೇಳ ( 2026 ) ವನ್ನು *ಪುಣೆ * ಯಲ್ಲಿ ಆಯೋಜಿಸಿದ್ದಾರೆ. ಇದರ ಪ್ರಯೋಜನವನ್ನು ಅಗತ್ಯವಿರುವವರು ಪಡೆದುಕೊಳ್ಳಬಹುದು. “ಮನೋಮಿಲನ” ಎಂದರೆ ಹೃದಯಗಳ ಒಂದಾಗುವಿಕೆ, “ಇಲ್ಲಿ ಮನಗಳು ಒಂದಾಗುತ್ತವೆ… ಸಂಬಂಧಗಳು ಬೆಸೆಯುತ್ತವೆ.” ಇದೇ ಉದ್ದೇಶ ಹೊಂದಿದ ಈ ಸಂಸ್ಥೆಯ ಪ್ರಾಮಾಣಿಕ ಸಮಾಜ ಸೇವಾ ಪ್ರಯತ್ನ ಇದು. ಮಹಾಮೇಳ ನಡೆಯುವ ಸ್ಥಳ : ಆರ್ಯನ್ ವರ್ಲ್ಡ್ ಸ್ಕೂಲ್, ಭೀಲಾರೆವಾಡಿ, ಕತರಾಜ್ ಸಮೀಪ ಪುಣೆ ಮಾಹಿತಿಗಾಗಿ ಸಂಪರ್ಕ ಸಂಖ್ಯೆ : 7030912526 ಮೇಳ ನೆಡೆಯುವ ದಿನಾಂಕ: ಮೇ 30 ಶನಿವಾರ ಮತ್ತು 31 ರವಿವಾರ ಮೇಳದ ವೈಶಿಷ್ಠೆಗಳು : * ದೇಶದ ವಿವಿಧ ಪ್ರಮುಖ ಸ್ಥಳಗಳಿಂದ ಸುಸಂಸ್ಕೃತ ಮತ್ತು ಉತ್ತಮ ಸ್ಥಾನ ಮಾನ ಹೊಂದಿದ ಕುಟುಂಬ ಪರಿವಾರ ಭಾಗವಹಿಸುತ್ತಾರೆ. * ವೇದಿಕೆಯಲ್ಲಿ ಪರಸ್ಪರ ಪರಿಚಯದೊಂದಿಗೆ ಸಂದರ್ಶನದ ಅವಕಾಶ. * ಅಭ್ಯರ್ಥಿಗಳ ವ್ಯಕ್ತಿಯ ಬಗೆಗಿನ ವ್ಯಕ್ತಿಚಿತ್ರದ ವಿವರಗಳ ಪ್ರಕಟಣೆ. * ಕುಟುಂಬಗಳ ಚರ್ಚೆಗೆ ಪ್ರತ್ಯೇಕ ಕೊಠಡಿ ವ್ಯವಸ್ಥೆ. * ಕತ್ರಾಜ ಮತ್ತು ಸ್ವರ್ಗೆಟ್ ಗಳಿಂದ ಉಚಿತ ವಾಹನದ ವ್ಯವಸ್ಥೆ * ಬೇರೆ ಸ್ಥಳಗಳಿಂದ ಬರುವವರಿಗೆ ವಾಸ್ತವ್ಯದ ವ್ಯವಸ್ಥೆ * ಮಾತನಾಡುವ ಕಲೆ ಅಭಿವೃದ್ಧಿಗೆ ತರಬೇತಿ * ರಿಯಾಯತಿ ದರದಲ್ಲಿ ಉಪಹಾರ ಮತ್ತು ಊಟದ ವ್ಯವಸ್ಥೆ * 7000 ಕ್ಕೂ ಹೆಚ್ಚು ವಧು ವರರ ಡಾಟಾಬ್ಯಾಂಕ್ ವಿತರಿಸುವ ಸೌಲಭ್ಯ * ನೋಂದಣಿ ಶುಲ್ಕ ಕೇವಲ ₹ 700/- ಈ ಸಂಸ್ಥೆಯ ವಿಶೇಷವೆಂದರೆ ಭಾರತವೂ ಸೇರಿದಂತೆ ಇಡೀ ಪ್ರಪಂಚದಾದ್ಯಂತ ಯಾವುದೇ ಸ್ಥಳದಿಂದಲೂ ಜೈನ ವಧುವರ ಆಕಾಂಕ್ಷಿಗಳು ಸಂಸ್ಥೆಯ ವೆಬ್ಸೈಟ್ ಮೂಲಕ ಸುಲಭ ಸರಳ ಹಾಗೂ ಸುರಕ್ಷಿತ ಆರು ಹಂತದ ಕ್ರಿಯೆಗಳನ್ನು ಉಪಯೋಗಿಸಿ ತಮಗೆ ಬೇಕಾದವರನ್ನು ಆಯ್ಕೆಮಾಡಲು ಅನುಕೂಲವಾಗುವಂತೆ ವಿಪುಲವಾದ ಪ್ರೊಫೈಲ್ ಗಳನ್ನು ಪರಿಶೀಲಿಸಬಹುದಾಗಿದೆ ಮತ್ತು ನೇರವಾಗಿ ಸಂಪರ್ಕಿಸಬಹುದಾಗಿದೆ. ಇಂತ ವಿಶೇಷತೆ ಯಾವುದೇ ಮೆಟ್ರಿಮೊನಿಗಳಲ್ಲಿ ಇರುವುದಿಲ್ಲ. ಇದು ಅತ್ಯಂತ ಅನುಕೂಲವಾಗಿರುವುದರಿಂದ ಪ್ರತಿಯೊಬ್ಬ ಅನ್ವೇಷಕರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಹೆಚ್ಚಿನ ಮಾಹಿತಿಗೆ ಮತ್ತು ನೋಂದಣಿಗೆ - ವೆಬ್ ಸೈಟ್ : wwwaaryanamanomilan.com ಬಳಸಬಹುದು. ಪ್ರಮುಖ ಸಂಘಟಕರು : * ಶ್ರೀ ಮಿಳಿಂದ ಲಡ್ಗೆ - ಆರ್ಯನ್ ವರ್ಲ್ಡ್ ಸ್ಕೂಲ್ ಮತ್ತು ಆರ್ಯನ್ ಮನೋಮಿಲನ್ ಸಂಸ್ಥೆಯ ಸಂಸ್ಥಾಪಕರು. ಮೊಬೈಲ್ ನಂ -7030912526 ಕರ್ನಾಟಕದ ಸಂಘಟನಾ ಕಮಿಟಿ ಮುಖ್ಯಸ್ಥರು: * ಶ್ರೀ ರಾಜೇಂದ್ರ ಹರ್ದಿ ಮೊಬೈಲ್ ನಂ 9341690909 ವರದಿ : ಎಸ್ ಆರ್ ಮಲ್ಲಸಮುದ್ರ

ಶೃತ ಪಂಚಮಿ ಆಚರಣೆ

Article Image

ಶೃತ ಪಂಚಮಿ ಆಚರಣೆ

ಹೊಂಬುಜ: ಅತಿಶಯ ಶ್ರೀಕ್ಷೇತ್ರದಲ್ಲಿ ಪೂರ್ವ ಪರಂಪರೆಯಂತೆ ನಡೆದುಕೊಂಡು ಬಂದಿರುವ ಶೃತ ಪಂಚಮಿ ಮಹೋತ್ಸವವನ್ನು ಪರಮ ಪೂಜ್ಯ ಜಗದ್ಗುರು ಸ್ವಸ್ತಿಶ್ರೀ ಡಾ. ದೇವೇಂದ್ರಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನಿಧ್ಯ ಹಾಗೂ ಮಾರ್ಗದರ್ಶನದಲ್ಲಿ ಜೂನ್. 19 ಶುಕ್ರವಾರದಂದು ನೆರವೇರಲಿದೆ. ಅಂದು 8 ವರ್ಷ ಮೇಲ್ಪಟ್ಟ ಜೈನ ಬಾಲಕ-ಬಾಲಕಿಯರಿಗೆ ಸಾಮೂಹಿಕ ವ್ರತೋಪದೇಶ ಹಾಗೂ ಎರಡರಿಂದ ಮೂರು ವರ್ಷದ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ‍್ಯಕ್ರಮವನ್ನು ಆಯೋಜಿಸಲಾಗಿದೆ. ಅಂದು ವಿಶೇಷ ಜಿನಪೂಜೆಯೊಂದಿಗೆ ಶಾಸ್ತ್ರಗಳನ್ನು ಪೂಜಿಸಿ, ಪಠಿಸಿ ಜಿನವಾಣಿಗೆ ಭಕ್ತಿಭಾವದ ನಮನ ಸಲ್ಲಿಸಲಾಗುವುದು. ವ್ರತೋಪದೇಶ ಹಾಗೂ ಅಕ್ಷರಾಭ್ಯಾಸದಲ್ಲಿ ಭಾಗವಹಿಸುವವರು ಶ್ರೀಮಠದ ಆಡಳಿತ ಕಾರ್ಯಾಲಯದಲ್ಲಿ ಸಂಪರ್ಕಿಸಬಹುದು. ಹೆಚ್ಚಿನ ಮಾಹಿತಿಗಾಗಿ: 08185-262722, 9481453653, 9483801460

ಪ್ರೊ. ಅಪ್ಪಣ್ಣ ಹಂಜೆ: ವಿಷಯ ಪರಿಣಿತರಾಗಿ ನೇಮಕ

Article Image

ಪ್ರೊ. ಅಪ್ಪಣ್ಣ ಹಂಜೆ: ವಿಷಯ ಪರಿಣಿತರಾಗಿ ನೇಮಕ

ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳ ಆದೇಶದಂತೆ ಕುಲಸಚಿವರು ಹುಲಕೋಟಿಯ ಕೆ.ಎಚ್. ಪಾಟೀಲ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಪ್ರೊ. ಅಪ್ಪಣ್ಣ ಹಂಜೆ ಅವರನ್ನು 2026-27 ಮತ್ತು 2027-28ರ ಸಾಲಿಗೆ ಪ್ರಾಚೀನ ಭಾರತೀಯ ಇತಿಹಾಸ ಮತ್ತು ಶಾಸನಶಾಸ್ತ್ರ ವಿಷಯದ ಸ್ನಾತಕ ಅಭ್ಯಾಸ ಮಂಡಳಿಯ ವಿಷಯ ಪರಿಣಿತರಾಗಿ ನೇಮಕ ಮಾಡಿದ್ದಾರೆ. ಇವರು ಜೈನ ಇತಿಹಾಸ, ಸಂಸ್ಕೃತಿ, ಸಾಹಿತ್ಯ, ಸಮಾಜ, ವಾಸ್ತುಕಲೆ, ಶಿಲ್ಪಕಲೆ, ಶಾಸನಗಳು, ಮುನಿಪರಂಪರೆ, ಕವಿಗಳು ಮುಂತಾದ ವಿಷಯಗಳ ಕುರಿತು ತಲಸ್ಪರ್ಶಿ ಸಂಶೋಧನ ಅಧ್ಯಯನ ಕೈಗೊಂಡು ಮೌಲ್ಯಯುತ ಕೃತಿಗಳು ಮತ್ತು ಲೇಖನಗಳನ್ನು ಪ್ರಕಟಿಸಿದ್ದಾರೆ. ಹಂಪಿ ಕನ್ನಡ ವಿಶ್ವವಿದ್ಯಾಲಯದ ಚರಿತ್ರೆ ಅಧ್ಯಯನ ವಿಭಾಗದ ಸಂಯೋಜಿತ ಉಜಿರೆಯ ಹಾಮಾನಾ ಸಂಶೋಧನ ಕೇಂದ್ರದಲ್ಲಿ ಪಿಎಚ್.ಡಿ. ವಿದ್ಯಾರ್ಥಿಗಳಿಗೆ ಬಾಹ್ಯ ಮಾರ್ಗದರ್ಶಕರಾಗಿ ಹಾಗೂ ಕರ್ನಾಟಕ ಪುರಾತತ್ವ ಮತ್ತು ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಶೈಕ್ಷಣಿಕ ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ರಾಜಶ್ರೀ ಕೆ.ಸೂಜಿ ಮಾಸ್ಟರ್ಸ್ ಪದವಿ

Article Image

ರಾಜಶ್ರೀ ಕೆ.ಸೂಜಿ ಮಾಸ್ಟರ್ಸ್ ಪದವಿ

ಹುಬ್ಬಳ್ಳಿ:- ಡಾ| ರಾಜಶ್ರೀ ಕೆ.ಸೂಜಿರವರು 2026 ಸಾಲಿನ ಮಾರ್ಚ್ ತಿಂಗಳಿನಲ್ಲಿ ಆರ್ಯುವೇದ ವಾಚಸ್ಪತಿ (ಮಾಸ್ಟರ್ಸ್ ಪದವಿ)ಯನ್ನು ಆರ್ಯುವೇದ ಮಹಾವಿದ್ಯಾಲಯ ಹುಬ್ಬಳ್ಳಿಯಲ್ಲಿ ಪೂರ್ಣಗೊಳಿಸಿರುತ್ತಾರೆ. ಇವರು ಹುಬ್ಬಳ್ಳಿಯ ಶಕುಂತಳ ಎಂ.ಸೂಜಿರವರ ಮೊಮ್ಮಗಳು ಮತ್ತು ಆಸ್ಮಿತಾ ಕಿರಣ್ ಸೂಜಿ ಮತ್ತು ಕಿರಣ್ ಎಂ. ಸೂಜಿರವರ ಪುತ್ರಿ.

ಸಭಾ ಭವನ ಭೋಜನ ಶಾಲೆ ಯಾತ್ರಿ ನಿವಾಸದ ಉದ್ಘಾಟನೆ

Article Image

ಸಭಾ ಭವನ ಭೋಜನ ಶಾಲೆ ಯಾತ್ರಿ ನಿವಾಸದ ಉದ್ಘಾಟನೆ

ಕಾಗವಾಡ: ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ ಸಂಪತ್ತಿಗಿಂತ ಸತ್ಯ ಮುಖ್ಯ ಇಂಥಹ ಸದ್ಗುಣಗಳನ್ನು ಹೊಂದಿರುವ ಯುವಕರನ್ನು ನಿರ್ಮಾಣ ಮಾಡುವ ಗುರುತರ ಜವಾಬ್ದಾರಿ ಪ್ರತಿಯೊಬ್ಬ ಸಾಧುಸಂತರು, ರಾಜಕಾರಣಿಗಳು, ಸಮಾಜ ಸೇವಕರ ಮೇಲಿದೆ. ಆ ಜವಾಬ್ದಾರಿಯನ್ನು ಅರಿತು ಕಾರ್ಯ ಮಾಡಿದಲ್ಲಿ ಸಮೃದ್ಧವಾದ ದೇಶ ನಿರ್ಮಾಣವಾಗಲು ಸಾಧ್ಯ ಅಂಥ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕಂಬದಳ್ಳಿ ಜೈನ ಮಠದ ಸ್ವಸ್ತಿಶ್ರೀ ಭಾನುಕೀರ್ತಿ ಭಟ್ಟಾರಕ ಮಹಾಸ್ವಾಮಿಗಳು ದಿವ್ಯ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು. ಅವರು ಕಾಗವಾಡ ತಾಲೂಕಿನ ಸುಕ್ಷೇತ್ರ ಉಗಾರ ಬುದ್ರುಕ್‌ ಗ್ರಾಮದ ಶ್ರೀ ಪದ್ಮಾವತಿ ದೇವಿ ಮಂದಿರದಲ್ಲಿ ನೂತನವಾಗಿ ನಿರ್ಮಿಸಿದ ಸಭಾ ಭವನ, ಭೋಜನ ಶಾಲೆ, ಹಾಗೂ ಯಾತ್ರಿ ನಿವಾಸವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಪಾಲಕರು ತಮ್ಮ ಮಕ್ಕಳಿಗೆ ಯಾವುದೇ ಭಾಷೆಯ ಶಿಕ್ಷಣ ಕೊಡಿಸಿದರೂ ಕೂಡ ಜೈನ ಧರ್ಮದ ಆಚಾರ, ವಿಚಾರಗಳನ್ನು ಪ್ರತಿದಿನ ಮಕ್ಕಳಿಗೆ ಬೋದಿಸುವುದರ ಜೊತೆಗೆ ತಾವೂ ಕೂಡ ಅಹಿಂಸಾ ಪರಮೋಧರ್ಮದ ತತ್ವಸಿದ್ಧಾಂತಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದ ಅವರು ತಾವೆಲ್ಲರು ಭಕ್ತಿ ಮಾರ್ಗದಲ್ಲಿ ನಡೆಯಿರಿ, ಆ ತಾಯಿ ಪದ್ಮಾವತಿ ನಿಮಗೆ ಆಶೀರ್ವದಿಸುತ್ತಾಳೆ. ಯಾರ ಬಳಿ ಭಕ್ತಿ ಇದೇಯೋ ಅಲ್ಲಿ ಶಕ್ತಿ ಇದೆ ಎಂದರು. ಪರಮಪೂಜ್ಯ ಜಗದ್ಗುರು ಅಕಲಂಕಕೇಸರಿ ಸ್ವಸ್ತಿಶ್ರೀ ಭಟ್ಟಾಕಲಂಕ ಪಟ್ಟಾಚಾರ್ಯಮಹಾಸ್ವಾಮಿಗಳು ಮಾತನಾಡುತ್ತ ಭಕ್ತಿಯಿಂದ ಶಕ್ತಿ, ಶಕ್ತಿಯಿಂದ ಯುಕ್ತಿ, ಸಂಪಾದಿಸಿದರೆ ಪದ್ಮಾವತಿ ದೇವಿ ತಮಗೆ ಖಂಡಿತವಾಗಿಯೂ ಒಲಿದು ತಮಗೆ ಬಂದಂತಾ ಕಷ್ಟಗಳನ್ನು ದೂರವಾಡುವ ಶಕ್ತಿ ಆ ತಾಯಿಗಿದೆ ಎಂದರು. ರಾಜ್ಯಸ್ಥಾನದ ತಿಜಾರಾ ಜೈನ ಮಠದ ಸ್ವಸ್ತಿಶ್ರೀ ಸೌರಭಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮಾತನಾಡಿ ಕರ್ನಾಟಕ ಹಾಗೂ ಮಹಾರಾಷ್ಟ್ರದಲ್ಲಿ ಪ್ರಸಿದ್ಧಿ ಹೊಂದಿರುವ ಉಗಾರ ಶ್ರೀ ಪದ್ಮಾವತಿ ದೇವಿಯ ದೇವಸ್ಥಾನ ಜಾಗೃತ ದೇವಸ್ಥಾನವಾಗಿದ್ದು, ಇಲ್ಲಿ ಬಂದು ಹೋಗುವ ಶ್ರಾವಕ,ಶ್ರಾವಕಿಯರಿಗೆ ಅನುಕೂಲವಾಗಲಿ ಎಂಬ ದೃಷ್ಟಿಯಿಂದ ಯಾತ್ರಿ ನಿವಾಸ, ಭವನ ನಿರ್ಮಿಸಿರುವ ಧರ್ಮದರ್ಶಿ ಶೀತಲಗೌಡ ಪಾಟೀಲರಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು. ಮಾಜಿ ಶಾಸಕ ಸಂಜಯ ಪಾಟೀಲ ಮಾತನಾಡಿ ಸೌಂದಾಮ ಹುಮಜಾ ಮಠಗಳ ವಾತಾವರಣ ಈಗ ಉಗಾರ ಪದ್ಮಾವತಿ ಮಂದಿರದಲ್ಲಿ ನಿರ್ಮಾಣವಾಗಿದೆ. ಧಾರ್ಮಿಕ ಕಾರ್ಯದಲ್ಲಿ ನಮ್ಮ ಹೆಸರು ಉಳಿಯಬೇಕಾದರೆ ಕೆ.ಎ ವನಜೋಳ ಅವರ ಹಾಗೆ ಧರ್ಮ ಕಾರ್ಯದಲ್ಲಿ ಕೈ ಜೋಡಿಸಬೇಕಾಗುತ್ತದೆ. ನಾನು ಮತ್ತು ಶಾಸಕ ಅಭಯ ಪಾಟೀಲರು ಕೂಡ ಧರ್ಮದ ಕೆಲಸದಲ್ಲಿ ಕೈ ಜೋಡಿಸುವುದಾಗಿ ಭರವಸೆ ನೀಡಿದರು. ದೇವಸ್ಥಾನದ ಧರ್ಮದರ್ಶಿಗಳಾದ ಶೀತಲಗೌಡ ಪಾಟೀಲ ಪ್ರಾಸ್ತಾವಿಕವಾಗಿ ವಿವರವಾಗಿ ಮಾತನಾಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಶಾಸಕರಾದ ಕಲ್ಲಪ್ಪಣ್ಣ ಮುಗೆಣ್ಣವರ, ಮೋಹನರಾವ್‌ ಶಹಾ, ಸಂಜಯ ಪಾಟೀಲ, ಮಹಾವೀರ ನಿಲಜಗಿ, ಡಾ.ಮಹಾವೀರ ದಾನಿಗೊಂಡ, ಬಾಹುಬಲಿ ನಾಗನೂರಿ, ಸುನೀಲ ಪಾಟೀಲ, ಮಹಾವೀರ ಕಾತ್ತಾಳೆ, ಸಂಜಯ ನಾಡಗೌಡ, ಅಭಯಕುಮಾರ ಅಕಿವಾಟೆ, ಅಶೋಕ ಚೌಗುಲೆ, ಕಲ್ಲಪ್ಪ ವನಜೋಳ, ಎಮ್.ಎಚ್.ನಂದಗಾಂವ, ಸಂಜಯ ಕುಚನೂರೆ, ಮಹೇಂದ್ರ ಖೇಮಲಾಪೂರೆ, ಡಾ.ನೀರಜಾ ನಾಗೇಂದ್ರಕುಮಾರ, ಬಮ್ಮಣ್ಣ ಚೌಗಲೆ, ವರ್ಧಮಾನ ಕೋರಿ, ಪ್ರದೀಪ ಚಿಂಚವಾಡೆ, ಆದಿನಾಥ ವಸವಾಡೆ ಉಪಸ್ಥಿತರಿದ್ದರು. ಈ ವೇಳೆ ಮಹಾದಾನಿಗಳನ್ನು ಸನ್ಮಾನಿಸಲಾಯಿತು. ಶೀತಲಗೌಡ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿದರು. ವಜ್ರಕುಮಾರ ಮಗದುಮ್‌ ಸ್ವಾಗತಿಸಿ ವಂದಿಸಿದರು.

ಪೂಜಾ ಮಹೋತ್ಸವ

Article Image

ಪೂಜಾ ಮಹೋತ್ಸವ

ಗದಗ: ಭ|| ಶ್ರೀ 1008 ನೇಮಿನಾಥ ಸ್ವಾಮಿ ಜಿನಮಂದಿರದ 38ನೇ ವರ್ಷದ ವಾರ್ಷಿಕ ಪೂಜಾ ಮಹೋತ್ಸವವು ಸೋಂದಾ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾ ಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಮೇ 18ರಂದು ಜರುಗಲಿದೆ.

ಧರ್ಮಸ್ಥಳ: ಬಸದಿಯ ವಾರ್ಷಿಕೋತ್ಸವ

Article Image

ಧರ್ಮಸ್ಥಳ: ಬಸದಿಯ ವಾರ್ಷಿಕೋತ್ಸವ

ಉಜಿರೆ: ಧರ್ಮಸ್ಥಳದಲ್ಲಿ ಭಗವಾನ್ ಚಂದ್ರನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವದ ಅಂಗವಾಗಿ ಗುರುವಾರ ದೇವರಿಗೆ ಸಹಸ್ರನಾಮ ಪುಷ್ಪಾರ್ಚನೆ ನಡೆಯಿತು. ಶ್ರದ್ಧಾಅಮಿತ್ ಮತ್ತು ಊರಿನ ಶ್ರಾವಕರು, ಶ್ರಾವಕಿಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತೋರಣಮುಹೂರ್ತ, ವಿಮಾನ ಶುದ್ಧಿ, ನಾಂದಿಮಂಗಲ, ವಾಸ್ತು ಪೂಜಾ ವಿಧಾನ, ನವಗ್ರಹ ಮಹಾಶಾಂತಿ ಮೊದಲಾದ ಧಾರ್ಮಿಕ ವಿಧಿ-ವಿಧಾನಗಳನ್ನು ನಡೆಸಲಾಯಿತು.

ಮೂಡುಬಿದಿರೆ ಪುರಸಭೆ: ಸ್ವಚ್ಛತಾ ರಾಯಭಾರಿಯಾಗಿ ಶ್ವೇತಾ ಜೈನ್ ನೇಮಕ

Article Image

ಮೂಡುಬಿದಿರೆ ಪುರಸಭೆ: ಸ್ವಚ್ಛತಾ ರಾಯಭಾರಿಯಾಗಿ ಶ್ವೇತಾ ಜೈನ್ ನೇಮಕ

ಮೂಡುಬಿದಿರೆ: ಸ್ವಚ್ಛ ಭಾರತ್ ಮಿಷನ್ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ 2025-26ನೇ ಸಾಲಿಗೆ ಮೂಡುಬಿದಿರೆ ಪುರಸಭೆಯ ಸ್ವಚ್ಛತಾ ರಾಯಭಾರಿಯಾಗಿ ಇನ್ನರ್ ವೀಲ್ ಕ್ಲಬ್ ಮೂಡುಬಿದಿರೆ ಇದರ ಅಧ್ಯಕ್ಷೆ, ನ್ಯಾಯವಾದಿ ಶ್ವೇತಾ ಜೈನ್ ಅವರನ್ನು ಗೌರವ ಪೂರ್ವಕವಾಗಿ ನೇಮಕ ಮಾಡಲಾಗಿದೆ ಎಂದು ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ಇಂದು ಎಂ. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರ ಉಲ್ಲೇಖಿತ ವಿಷಯಕ್ಕೆ ಸಂಬಂಧಿಸಿದಂತೆ, ಸ್ವಚ್ಛ ಭಾರತ್ ಮಿಷನ್ ಯೋಜನೆಯ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಸಲುವಾಗಿ ಶೂನ್ಯ ತ್ಯಾಜ್ಯ ಕಾರ್ಯಕ್ರಮಗಳ ಆಯೋಜನೆ, ಶೂನ್ಯ ತ್ಯಾಜ್ಯ ಕ್ಯಾಂಪಸ್ ಗಳ ರಚನೆಗಾಗಿ ಹಾಗೂ ಸ್ವಚ್ಛತೆಯ ಸಂದೇಶವನ್ನು ಸಾರುವ ಸಲುವಾಗಿ ಈ ನೇಮಕ ಮಾಡಲಾಗಿದೆ. ನ್ಯಾಯವಾದಿ ಶ್ವೇತಾ ಜೈನ್ ಅವರು ಭಾರತೀಯ ಜೈನ್ ಮಿಲನ್ ಸಂಸ್ಥೆಯಲ್ಲಿ ಹಲವು ಜವಾಬ್ದಾರಿಯುತ ಹುದ್ದೆಗಳನ್ನು ನಿರ್ವಹಿಸುವ ಜೊತೆಗೆ ಬಸದಿ ಸ್ವಚ್ಛತಾ ತಂಡವನ್ನು ಕಟ್ಟಿಕೊಂಡು ಅವಿಭಜಿತ ಜಿಲ್ಲೆಯ ಹಲವು ಬಸದಿಗಳಲ್ಲಿ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಜನಜನಿತರಾಗಿದ್ದಾರೆ.

ಮೂಗೂರು: ಜಿನಾಲಯದ ಮಂಡಲ ಪೂಜೆ ಮಹೋತ್ಸವ

Article Image

ಮೂಗೂರು: ಜಿನಾಲಯದ ಮಂಡಲ ಪೂಜೆ ಮಹೋತ್ಸವ

ಜೈನ ಸಾಹಿತ್ಯ ಸಂಸ್ಕೃತಿ ಆಚಾರ ವಿಚಾರ ಸಹಿತ ಜೈನ ತತ್ತ್ವಗಳು ವಿಶ್ವದ ಶಾಂತಿಗೆ ಕಾರಣೀಯವಾಗಿದೆ ಎಂದು ಪೂಜ್ಯರು ಮೂಗೂರು ಜಿನಾಲಯದ ಮಂಡಲ ಪೂಜೆ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ಮಾಡುತ್ತ ತಿಳಿಸಿದರು. ಗಂಗರು ಜೈನ ಸಂಸ್ಕೃತಿಯ ಪ್ರದೀಪಕರು, ಅವರ ಕಾರ್ಯ ಬಾಹುಳ್ಯ ಮಂಡ್ಯ, ಮೈಸೂರು,ಚಾಮರಾಜನಗರ ಕೋಲಾರ ವ್ಯಾಪ್ತಿಯಲ್ಲಿ ಇದೆ. ಅವರ ಕಾಲದ ಸಾಹಿತ್ಯ, ಕಲೆ ಸಂಸ್ಕೃತಿ ಇಂದಿಗೂ ಇದೆ.. ಮೂಗೂರು ಬಸದಿ ಸೇವಾ ಟ್ರಸ್ಟ್ ಈ ಬಸದಿ ಪುನರ್ ನಿರ್ಮಾಣ ಕಾರ್ಯದಲ್ಲಿ ಅಹರ್ನಿಶಿ ದುಡಿದಿದ್ದಾರೆ ಅವರಿಗೆ ಮಂಗಳವಾಗಲಿ. ಜೈನ ಕ್ಷೇತ್ರ ದರ್ಶನವನ್ನು ಮಾತ್ರ ಶ್ರಾವಕರು ಮಾಡಬೇಕು ದೇವ, ಗುರು, ಶಾಸ್ತ್ರ ಪೂಜೆ ಸದಾ ಶ್ರಾವಕರು ಮಾಡಬೇಕು ಎಂದು ಕರೆ ನೀಡಿದರು. ಬಸದಿ ದರ್ಶನದಿಂದ ಶಾಂತಿ ಪ್ರಾಪ್ತಿ: ಡಾ. ಮೋಹನ ಶಾಸ್ತ್ರಿ ಆತ್ಮನಿಗೆ ಶಾಂತಿ ನೀಡುವ ತಾಣ ಜೈನ ಬಸದಿ ಆದ್ದರಿಂದ ನಿತ್ಯ ಭಗವಂತನ ದರ್ಶನ ಮಾಡಬೇಕು ಅರಿಹಂತ ಭಗವಾನರ ಪೂಜೆ ಆದಮೇಲೆ ಯಕ್ಷ ಯಕ್ಷಿ ಪೂಜೆ ಮಾಡಬೇಕು. ತ್ರಿಕರಣ ಶುದ್ಗಿಯಿಂದ ಮಂದಿರ ದರ್ಶನ ಮಾಡಬೇಕು. ಸಾವಿರಾರು ವರ್ಷಗಳಿಂದ ಇರುವ ಬಸದಿ ಸಂರಕ್ಷಣೆ ಮಾಡಬೇಕು ಇತಿಹಾಸ ಗ್ರಂಥಸ್ಥವಾಗಬೇಕು ಜೈನರಾಗಿ ಹುಟ್ಟುವುದೇ ಮಹಾ ಭಾಗ್ಯ ಅದನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು ಅಧ್ಯಕ್ಷತೆಯನ್ನು ಮೂಗೂರು ಬಸದಿ ದೇವರ ಗುಡಿ ಟ್ರಸ್ಟ್ ಅಧ್ಯಕ್ಷೆ ಶ್ರಾವಿಕ ರತ್ನ ಶೀಲಾ ಅನಂತರಾಜ್ ಅವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಚಾರುಣುಡಿಗಳನ್ನಾಡಿದರು. ವೇದಿಕೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ನಿರ್ಮಲ ಕುಮಾರ ಮತ್ತು ಶ್ರಾವಕ ಶ್ರೇಷ್ಠ ಬ್ರಹ್ಮದೇವ ಬೆಂಗಳೂರು ಉಪಸ್ಥಿತರಿದ್ದರು. ಮಂಡಲ ಪೂಜೆ ಮಹೋತ್ಸವದ ಪೂಜಾ ವಿಧಿ ವಿಧಾನವನ್ನು ಪ್ರತಿಷ್ಠಾಚಾರ್ಯ ಎಸ್ ಎಂ ಸನ್ಮತಿಕುಮಾರ ಶಾಸ್ತ್ರಿ ವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಸ್ವಪ್ನ ಲಕ್ಷ್ಮೀಶ ಬಾಬು ಮಾಡಿದ್ದರು. ಚಾಮರಾಜನಗರ, ಮೈಸೂರು, ಮಂಡ್ಯ ಶ್ರಾವಕ ಶ್ರಾವಿಕೆಯರು ಈ ಕಾರ್ಯಕ್ರಮದಲ್ಲಿ ಬಾಗಿಗಳಾಗಿದ್ದರು.

ಮೂಗೂರು: ಜಿನಾಲಯದ ಮಂಡಲ ಪೂಜೆ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭ

Article Image

ಮೂಗೂರು: ಜಿನಾಲಯದ ಮಂಡಲ ಪೂಜೆ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭ

ಜೈನ ತತ್ತ್ವಗಳು ವಿಶ್ವಕ್ಕೆ ಶಾಂತಿಯ ಶ್ರೀ ರಕ್ಷೆ: ಪರಮ ಪೂಜ್ಯ ಸ್ವಸ್ತಿಶ್ರೀ ಭುವನಕೀರ್ತಿ ಭಟ್ಟಾರಕ ಮಹಾ ಸ್ವಾಮಿಗಳು ಪೀಠಾಧ್ಯಕ್ಷರು ಶ್ರೀ ಕ್ಷೇತ್ರ ಕನಕಗಿರಿ: ಜೈನ ಸಾಹಿತ್ಯ ಸಂಸ್ಕೃತಿ ಆಚಾರ ವಿಚಾರ ಸಹಿತ ಜೈನ ತತ್ತ್ವಗಳು ವಿಶ್ವದ ಶಾಂತಿಗೆ ಕಾರಣೀಯವಾಗಿದೆ ಎಂದು ಪೂಜ್ಯರು ಮೂಗೂರು ಜಿನಾಲಯದ ಮಂಡಲ ಪೂಜೆ ಮಹೋತ್ಸವದ ನಿಮಿತ್ತ ನಡೆದ ಧಾರ್ಮಿಕ ಸಮಾರಂಭದಲ್ಲಿ ಆಶೀರ್ವಚನ ಮಾಡುತ್ತ ತಿಳಿಸಿದರು. ಗಂಗರು ಜೈನ ಸಂಸ್ಕೃತಿಯ ಪ್ರದೀಪಕರು, ಅವರ ಕಾರ್ಯ ಬಾಹುಳ್ಯ ಮಂಡ್ಯ, ಮೈಸೂರು, ಚಾಮರಾಜನಗರ ಕೋಲಾರ ವ್ಯಾಪ್ತಿಯಲ್ಲಿ ಇದೆ. ಅವರ ಕಾಲದ ಸಾಹಿತ್ಯ, ಕಲೆ ಸಂಸ್ಕೃತಿ ಇಂದಿಗೂ ಇದೆ.. ಮೂಗೂರು ಬಸದಿ ಸೇವಾ ಟ್ರಸ್ಟ್ ಈ ಬಸದಿ ಪುನರ್ ನಿರ್ಮಾಣ ಕಾರ್ಯದಲ್ಲಿ ಅಹರ್ನಿಶಿ ದುಡಿದಿದ್ದಾರೆ ಅವರಿಗೆ ಮಂಗಳವಾಗಲಿ. ಜೈನ ಕ್ಷೇತ್ರ ದರ್ಶನವನ್ನು ಮಾತ್ರ ಶ್ರಾವಕರು ಮಾಡಬೇಕು ದೇವ, ಗುರು, ಶಾಸ್ತ್ರ ಪೂಜೆ ಸದಾ ಶ್ರಾವಕರು ಮಾಡಬೇಕು ಎಂದು ಕರೆ ನೀಡಿದರು. ಬಸದಿ ದರ್ಶನದಿಂದ ಶಾಂತಿ ಪ್ರಾಪ್ತಿ: ಡಾ. ಮೋಹನ ಶಾಸ್ತ್ರಿ ಆತ್ಮನಿಗೆ ಶಾಂತಿ ನೀಡುವ ತಾಣ ಜೈನ ಬಸದಿ ಆದ್ದರಿಂದ ನಿತ್ಯ ಭಗವಂತನ ದರ್ಶನ ಮಾಡಬೇಕು ಅರಿಹಂತ ಭಗವಾನರ ಪೂಜೆ ಆದಮೇಲೆ ಯಕ್ಷ ಯಕ್ಷಿ ಪೂಜೆ ಮಾಡಬೇಕು. ತ್ರಿಕರಣ ಶುದ್ಗಿಯಿಂದ ಮಂದಿರ ದರ್ಶನ ಮಾಡಬೇಕು. ಸಾವಿರಾರು ವರ್ಷಗಳಿಂದ ಇರುವ ಬಸದಿ ಸಂರಕ್ಷಣೆ ಮಾಡಬೇಕು ಇತಿಹಾಸ ಗ್ರಂಥಸ್ಥವಾಗಬೇಕು ಜೈನರಾಗಿ ಹುಟ್ಟುವುದೇ ಮಹಾ ಭಾಗ್ಯ ಅದನ್ನು ಸರಿಯಾಗಿ ಸದುಪಯೋಗ ಮಾಡಿಕೊಳ್ಳಬೇಕು ಎಂದರು ಅಧ್ಯಕ್ಷತೆಯನ್ನು ಮೂಗೂರು ಬಸದಿ ದೇವರ ಗುಡಿ ಟ್ರಸ್ಟ್ ಅಧ್ಯಕ್ಷೆ ಶ್ರಾವಿಕ ರತ್ನ ಶೀಲಾ ಅನಂತರಾಜ್ ಅವರು ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕ ಚಾರುಣುಡಿಗಳನ್ನಾಡಿದರು. ವೇದಿಕೆಯಲ್ಲಿ ಟ್ರಸ್ಟ್ ಉಪಾಧ್ಯಕ್ಷ ನಿರ್ಮಲ ಕುಮಾರ ಮತ್ತು ಶ್ರಾವಕ ಶ್ರೇಷ್ಠ ಬ್ರಹ್ಮದೇವ ಬೆಂಗಳೂರು ಉಪಸ್ಥಿತರಿದ್ದರು. ಮಂಡಲ ಪೂಜೆ ಮಹೋತ್ಸವದ ಪೂಜಾ ವಿಧಿ ವಿಧಾನವನ್ನು ಪ್ರತಿಷ್ಠಾಚಾರ್ಯ ಎಸ್ ಎಂ ಸನ್ಮತಿಕುಮಾರ ಶಾಸ್ತ್ರಿ ವಹಿಸಿದ್ದರು ಕಾರ್ಯಕ್ರಮದ ನಿರೂಪಣೆಯನ್ನು ಸ್ವಪ್ನ ಲಕ್ಷ್ಮೀಶ ಬಾಬು ಮಾಡಿದ್ದರು. ಚಾಮರಾಜನಗರ, ಮೈಸೂರು, ಮಂಡ್ಯ ಶ್ರಾವಕ ಶ್ರಾವಿಕೆಯರು ಈ ಕಾರ್ಯಕ್ರಮದಲ್ಲಿ ಬಾಗಿಗಳಾಗಿದ್ದರು.

ರಾಷ್ಟ್ರ ಯುವ ವಾಲಿಬಾಲ್ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯ ತಂಡಕ್ಕೆ ಲಾಸ್ಯ ಆಯ್ಕೆ

Article Image

ರಾಷ್ಟ್ರ ಯುವ ವಾಲಿಬಾಲ್ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯ ತಂಡಕ್ಕೆ ಲಾಸ್ಯ ಆಯ್ಕೆ

ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪ್ರಥಮ ವಾಣಿಜ್ಯ ಪದವಿ ವಿದ್ಯಾರ್ಥಿನಿ ಲಾಸ್ಯ ಕರ್ನಾಟಕ ರಾಜ್ಯ ವನಿತೆಯರ ಯುವ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಇವಳು ಉಜಿರೆಯ ಉದ್ಯಮಿ ಸಿದ್ಧಾಂತಕೀರ್ತಿರಾಜ ಮತ್ತು ಭಾಗ್ಯಶ್ರೀ ದಂಪತಿಯ ಪುತ್ರಿ. ಇವಳು ಸಿದ್ದವನದ ಸಂತ ಜೈನ ಸಂಸ್ಕೃತ ವಿದ್ವಾoಸರಾಗಿದ್ದ ನ್ಯಾಯತೀರ್ಥ ಜಿನರಾಜ ಶಾಸ್ತ್ರೀಗಳ ಮರಿಮಗಳು, ಖ್ಯಾತ ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಯಕ್ಷಗಾನ ಕಲಾವಿದರಾಗಿದ್ದ ದಿ. ನರೇಂದ್ರಕುಮಾರ್ ರ ಮೊಮ್ಮಗಳು, ಪ್ರಸ್ತುತ ಪೆರಿಂಜೆ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ರಾಜೇಂದ್ರ ಅವರ ಸೊಸೆ. ಕಳೆದ ಐದು ವರ್ಷಗಳಿಂದ ಕಾಲೇಜಿನ ದೈಹಿಕ ಶಿಕ್ಷಕರಾದ ರಮೇಶ್ ಅವರಲ್ಲಿ ಲಾಸ್ಯ ನಿರಂತರ ತರಬೇತಿ ಪಡೆಯುತ್ತಿದ್ದಾಳೆ.

ಧಾರವಾಡ: ಜೆಎಸ್ಎಸ್ ಸಭಾಭವನದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

Article Image

ಧಾರವಾಡ: ಜೆಎಸ್ಎಸ್ ಸಭಾಭವನದಲ್ಲಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ, ಜೈನಶಾಸ್ತ್ರ ಅಧ್ಯಯನ ಪೀಠ ಮತ್ತು ಜೆ. ಎಸ್. ಎಸ್ ಶ್ರೀ ಮಂಜುನಾಥೇಶ್ವರ ಸ್ನಾತಕ ಮತ್ತು ಸ್ನಾತಕೋತ್ತರ ಅಧ್ಯಯನ ಸಂಸ್ಥೆ ಧಾರವಾಡ ಇವುಗಳ ಸಂಯುಕ್ತ ಆಶ್ರಯದಲ್ಲಿ ದಿನಾಂಕ 12-3-2026 ರಂದು ಗುರುವಾರ ಧಾರವಾಡ ಜೆ.ಎಸ್.ಎಸ್.ಡಿ.ಆರ್.ಎಚ್. ಸಭಾ ಭವನದಲ್ಲಿ "ಸಾಹಿತ್ಯ ಸಂಸ್ಕೃತಿ" ಕುರಿತಾಗಿ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಏರ್ಪಡಿಸಲಾಗಿದೆ. ಮುಂಜಾನೆ 10.30 ಗಂಟೆಗೆ ಧಾರವಾಡ ಜೆ ಎಸ್ ಎಸ್ ಸಂಸ್ಥೆಯ ಕಾರ್ಯದರ್ಶಿ ಡಾ.ಅಜಿತಪ್ರಸಾದ ಇವರ ಅಧ್ಯಕ್ಷತೆಯಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಮಾನ್ಯ ಉಪಕುಲಪತಿ ಡಾ. ಎಎಮ್ ಖಾನ್ ಇವರು ಉದ್ಘಾಟಿಸಲಿದ್ದಾರೆ. ಡಾ. ಜೆ.ಎಮ್. ನಾಗಯ್ಯ ನಿವೃತ್ತ ಪ್ರಾಧ್ಯಾಪಕರು ಕ ವಿ ವಿ ಇವರು ದಿಕ್ಸೂಚಿ ನುಡಿಗಳನ್ನಾಡುವರು. 11.30 ಗಂಟೆಗೆ ಮೊದಲ ಗೋಷ್ಠಿ "ಕನ್ನಡ ಸಾಹಿತ್ಯಕ್ಕೆ ರನ್ನ ಕವಿಯ ಕೊಡುಗೆ" ವಿಷಯವಾಗಿ ಹಿರಿಯ ಸಾಹಿತಿ ನಿವೃತ್ತ ಪ್ರಾಧ್ಯಾಪಕರಾದ ಡಾ. ವೈ ಎಂ ಭಜಂತ್ರಿ ಇವರು ಉಪನ್ಯಾಸ ನೀಡಲಿದ್ದು ಅಧ್ಯಕ್ಷತೆಯನ್ನು ಖ್ಯಾತ ಶಾಸನ ತಜ್ಞರು ಹಿರಿಯ ಸಾಹಿತಿ ಹನುಮಾಕ್ಷಿ ಗೋಗಿ ವಹಿಸುವರು. ಊಟದ ವಿರಾಮದ ನಂತರ ಮಧ್ಯಾನ್ಹ 2 ಗಂಟೆಗೆ ಎರಡನೇ ಗೋಷ್ಠಿ "ಸರ್ವ ಧರ್ಮ ಸಮನ್ವಯ ಕೇಂದ್ರ : ಶ್ರೀ ಕ್ಷೇತ್ರ ಧರ್ಮಸ್ಥಳ " ವಿಷಯವಾಗಿ ರಂಗ ಕರ್ಮಿ ಸಾಹಿತಿ ಡಾ. ಶಶಿಧರ ನರೇಂದ್ರ ಮಾತನಾಡುವರು. ಅಧ್ಯಕ್ಷತೆಯನ್ನು ಸಾಹಿತಿ ಪ್ರಾಧ್ಯಾಪಕಿ ಡಾ. ವೀಣಾಯಲಿಗಾರ ವಹಿಸುವರು. ಮಧ್ಯಾನ್ಹ 3.30 ಗಂಟೆಗೆ ಜನತಾ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅರಿಹಂತಪ್ರಸಾದ ಇವರ ಗೌರವ ಉಪಸ್ಥಿತಿಯಲ್ಲಿ ಸಮಾರೋಪ ಸಮಾರಂಭ ಜರುಗಲಿದ್ದು ಹಿರಿಯ ಸಾಹಿತಿ ಪ್ರೊ ಕೆ. ಎಸ್. ಕೌಜಲಗಿ ಇವರ ಸಮಾರೋಪ ನುಡಿಗಳೊಂದಿಗೆ ಕಾರ್ಯಕ್ರಮ ಮುಕ್ತಾಯಗೊಳ್ಳುವುದು. ಇದೇ ಸಂದರ್ಭದಲ್ಲಿ 'ಹಳಗನ್ನಡ ಸಾಹಿತ್ಯಕ್ಕೆ ಜೈನ ಕವಿಗಳ ಕೊಡುಗೆ 'ಎಂಬ ವಿಷಯ ಕುರಿತು ಆಯೋಜಿಸಿದ್ದ ಲೇಖನ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ನೀಡಲಾಗುವುದು. ಕಾರ್ಯಕ್ರಮದಲ್ಲಿ ಜೈನಶಾಸ್ತ್ರ ಅಧ್ಯಯನ ಪೀಠದ ಸಂಯೋಜಕ ಡಾ. ಜಿನದತ್ತ ಹಡಗಲಿ ಹಾಗೂ ಸಲಹಾ ಸಮಿತಿ ಸದಸ್ಯರಾದ ಧರಣೇಂದ್ರ ಜವಳಿ, ಶಾಂತಿನಾಥ ಹೊತಪೇಟಿ, ಧನಪಾಲ ಮುನ್ನೊಳ್ಳಿ, ಡಾ. ರಾಯಪ್ಪ ಬಾಳಿಕಾಯಿ ಹಾಗೂ ಶಾಂತರಾಜ ಮಲ್ಲಸಮುದ್ರ ಉಪಸ್ಥಿತರಿರುವರು. ಅತ್ಯಂತ ವಿದ್ವತ್ಪೂರ್ಣ ಈ ವಿಚಾರ ಸಂಕಿರಣದಲ್ಲಿ ತಾವುಗಳು ತಪ್ಪದೆ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಲು ಕೋರಲಾಗಿದೆ. ವರದಿ: ಎಸ್ ಆರ್ ಮಲ್ಲಸಮುದ್ರ

ಗೃಹರಕ್ಷಕ ಪಾಂಡುರಾಜ್‌ಗೆ ಮುಖ್ಯಮಂತ್ರಿ ಚಿನ್ನದ ಪದಕ

Article Image

ಗೃಹರಕ್ಷಕ ಪಾಂಡುರಾಜ್‌ಗೆ ಮುಖ್ಯಮಂತ್ರಿ ಚಿನ್ನದ ಪದಕ

ಮೂಡುಬಿದಿರೆ: ಇಲ್ಲಿನ ಮೂಡುಬಿದಿರೆ ತಾಲೂಕು ಗೃಹರಕ್ಷಕ ದಳ ಘಟಕದ ಹಿರಿಯ ಗೃಹ ರಕ್ಷಕ, ಘಟಕಾಧಿಕಾರಿಯಾಗಿಯೂ ಸೇವೆ ಸಲ್ಲಿಸಿರುವ ಪಾ೦ಡುರಾಜ ಅವರ ಸೇವೆ ಗುರುತಿಸಿ 2024-25ನೇ ಸಾಲಿನ ಮುಖ್ಯಮಂತ್ರಿ ಚಿನ್ನದ ಪದಕ ಗೌರವ ನೀಡಲಾಗಿದೆ. ಕರ್ನಾಟಕ ರಾಜ್ಯ ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಗೃಹ ರಕ್ಷಕ ದಳ ಪೌರ ರಕ್ಷಣೆ ಮತ್ತು ಎಸ್.ಡಿ.ಆರ್.ಎಫ್ ಅವರಿಗೆ ನೀಡಲಾಗುವ ಗೌರವಕ್ಕೆ ದ.ಕ ಜಿಲ್ಲೆಯಿಂದ ಏಕೈಕ ಪ್ರತಿನಿಧಿಯಾಗಿ ಪಾಂಡುರಾಜ ಈ ಗೌರವ ಸ್ವೀಕರಿಸಿದ್ದಾರೆ. ಬೆಂಗಳೂರಿನ ಆ‌ರ್.ವಿ. ಮುಂಡೂರ್‌ ಅಗ್ನಿಶಾಮಕ ತರಬೇತಿ ಅಕಾಡೆಮಿ ಆವರಣದಲ್ಲಿ ಕಳೆದ ಮಂಗಳವಾರ ಜರಗಿದ ಸಮಾರಂಭದಲ್ಲಿ ರಾಜ್ಯ ಗೃಹ ಸಚಿವ ಡಾ. ಪರಮೇಶ್ವರ್‌ಸೇವಾಸಾಧಕರಿಗೆ ಪದಕಪ್ರದಾನ ಮಾಡಿ ಗೌರವಿಸಿದರು. ಗೃಹರಕ್ಷಕರಾಗಿ 1986 ರಿಂದ ಹಾಗೂ ಘಟಕಾಧಿಕಾರಿಯಾಗಿ 2015ರಿಂದ 2024 ರ ಅವಧಿಗೆ ಒಟ್ಟು 38 ವರ್ಷಗಳ ಕರ್ತವ್ಯ ನಿರ್ವಹಿಸಿದ್ದಾರೆ.

ರತ್ನತ್ರಯ ಜೈನ ಮಿಲನ್ ಸಭೆ

Article Image

ರತ್ನತ್ರಯ ಜೈನ ಮಿಲನ್ ಸಭೆ

ದಿನಾಂಕ 06-03-2026ಶುಕ್ರವಾರದಂದು ರತ್ನತ್ರಯ ಜೈನ ಮಿಲನ್ ಆನ್‌ಲೈನ್ ಸಭೆ ಜರುಗಿತು. ಮುಖ್ಯ ಅತಿಥಿಗಳಾಗಿ ತ್ರಿಶಲಾ ಬ್ರಹ್ಮಯ್ಯ ಹಾಗೂ ರತ್ನತ್ರಯ ಜೈನ್ ಮಿಲನ್ ಅಧ್ಯಕ್ಷರಾದ ನವೀನ್ ಕುಮಾರ್ ಉಪಸ್ಥಿತರಿದ್ದರು. ಸಾಮೂಹಿಕ ಪಂಚ ನಮಸ್ಕಾರ ಪಠಣೆ, ಅತಿಥಿಗಳಿಂದ ದೀಪ ಪ್ರಜ್ವಲನೆ ಹಾಗೂ ಭಾಮಾ ಅವರ ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ರಾಣಿ ಪ್ರಫುಲ್ಲ ಅವರು ಸ್ವಾಗತ ಭಾಷಣ ಮಾಡಿದರು. ಸುನೀತಾ ಸುಂದರರಾಜ್ ಅವರು ರತ್ನತ್ರಯ ಮಿಲನಿನ ಉದ್ದೇಶವನ್ನು ತಿಳಿಸಿದರು. ಪದ್ಮ ಸೂರಿ ಅವರು ಪರ್ವವಾಚನ ಮಾಡಿದರು. ಶ್ವೇತಾ ನವೀನ್ ಅವರು ಹಿಂದಿನ ಸಭೆಯ ವರದಿಯನ್ನು ಪ್ರಸ್ತುತಪಡಿಸಿದರು. ಶೋಭಿತಾ ನವೀನ್ ಅವರು ಮಾರ್ಚ್ ತಿಂಗಳಲ್ಲಿ ವಿವಾಹ ವಾರ್ಷಿಕ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡ ರತ್ನತ್ರಯ ಮಿಲನ್ ಸದಸ್ಯರಿಗೆ ಶುಭ ಕೋರಿದರು. ಚಂದನ ಸುರೇಂದ್ರ ಅವರು ಜಿನ ಭಕ್ತಿ ಗೀತೆಯನ್ನು ಹಾಡಿದರು. ಮಹಾವೀರ ಕುಮಾರ್ ಅವರು ಅತಿಥಿಗಳ ಪರಿಚಯ ಮಾಡಿದರು. ಮುಖ್ಯ ಅತಿಥಿಗಳಾಗಿ‌ ಆಗಮಿಸಿದ್ದ ತ್ರಿಶಲಾ ಬ್ರಹ್ಮಯ್ಯ ಅವರು ‘ಬದಲಾಗುತ್ತಿರುವ ಸಮಾಜದಲ್ಲಿ ಜೈನ ಧರ್ಮ’ ಈ ಕುರಿತು ಅತ್ಯಂತ ಉಪಯುಕ್ತ ಉಪನ್ಯಾಸ ಮಾಡಿದರು. ನವೀನ್ ಕುಮಾರ್ ಗುಬ್ಬಿಯವರು ಅಧ್ಯಕ್ಷರ ನುಡಿಗಳನ್ನಾಡಿದರು. ಕಾರ್ಯಕ್ರಮದ ನಿರೂಪಣೆಯನ್ನು ಅನಂತರವರು ನಡೆಸಿಕೊಟ್ಟರು. ಉಷಾ ರಾಣಿ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮವು ಮುಕ್ತಾಯಗೊಂಡಿತು.

ಕರ್ನಾಟಕದಲ್ಲಿ ಜೈನಧರ್ಮದ ಇತಿಹಾಸದ ಕುರಿತು ಸಂಶೋಧನಾ ಪ್ರಬಂಧ ಮಂಡನೆ

Article Image

ಕರ್ನಾಟಕದಲ್ಲಿ ಜೈನಧರ್ಮದ ಇತಿಹಾಸದ ಕುರಿತು ಸಂಶೋಧನಾ ಪ್ರಬಂಧ ಮಂಡನೆ

ಚೆನ್ನೈ, ಫೆಬ್ರವರಿ 28, 2026: ಚೆನ್ನೈನ "ಸಿ.ಪಿ. ರಾಮಸ್ವಾಮಿ ಅಯ್ಯರ್ ಇಂಡೋಲಾಜಿಕಲ್ ರಿಸರ್ಚ್ ಇನ್ಸ್ಟಿಟ್ಯೂಟ್, ಚೆನ್ನೈ" ಮತ್ತು ಭಾರತ ಸರ್ಕಾರದ ಶಿಕ್ಷಣ ಸಚಿವಾಲಯದ ಅಧೀನದಲ್ಲಿ ಸ್ಥಾಪಿತವಾದ ಸ್ವಾಯತ್ತ ಸಂಸ್ಥೆಯಾದ ನವದೆಹಲಿಯ "ಇಂಡಿಯನ್ ಕೌನ್ಸಿಲ್ ಆಫ್ ಹಿಸ್ಟಾರಿಕಲ್ ರಿಸರ್ಚ್" (ICHR) ಸಂಯುಕ್ತವಾಗಿ ಸಿ.ಪಿ.ರಾಮಸ್ವಾಮಿ ಅಯ್ಯರ್ ಫೌಂಡೇಶನ್‌ನಲ್ಲಿ 27–28 ಫೆಬ್ರವರಿ 2026 ರಂದು “ದಕ್ಷಿಣ ಭಾರತದಲ್ಲಿ ಜೈನಧರ್ಮ – ಇತಿಹಾಸ, ಕಲೆ ಮತ್ತು ಸಂಸ್ಕೃತಿ” ಎಂಬ ರಾಷ್ಟ್ರೀಯ ಸಮ್ಮೇಳನವನ್ನು ಆಯೋಜಿಸಿತ್ತು. ಈ ರಾಷ್ಟ್ರೀಯ ಸಮ್ಮೇಳನದಲ್ಲಿ “ಕರ್ನಾಟಕದಲ್ಲಿ ಜೈನಧರ್ಮದ ಇತಿಹಾಸ” ವಿಷಯದ ಕುರಿತು ಸಂಶೋಧನಾ ಪ್ರಬಂಧವನ್ನು ಜೈನ ಸಂಶೋಧಕ ಬೆಂಗಳೂರಿನ ನಿತಿನ್ ಹೆಚ್.ಪಿ.ರವರು ಮಂಡಿಸಿದರು. ಜೈನ್ ಹೆರಿಟೇಜ್ ಸೆಂಟರ್ಸ್.ಕಾಂ - www.jainheritagecentres.com ಅಂತರ್ಜಾಲತಾಣದ ಸಂಸ್ಥಾಪಕ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕರು ಹಾಗೂ ವಿಪ್ರೋ ಕಂಪೆನಿಯಲ್ಲಿ ಮಾರ್ಕೆಟಿಂಗ್ ಟೆಕ್ನಾಲಜಿ ಹಾಗೂ ಡಿಜಿಟಲ್ ಮಾರ್ಕೆಟಿಂಗ್ ವಿಭಾಗದ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿರುವ ನಿತಿನ್‌ರವರು ಶ್ರೀ ಭದ್ರಬಾಹು ಮುನಿಗಳ ಆಗಮನದಿಂದ ಆರಂಭವಾದ ಕರ್ನಾಟಕದ ಜೈನಧರ್ಮದ ಶಾಸನೋಕ್ತ ಇತಿಹಾಸ, ಮುನಿ ಹಾಗೂ ಭಟ್ಟಾರಕ ಪರಂಪರೆ, ಜೈನಧರ್ಮಕ್ಕೆ ರಾಜಮನೆತನಗಳ ಪೋಷಣೆ, ಸಾಹಿತ್ಯಿಕ ಕೊಡುಗೆ, ಕರ್ನಾಟಕದಲ್ಲಿ ಜೈನಧರ್ಮಕ್ಕೆ ಅನ್ಯಧರ್ಮಗಳಿಂದುಂಟಾದ ದಾಳಿಗಳು, ಬಸದಿಗಳು ಅವುಗಳ ಬೆಳವಣಿಗೆ ಮತ್ತು ವಾಸ್ತುಶಿಲ್ಪ ಹೀಗೆ ಇನ್ನೂ ಹಲವು ವಿಷಯಗಳನ್ನೊಳಗೊಂಡಂತೆ ವಿಸ್ತೃತವಾದ ಸಂಶೋಧನಾ ಪ್ರಬಂಧವನ್ನು ಮಂಡಿಸಿದರು. ಭಾರತದಾದ್ಯಂತದಿಂದ 23 ಸಂಶೋಧಕರು ವಿವಿಧ ವಿಷಯಗಳ ಕುರಿತು ಸಂಶೋಧನಾ ಪ್ರಬಂಧಗಳನ್ನು ಸಮ್ಮೇಳನದಲ್ಲಿ ಮಂಡಿಸಿದರು.

ಪುದುವೆಟ್ಟು: ನಿಡ್ವಾಳ ಬಸದಿ ಪಂಚಕಲ್ಯಾಣ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಸಮಾಪನ

Article Image

ಪುದುವೆಟ್ಟು: ನಿಡ್ವಾಳ ಬಸದಿ ಪಂಚಕಲ್ಯಾಣ ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಸಮಾಪನ

ಉಜಿರೆ: ಪುದುವೆಟ್ಟು ಗ್ರಾಮದ ನಿಡ್ವಾಳ ಬಸದಿಯಲ್ಲಿ ಭಾನುವಾರ ಕೇವಲಜ್ಞಾನ ಕಲ್ಯಾಣ, ಸಮವಸರಣ ಪೂಜೆ, ಭವ್ಯ ಅಗ್ರೋಧಕ ಮೆರವಣಿಗೆ ಬಳಿಕ ಸಹಸ್ರಫಣಿ ಪಾರ್ಶ್ವನಾಥ ಸ್ವಾಮಿ ಮೂರ್ತಿಗೆ ೧೦೦೮ ಕಲಶಗಳಿಂದ ಅಭಿಷೇಕ ಹಾಗೂ ಮಹಾಮಂಗಲಾರತಿಯೊಂದಿಗೆ ಪಂಚಕಲ್ಯಾಣ ಮಹೋತ್ಸವ ಮತ್ತು ನೂತನ ಬಿಂಬ ಪ್ರತಿಷ್ಠಾ ಮಹೋತ್ಸವ ಸಮಾಪನಗೊಂಡಿತು. ಪೂಜ್ಯ ಏಲಾಚಾರ್ಯ ಪ್ರಸಂಗ ಸಾಗರ ಮುನಿಮಹಾರಾಜರು ಮತ್ತು ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕರ ಭಟ್ಟಾರಕರ ದಿವ್ಯ ಉಪಸ್ಥಿತಿಯಲ್ಲಿ ಕಾರ್ಯಕ್ರಮಗಳು ನಡೆದವು. ತೀರ್ಥಂಕರರು ತಮ್ಮ ದಿವ್ಯಧ್ವನಿಯಿಂದ ಉಪದೇಶಾಮೃತ ನೀಡುವ ಧರ್ಮಸಭೆಗೆ ಸಮವಸರಣ ಎನ್ನುತ್ತಾರೆ. ಇಲ್ಲಿ ಸಕಲ ಜೀವಿಗಳಿಗೂ ಧರ್ಮೋಪದೇಶ ಕೇಳುವ ಅವಕಾಶವಿದೆ. ಜೈನರ ಶ್ರದ್ಧಾಕೇಂದ್ರಗಳಾದ ಬಸದಿಗಳು ಸಮವಸರಣದ ಪ್ರತೀಕವಾಗಿವೆ. ಬೆಳ್ತಂಗಡಿ ಬಸದಿಯ ಪ್ರಧಾನ ಅರ್ಚಕರಾದ ಪ್ರತಿಷ್ಠಾಚಾರ್ಯ ಜಯರಾಜ ಇಂದ್ರರು ಮತ್ತು ಧರಣೇಂದ್ರ ಕುಮಾರ್ ಹಾಗೂ ಸ್ಥಳ ಪುರೋಹಿತರಾದ ಶ್ರೀಕೀರ್ತಿ ಇಂದ್ರರು, ಬೈಲಂಗಡಿ ಪೂಜಾ ವಿಧಿ-ವಿಧಾನಗಳನ್ನು ನೆರವೇರಿಸಿದರು. ಧರ್ಮಸ್ಥಳದ ಕೋಟ್ಯಣ್ಣ ಬಂಟರಾದ ಸುರೇಂದ್ರಕುಮಾರ್ ಜೈನ್, ಪಂಚಕಲ್ಯಾಣ ಮಹೋತ್ಸವ ಸಮಿತಿಯ ಅಧ್ಯಕ್ಷ ಡಿ. ಧನಕೀರ್ತಿ ಆರಿಗ, ಉಪಾಧ್ಯಕ್ಷ ಮಹಾವೀರ ಜೈನ್, ಪ್ರಧಾನ ಕಾರ್ಯದರ್ಶಿ ಚಂದ್ರನಾಥ ಜೈನ್, ಸಂಚಾಲಕ ಜಯವರ್ಮ ಕಾಜವ ಮತ್ತು ಕೋಶಾಧಿಕಾರಿ ಅಜಯ್ ಕುಮಾರ್ ಹಾಗೂ ಸರ್ವಸದಸ್ಯರು ಮತ್ತು ಊರಿನ ಶ್ರಾವಕ-ಶ್ರಾವಕಿಯರು ಉಪಸ್ಥಿತರಿದ್ದು ಸಮಾರಂಭದ ಯಶಸ್ವಿಗೆ ಸಹಕರಿಸಿದರು

ಡಾ. ಜಿನೇಶ್ ಬಹುಬಲಿ ನಾಗವಿ ಅವರಿಗೆ: ಬೆಸ್ಟ್ ಆರ್ಟಿಕಲ್ ಅವಾರ್ಡ್‌

Article Image

ಡಾ. ಜಿನೇಶ್ ಬಹುಬಲಿ ನಾಗವಿ ಅವರಿಗೆ: ಬೆಸ್ಟ್ ಆರ್ಟಿಕಲ್ ಅವಾರ್ಡ್‌

ಅಸೋಸಿಯೇಷನ್ ಆಫ್ ಫಾರ್ಮಾಟಿಕಲ್ ಟೀಚರ್ಸ್‌ ಆಫ್‌ ಇಂಡಿಯಾ (APTI) ಸಂಸ್ಥೆಯು ಡಾ. ಜಿನೇಶ್ ಬಹುಬಲಿ ನಾಗವಿ ಅವರಿಗೆ ಶ್ರೀ ಇಶ್ವರ್ ಎನ್. ಹುಕ್ಕೇರಿ ಮೆಮೋರಿಯಲ್ ಅವಾರ್ಡ್ - 2025 ಅಡಿಯಲ್ಲಿ ಕ್ಲಿನಿಕಲ್ ಪ್ರಾಕ್ಟಿಸ್ ಕ್ಷೇತ್ರದ “ಬೆಸ್ಟ್ ಆರ್ಟಿಕಲ್ ಅವಾರ್ಡ್‌” ಅನ್ನು ಪ್ರದಾನ ಮಾಡಿದೆ. ಡಾ. ಜಿನೇಶ್‌ ನಾಗವಿ ಅವರು “Assessment of Compliance in Hypertensive and Diabetic Patients at Primary Health Care: A Prospective Study" ಎಂಬ ಸಂಶೋಧನಾ ಲೇಖನವನ್ನು Indian Journal of Pharmacy Practice ಪತ್ರಿಕೆಯಲ್ಲಿ ಪ್ರಕಟಿಸಿದ್ದು, ಈ ಸಂಶೋಧನೆ ಗುಣಮಟ್ಟ, ವೈಜ್ಞಾನಿಕ ಆಳತೆ ಹಾಗೂ ಸಮಕಾಲೀನ ಆರೋಗ್ಯ ಸವಾಲುಗಳಿಗೆ ಹೊಂದಿಕೆಯಾಗಿರುವುದಕ್ಕಾಗಿ ಈ ಗೌರವಕ್ಕೆ ಪಾತ್ರವಾಗಿದೆ. ಈ ಪ್ರಶಸ್ತಿಯನ್ನು 74ನೇ ಇಂಡಿಯನ್ ಫಾರ್ಮಾಸ್ಯೂಟಿಕಲ್ ಕಾಂಗ್ರೆಸ್ (IPC) ಸಮಾವೇಶದ ಸಂದರ್ಭದಲ್ಲಿ, 2025ರ ಡಿಸೆಂಬರ್ 19 ರಿಂದ 21ರವರೆಗೆ ಬೆಂಗಳೂರಿನ ಬೆಂಗಳೂರು ಅಂತಾರಾಷ್ಟ್ರೀಯ ಪ್ರದರ್ಶನ ಕೇಂದ್ರ (BIEC), ಕರ್ನಾಟಕದಲ್ಲಿ ಆಯೋಜಿಸಲಾದ APTI ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪದಾನ ಮಾಡಲಾಯಿತು. ಈ ಗೌರವವು ಸಾಮಾನ್ಯವಾಗಿ ವೈಜ್ಞಾನಿಕ ವಿಶ್ಲೇಷಣೆಯ ಶ್ರೇಷ್ಠತೆ, ಸಂಶೋಧನಾ ನವೀನತೆ ಹಾಗೂ ಪ್ರಸ್ತುತ ಫಾರ್ಮಾಸ್ಯೂಟಿಕಲ್ ಕ್ಷೇತ್ರದ ಅಗತ್ಯಗಳಿಗೆ ಸ್ಪಂದಿಸುವ ಸಂಶೋಧನೆಗಳಿಗೆ ಮಾತ್ರ ನೀಡಲಾಗುತ್ತದೆ. ಈ ಪ್ರಶಸ್ತಿ ದೊರಕಿರುವುದು ಡಾ. ಜಿನೇಶ್ ನಾಗವಿ ಅವರ ಸಂಶೋಧನಾ ಕಾರ್ಯದ ಗುಣಮಟ್ಟ, ವೈಜ್ಞಾನಿಕ ಪುಸ್ತುತಿಕೆಯ ಸ್ಪಷ್ಟತೆ ಹಾಗೂ ತಜ್ಞ ವಿಮರ್ಶಕರ ಸಮಿತಿಯಿಂದ ದೊರೆತ ಉನ್ನತ ಮೌಲ್ಯಮಾಪನವನ್ನು ಪ್ರತಿಬಿಂಬಿಸುತ್ತದೆ. ಡಾ. ಜಿನೇಶ್ ಬಹುಬಲಿ ನಾಗವಿ ಅವರು ಪ್ರಸ್ತುತ ಶಾರದಾ ವಿಲಾಸ್ ಕಾಲೇಜ್ ಆಫ್ ಫಾರ್ಮಸಿ, ಶಾರದಾ ವಿಲಾಸ್ ಎಜುಕೇಶನಲ್ ಇನ್‌ಸ್ಟಿಟ್ಯೂಷನ್ಸ್, ಮೈಸೂರು ಇಲ್ಲಿ ಫಾರ್ಮಾಸ್ಯೂಟಿಕಲ್ ಕೆಮಿಸ್ಟ್ರಿ ವಿಭಾಗದ ಪ್ರಾಧ್ಯಾಪಕರಾಗಿ ಮತ್ತು ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ ಅವರು HESDAR ಸೆಂಟರ್, ಮೈಸೂರುನಲ್ಲಿ ಗೌರವಾನ್ವಿತ ಸಂಯೋಜಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಈ ಸಾಧನ ಡಾ. ಜಿನೇಶ್ ನಾಗವಿ ಅವರ ವೃತ್ತಿಪರ ಜೀವನದಲ್ಲಿ ಮಹತ್ವದ ಮೈಲಿಗಲ್ಲಾಗಿದ್ದು, ಭಾರತೀಯ ಫಾರ್ಮಾಸ್ಯೂಟಿಕಲ್ ಸಂಶೋಧನಾ ಕ್ಷೇತ್ರದಲ್ಲಿ ಅವರ ಕೊಡುಗೆಗೆ ಮತ್ತೊಂದು ಗೌರವವಾಗಿದೆ.

ವೇಣೂರು: ಕಲ್ಲು ಬಸದಿಯ ವಾರ್ಷಿಕ ಮಹೋತ್ಸವ

Article Image

ವೇಣೂರು: ಕಲ್ಲು ಬಸದಿಯ ವಾರ್ಷಿಕ ಮಹೋತ್ಸವ

ಬೆಳ್ತಂಗಡಿ, ಫೆ. 08: ವೇಣೂರು ಕಲ್ಲು ಬಸದಿ ಸಮುಚ್ಚಯದ ಭ|| ೧೦೦೮ ಶ್ರೀ ಶಾಂತಿನಾಥ ಸ್ವಾಮಿ, ಭ| ೧೦೦೮ ಶ್ರೀ ಆದಿನಾಥ ಸ್ವಾಮಿ, ಶ್ರೀ ೨೪ ತೀರ್ಥಂಕರರ ಬಸದಿಗಳ ವಾರ್ಷಿಕ ಮಹೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ನೆರವೇರಿತು. ನಂತರ ಪೂಜ್ಯ ಶ್ರೀಗಳು ಆಶೀರ್ವಚನವನ್ನು ದಯಪಾಲಿಸಿದರು. ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿಯ ಉಪಾಧ್ಯಕ್ಷರು, ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್‌ ಅಜಿಲರು ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಈ ಸಂದರ್ಭದಲ್ಲಿ ಶ್ರೀ ದಿ. ಜೈನ ತೀರ್ಥಕ್ಷೇತ್ರ ಸಮಿತಿಯ ಕಾರ್ಯದರ್ಶಿ ಪ್ರವೀಣ್‌ ಕುಮಾರ್‌ ಇಂದ್ರ, ಸಮಿತಿಯ ಕೋಶಾಧಿಕಾರಿ ಪಿ. ಜಯರಾಜ್ ಕಂಬಳಿ, ಸಮಿತಿಯ ಸರ್ವಸದಸ್ಯರು, ಊರ-ಪರವೂರ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ಸಮಿತಿಯ ಜೊತೆ ಕಾರ್ಯದರ್ಶಿ ಮಹಾವೀರ್‌ ಜೈನ್‌ ಮೂಡುಕೋಡಿರವರು ಸ್ವಾಗತಿಸಿ, ವಂದಿಸಿ, ಕಾರ್ಯಕ್ರಮ ನಿರೂಪಿಸಿದರು. ಮಧ್ಯಾಹ್ನದ ಬಳಿಕ ಪದ್ಮಾವತಿ ದೇವಿಯ ಆರಾಧನ ಪೂರ್ವಕ ಪ್ರತಿಷ್ಠೆ ಮತ್ತು ಸರಸ್ವತಿ ದೇವಿ ಆರಾಧನಾ ಪೂರ್ವಕ ಪ್ರತಿಷ್ಠೆ ನೆರವೇರಿತು. ಶ್ರಾವಕ-ಶ್ರಾವಕಿಯರು ಸಹಕರಿಸಿದರು.

ಪೆನುಕೊಂಡ: ಶ್ರೀ ಪಚ್ಚೆ ಪಾರ್ಶ್ವನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ

Article Image

ಪೆನುಕೊಂಡ: ಶ್ರೀ ಪಚ್ಚೆ ಪಾರ್ಶ್ವನಾಥ ಸ್ವಾಮಿ ಬಸದಿಯ ವಾರ್ಷಿಕೋತ್ಸವ

ಪ್ರಾಚೀನ ಜೈನ ಕ್ಷೇತ್ರ ಹಾಗೂ ಅಮೂಲ್ಯವಾದ ಪಚ್ಚೆ ಪಾರ್ಶನಾಥ ಸ್ವಾಮಿಯ ಮತ್ತು ಮಹಾಮಾತೆ ಪದ್ಮಾವತಿ ದೇವಿಯ ಪರಿವಾರ ದೇವತೆಗಳ ವಿಗ್ರಹಗಳು ಪ್ರತಿಷ್ಠಾಪನೆಯಾಗಿರುವ ಬಸದಿಯಲ್ಲಿ ತಾ. 25-01-2026 ರಂದು ವಾರ್ಷಿಕ ಪೂಜಾ ಮಹೋತ್ಸವವು ತುಂಬಾ ವೈಭವದಿಂದ ನೆರವೇರಿತು. ಸಿಂಹನಗದ್ದೆಯ ಪರಮಪೂಜ್ಯ ಸ್ವಸ್ತಿಶ್ರೀ ಲಕ್ಷ್ಮೀಸೇನಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರ ನೇತೃತ್ವ ಮತ್ತು ಮಾರ್ಗದರ್ಶನದಲ್ಲಿ ನಡೆಯಿತು. ಸಾನಿಧ್ಯ ವಹಿಸಿದ್ದ ಸ್ವಸ್ತಿಶ್ರೀ ಲಕ್ಷ್ಮೀಸೇನಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ ಜೈನ ಪರಂಪರೆಯು ರಾಷ್ಟ್ರೀಯ ಚಿನ್ನೆಗಳ ಆಯ್ಕೆಯ ಮೇಲೆ ಬೀರಿರುವ ಪ್ರಭಾವವನ್ನು ವಿವರಿಸಿ, ನಾವು ಜೈನರು ಎಂಬದನ್ನು ಹೆಮ್ಮೆಯಿಂದ ಹೇಳಿಕೊಳ್ಳುವಂತೆ ಕರೆ ನೀಡಿದರು. ಅಲ್ಲದೆ ಪೂಜ್ಯ ಶಾಂತಿಸಾಗರರು ಹೇಳಿದ ಮಾರ್ಗದಲ್ಲಿ ಬಸದಿಯಲ್ಲಿ ಪೂಜೆಗಳನ್ನು ನಡೆಸುವಂತೆ ಕರೆ ನೀಡಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ವಿದ್ವಾಂಸ ಡಾ. ಎಸ್.ಪಿ. ಪದ್ಮಪ್ರಸಾದ್ ಅವರು ಮಾತನಾಡಿ ಪೆನುಕೊಂಡ ಕ್ಷೇತ್ರದ ಜೈನ ಇತಿಹಾಸದ ಮಹತ್ವವನ್ನು ವಿವರಿಸಿ ಹೇಳಿದರು. ಅವರನ್ನು ಬಸದಿ ಟ್ರಸ್ಟ್ ಪರವಾಗಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಪೆನುಕೊಂಡ ತಾಲ್ಲೂಕಿನ ತಹಶೀಲ್ದಾರ್ ಸ್ವಾತಿರವರನ್ನು ಹಾಗೂ ಮುಖಂಡರಾದ ವೆಂಕಟೇಶ್ವರಲು ರಾವ್ ಮತ್ತು ಸ್ಥಳೀಯ ಮುಖಂಡರನ್ನು ಸನ್ಮಾನಿಸಲಾಯಿತು. ಇದೇ ಸಂದರ್ಭದಲ್ಲಿ ಹಿರಿಯ ಅಭಿಯಂತರರಾದ ಹೆಚ್.ಡಿ. ಪಾರ್ಶ್ವನಾಥರವರನ್ನು ಸನ್ಮಾನಿಸಲಾಯಿತು. ನೂತನವಾಗಿ ಆಯ್ಕೆಗೊಂಡ ಬಸದಿ ಸಮಿತಿಯ ಪದಾಧಿಕಾರಿಗಳು, ಸ್ವಾಮೀಜಿಯವರ ಸಮ್ಮುಖದಲ್ಲಿ ತಾವು ಬಸದಿ ಅಭಿವೃದ್ಧಿಗೆ ತ್ರಿಕರಣಪೂರ್ವಕವಾಗಿ ಶ್ರಮಿಸುವುದಾಗಿ ಪ್ರತಿಜ್ಞೆ ಕೈಗೊಂಡರು. ಆರಂಭದಲ್ಲಿ ಟ್ರಸ್ಟ್ ಅಧ್ಯಕ್ಷರಾದ ಆರ್.ಎ. ಸುರೇಶ್‌ ಕುಮಾ‌ರ್‌ರವರು ಎಲ್ಲರನ್ನು ಸ್ವಾಗತಿಸಿ ಪ್ರಾಸ್ತಾವಿಕ ನುಡಿಗಳನ್ನಾಡಿದರು. 108 ಕಳಶಾಭಿಷೇಕ ಮತ್ತು ಪಂಚಾಮೃತ ಅಭಿಷೇಕಗಳ ಮೂಲಕ ವಾರ್ಷಿಕೋತ್ಸವ ಪೂಜೆಯು ಎಲ್ಲರೂ ಮೆಚ್ಚುವಂತೆ ನಡೆಯಿತು. ಆಗಮಿಸಿದ್ದ ಭಕ್ತರಿಗೆ ಉಪಹಾರ ಮತ್ತು ಭೋಜನ ವ್ಯವಸ್ಥೆಯನ್ನು ಸಮರ್ಪಕವಾಗಿ ಏರ್ಪಡಿಸಲಾಗಿತ್ತು.

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಮಾಧ್ಯಮ ವಕ್ತಾರರಾಗಿ ಸುದೇಶ್ ಕುಮಾರ್ ಮಂಗಳೂರು ಆಯ್ಕೆ

Article Image

ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ ರಾಜ್ಯ ಮಾಧ್ಯಮ ವಕ್ತಾರರಾಗಿ ಸುದೇಶ್ ಕುಮಾರ್ ಮಂಗಳೂರು ಆಯ್ಕೆ

ಮಂಗಳೂರು: ಕನ್ನಡ ನಾಡು-ನುಡಿ ಹಾಗೂ ಶಿಕ್ಷಣದ ಉಳಿವಿಗಾಗಿ ನಿರಂತರವಾಗಿ ಶ್ರಮಿಸುತ್ತಿರುವ 'ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ'ದ ರಾಜ್ಯ ಮಾಧ್ಯಮ ವಕ್ತಾರರಾಗಿ ಹಿರಿಯ ಪತ್ರಕರ್ತ, ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾದ ಸುದೇಶ್ ಕುಮಾರ್ ಮಂಗಳೂರು ಅವರು ಅಧಿಕೃತವಾಗಿ ಆಯ್ಕೆಯಾಗಿದ್ದಾರೆ. ​ಕನ್ನಡ ಮಾಧ್ಯಮ ಶಾಲೆಗಳನ್ನು ಸಬಲೀಕರಣಗೊಳಿಸುವ ಮತ್ತು ಸರ್ಕಾರಿ ಶಾಲೆಗಳ ಹಿತರಕ್ಷಣೆಗಾಗಿ ರಾಜ್ಯಾದ್ಯಂತ ನಡೆಯುತ್ತಿರುವ ಈ ಮಹತ್ವದ ಅಭಿಯಾನಕ್ಕೆ ಮಾಧ್ಯಮಗಳ ಸಹಕಾರ ಮತ್ತು ಸಮರ್ಪಕ ಸಂವಹನದ ಅಗತ್ಯವಿದ್ದು, ಸುದೇಶ್ ಕುಮಾರ್ ಅವರ ಸುದೀರ್ಘ ಪತ್ರಿಕಾ ಅನುಭವವು ಈ ನಿಟ್ಟಿನಲ್ಲಿ ಆನೆಬಲ ತಂದಿದೆ. ​ಆಯ್ಕೆಯ ಪ್ರಮುಖ ಅಂಶಗಳು: ಅನುಭವ: ಪತ್ರಿಕೋದ್ಯಮದಲ್ಲಿ ದಶಕಗಳ ಕಾಲ ಸಕ್ರಿಯರಾಗಿರುವ ಸುದೇಶ್ ಕುಮಾರ್ ಅವರು ಸಮಾಜಮುಖಿ ಕಳಕಳಿಯ ಬರಹಗಳ ಮೂಲಕ ಗುರುತಿಸಿಕೊಂಡಿದ್ದಾರೆ. ​ಜವಾಬ್ದಾರಿ: ಇನ್ನು ಮುಂದೆ ಅಭಿಯಾನದ ಅಧಿಕೃತ ಮಾಹಿತಿ, ಉದ್ದೇಶಗಳು ಮತ್ತು ಮುಂಬರುವ ಯೋಜನೆಗಳನ್ನು ಮಾಧ್ಯಮಗಳಿಗೆ ತಲುಪಿಸುವ ಸಂಪರ್ಕ ಸೇತುವೆಯಾಗಿ ಅವರು ಕಾರ್ಯನಿರ್ವಹಿಸಲಿದ್ದಾರೆ. ​ಸಂಘಟನೆ: ಕರ್ನಾಟಕ ರಾಜ್ಯ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಅವರು ಹೊಂದಿರುವ ಸಂಘಟನಾ ಚತುರತೆಯು ಅಭಿಯಾನವನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸಲು ಸಹಕಾರಿಯಾಗಲಿದೆ. ಕನ್ನಡ ಶಾಲೆಗಳು ನಮ್ಮ ಸಂಸ್ಕೃತಿಯ ತಾಯಿಬೇರುಗಳು. ಈ ಅಭಿಯಾನದ ಮೂಲಕ ಕನ್ನಡ ಶಾಲೆಗಳ ಪುನಶ್ಚೇತನಕ್ಕೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ, ಎಂದು ಸುದೇಶ್ ಕುಮಾರ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ. ಅಭಿಯಾನದ ರಾಜ್ಯ ಪದಾಧಿಕಾರಿಗಳು ಹಾಗೂ ಕನ್ನಡಾಭಿಮಾನಿಗಳು ಸುದೇಶ್ ಕುಮಾರ್ ಅವರ ಈ ನೇಮಕಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ. ಕಾರ್ಯದರ್ಶಿ, ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ, ಕರ್ನಾಟಕ.

ವೇಣೂರು: ಕಲ್ಲು ಬಸದಿಗಳ ವಾರ್ಷಿಕ ಮಹೋತ್ಸವ

Article Image

ವೇಣೂರು: ಕಲ್ಲು ಬಸದಿಗಳ ವಾರ್ಷಿಕ ಮಹೋತ್ಸವ

ವೇಣೂರು: ಇಲ್ಲಿನ ಕಲ್ಲು ಬಸದಿ ಸಮಚ್ಚಯದ ಭ| ೧೦೦೮ ಶ್ರೀ ಶಾಂತಿನಾಥ ಸ್ವಾಮಿ, ಭ| ೧೦೦೮ ಆದಿನಾಥ ಸ್ವಾಮಿ, ಶ್ರೀ ೨೪ ತೀರ್ಥಂಕರರ ಬಸದಿಗಳ ವಾರ್ಷಿಕ ಮಹೋತ್ಸವವು ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಫೆ. ೦೮ರಂದು (ನಾಳೆ) ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಮೂರ್ತಿಯ ಪ್ರತಿಷ್ಠಾ ಮಹೋತ್ಸವದ ನಲ್ವತ್ತನಾಲ್ಕನೆ ವರ್ಧಂತ್ಯುತ್ಸವ

Article Image

ಧರ್ಮಸ್ಥಳದಲ್ಲಿ ಭಗವಾನ್ ಬಾಹುಬಲಿಮೂರ್ತಿಯ ಪ್ರತಿಷ್ಠಾ ಮಹೋತ್ಸವದ ನಲ್ವತ್ತನಾಲ್ಕನೆ ವರ್ಧಂತ್ಯುತ್ಸವ

ಧರ್ಮಸ್ಥಳ : ರತ್ನಗಿರಿಯಲ್ಲಿ ವಿರಾಜಮಾನರಾಗಿರುವ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ಮಂಗಳವಾರ ಬೀಡಿನಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಪಾದಾಭಿಷೇಕ ನಡೆಸಲಾಯಿತು. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಕ್ಷುಲ್ಲಕ ನಿರ್ವಾಣ ಸಾಗರ ಮಹಾರಾಜರು ಪಾದಾಭಿಷೇಕ ಮಾಡಿದರು. ಮೂರ್ತಿಯ ಪ್ರತಿಷ್ಠಾಪಕರಾದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾವರ್ಮ, ಪೂರನ್‌ವರ್ಮ ಪಾದಾಭಿಷೇಕ ನೆರವೇರಿಸಿದರು. ಪೂಜಾಮಂತ್ರ ಪಠಣ, ಬಾಹುಬಲಿ ಸೇವಾ ಸಮಿತಿಯ ಸದಸ್ಯರಿಂದ ಸುಶ್ರಾವ್ಯ ಜಿನಭಕ್ತಿ ಗೀತೆಗಳ ಗಾಯನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು. 216 ಕಲಶಗಳಿಂದ ಜಲಾಭಿಷೇಕದ ಬಳಿಕ ಇಕ್ಷುರಸ (ಕಬ್ಬಿನ ಹಾಲು), ಗಂಧ, ಚಂದನ, ಅರಿಶಿನ, ಕಲ್ಕಚೂರ್ಣ ಮೊದಲಾದ ಮಂಗಲದ್ರವ್ಯಗಳಿಂದ ಪಾದಾಭಿಷೇಕ ನಡೆಯಿತು. ಪೂರ್ಣಕುಂಭದಿಂದ ಪಾದಾಭಿಷೇಕ, ಪುಷ್ಪವೃಷ್ಠಿ, ಮಹಾಮಂಗಳಾರತಿ ಹಾಗೂ ಶಾಂತಿಮಂತ್ರ ಪಠಣದೊಂದಿಗೆ ಸಮಾರಂಭ ಸಮಾಪನಗೊಂಡಿತು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು. ಇಂದಿನ ಮಕ್ಕಳೆ ಮುಂದಿನ ಸಮಾಜದ ಅಮೂಲ್ಯ ಆಸ್ತಿಯಾಗಿದ್ದು ಬಾಲ್ಯದಿಂದಲೆ ಮನೆಯಲ್ಲಿ ಅವರಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಿ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಬೇಕು ಎಂದು ಮಂಗಲಪ್ರವಚನ ನೀಡಿದ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು. ಬಾಹುಬಲಿಯ ತ್ಯಾಗ, ಅಹಿಂಸೆ ವಿಶ್ವಮಾನ್ಯವಾಗಿದೆ. ಮೊದಲು ನಮ್ಮನ್ನು ನಾವು ಅರಿತುಕೊಂಡು, ಜೈನಧರ್ಮದ ಮರ್ಮವನ್ನರಿತು ವೃತ-ನಿಯಮಗಳ ಪಾಲನೆಯೊಂದಿಗೆ ಆದರ್ಶ ಜೀವನ ನಡೆಸಬೇಕು. ಮಕ್ಕಳು ನಮ್ಮ ಉತ್ತರಾಧಿಕಾರಿಗಳಾಗಿದ್ದು ಅವರಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಕ್ಷುಲ್ಲಕ ನಿರ್ವಾಣ ಸಾಗರ ಮಹಾರಾಜರು ಮಾತನಾಡಿ, ಜೈನಧರ್ಮದ ಸಾರವಾದ ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರ್ಯ ಎಂಬ ತ್ರೈರತ್ನಗಳ ಪಾಲನೆಯಿಂದ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದರು. ಕನ್ನಡ ಉಪನ್ಯಾಸಕ ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.

ಪಂಜಿಕಲ್ಲು: ಚತುರ್ಥ ವರ್ಧಂತ್ಯುತ್ವವ

Article Image

ಪಂಜಿಕಲ್ಲು: ಚತುರ್ಥ ವರ್ಧಂತ್ಯುತ್ವವ

ಬಂಟ್ವಾಳ : ಪಂಜಿಕಲ್ಲು ೧೦೦೮ ಭಗವಾನ್‌ ಶ್ರೀ ಆದಿನಾಥ ಸ್ವಾಮಿ ಬಸದಿಯ ಶಿಲಾಮಯ ಪುನರ್‌ ನಿರ್ಮಾಣ ಹಾಗೂ ನೂತನ ಮಾನಸ್ಥಂಭ ಪ್ರತಿಷ್ಟಾಪನಾ ಪಂಚಕಲ್ಯಾಣ ಮಹೋತ್ವವದ ಚತುರ್ಥ ವರ್ಧಂತ್ಯುತ್ವವವು, ಕಾರ್ಕಳ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯದಲ್ಲಿ ಮತ್ತು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ದಿನಾಂಕ 07-02-2026ನೇ ಶನಿವಾರದಂದು ಧಾರ್ಮಿಕ ವಿಧಿ - ವಿಧಾನಗಳೊಂದಿಗೆ ನೆರವೇರಲಿದೆ.

ಎಕ್ಸಲೆಂಟ್ ಸಿಬಿಎಸ್ಸಿ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

Article Image

ಎಕ್ಸಲೆಂಟ್ ಸಿಬಿಎಸ್ಸಿ ಶಾಲೆಯಲ್ಲಿ ಗಣರಾಜ್ಯೋತ್ಸವ ದಿನಾಚರಣೆ

ಎಕ್ಸಲೆಂಟ್ ಸಿಬಿಎಸ್‌ಇ ಶಾಲೆ ಮೂಡುಬಿದಿರೆಯ ಆವರಣದಲ್ಲಿ ಇಂದು ಜನವರಿ 26ರಂದು 77ನೇ ವರ್ಷದ ಗಣರಾಜ್ಯೋತ್ಸವ ದಿನಾಚರಣೆಯನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು. "ಭಾರತದ ಸಂವಿಧಾನವು ಭಾರತದ ಪರಮೋಚ್ಚ ಕಾನೂನು. ನಾವು ಸದಾ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ತತ್ವಗಳನ್ನು ಗೌರವಿಸಿ ಪಾಲಿಸಬೇಕು" ಎಂದು ಗೌರವಾನ್ವಿತ ಅತಿಥಿಗಳಾದ ಡಾ. ದಯಾನಂದ (ಜೆಇಇ ಮತ್ತು ನೀಟ್ ಕೆಮಿಸ್ಟ್ರಿ ಡೀನ್) ಎಕ್ಸಲೆಂಟ್ ಪಿ.ಯು ಕಾಲೇಜ್ ಮೂಡಬಿದಿರೆಯವರು ಆಶಯವನ್ನು ಅಭಿವ್ಯಕ್ತಪಡಿಸಿದರು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತಾಡಿದ ಇನ್ನೋರ್ವ ಅತಿಥಿ ಎಕ್ಸಲೆಂಟ್ ಪಿಯು ಕಾಲೇಜ್ ಉಪ ಪ್ರಾಂಶುಪಾಲ ತೇಜಸ್ವಿ ಭಟ್ ರವರು "ಒಂದೇ ಧ್ವಜದಡಿ ನಿಂತಿರುವ ನಾವೆಲ್ಲರೂ ಸಮಾನರು. ಸಮಾಜವನ್ನು ಕಟ್ಟುವಲ್ಲಿ ನಾವು ಶ್ರಮಿಸಬೇಕು. ಇಂದು ನಮ್ಮ ಹಕ್ಕು ಮತ್ತು ಕರ್ತವ್ಯವನ್ನು ನೆನಪಿಸಿಕೊಳ್ಳುವ ದಿನವಾಗಿದೆ" ಎಂದು ತಿಳಿಸಿದರು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳು ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಎಕ್ಸಲೆಂಟ್ ಸಿಬಿಎಸ್‌ಇ ಶಾಲೆ ಪ್ರಾಂಶುಪಾಲ ಶ್ರೀ ಪ್ರಸಾದ್, ಸಿಬಿಎಸ್ಇ ಸಂಯೋಜಕಿ ಶ್ರೀಮತಿ ವಿಮಲ, ಶಾಲಾ ನಾಯಕ ಶ್ರೀಕರ್ ಮತ್ತು ಶಿಕ್ಷಕ ಶಿಕ್ಷಕೇತರ ವರ್ಗ ಮತ್ತು ಪೋಷಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ವಿದ್ಯಾರ್ಥಿ ಹರ್ಷ್ ಸ್ವಾಗತಿಸಿ, ವಿದ್ಯಾರ್ಥಿನಿ ಪೂರ್ವಿ ವಂದಿಸಿ ನಿರೂಪಿಸಿದರು.

ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು ದೇಶದ 77ನೇ ಗಣರಾಜ್ಯೋತ್ಸವ ಆಚರಣೆ

Article Image

ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು ದೇಶದ 77ನೇ ಗಣರಾಜ್ಯೋತ್ಸವ ಆಚರಣೆ

ಧಾರವಾಡ: ಎಸ್.ಡಿ.ಎಂ. ವಿಶ್ವವಿದ್ಯಾಲಯವು ದೇಶದ 77ನೇ ಗಣರಾಜ್ಯೋತ್ಸವವನ್ನು ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದಲ್ಲಿ ಆಚರಿಸಲಾಯಿತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ, ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಮತ್ತು ಮುಖ್ಯ ಅತಿಥಿಗಳಾದ ವೈದ್ಯಕೀಯ ವಿಭಾಗದ ಹಿರಿಯ ಪ್ರಾಧ್ಯಾಪಕರಾದ ಡಾ. ಪಿ. ವಿಠ್ಠಲ್ ರಾವ್ ಅವರು ದ್ವಜಾರೋಹಣವನ್ನು ಮಾಡಿದರು. ಮುಖ್ಯ ಅತಿಥಿಗಳಾದ ಡಾ. ಪಿ. ವಿಠ್ಠಲ್ ರಾವ್ ಅವರು ತಮ್ಮ ಸಂದೇಶ ಭಾಷಣದಲ್ಲಿ ಮಾತನಾಡುತ್ತಾ: ಗಣರಾಜ್ಯೋತ್ಸವವು ಸಮಾನತೆ ಮತ್ತು ನ್ಯಾಯದ ತತ್ವಗಳನೊಳಗೊಂಡ ಸಂವಿಧಾನವನ್ನು ಅಂಗೀಕರಿಸಿದ ದಿನವಾಗಿದೆ. ಭಾರತದಲ್ಲಿ ಶಿಕ್ಷಣವು ರಾಷ್ಟ್ರೀಯ ಅಭಿವೃದ್ದಿಯ ಅಡಿಪಾಯದೊಂದಿಗೆ ವೈವಿಧ್ಯತೆಯೇ ಶಕ್ತಿ ಹೊಂದಿದೆ. ಪ್ರತಿಯೊಬ್ಬರು ತಮ್ಮ ಉತ್ತಮ ಆರೋಗ್ಯ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಕಡೆಗೆ ಗಮನಹರಿಸಬೇಕು. ವಿದ್ಯಾರ್ಥಿಗಳು ಪೌರತ್ವ ಮತ್ತು ನೈತಿಕ ನಾಯಕತ್ವದ ಜವಾಬ್ದಾರಿಗಳಿಗೆ ಸಿದ್ದವಾಗಬೇಕು. ವಿಜ್ಞಾನ, ತಂತ್ರಜ್ಞಾನ, ನಾವೀನ್ಯತೆ ಮತ್ತು ಉದ್ಯಮಶೀಲತೆ ಭಾರತದಲ್ಲಿ ವೇಗವಾಗಿ ಪ್ರಗತಿ ಸಾಧಿಸುತ್ತಿವೆ. ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎಸ್, ಹಣಕಾಸಿನ ಅಧಿಕಾರಿಗಳಾದ ವಿ. ಜಿ. ಪ್ರಭು, ಅಂಗ ಸಂಸ್ಥೆಗಳ ಮುಖ್ಯಸ್ಥರು, ಉಪ ಪ್ರಾಂಶುಪಾಲರುಗಳು, ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿಜಯ್ ಕುಲಕರ್ಣಿ ಅತಿಥಿಗಳನ್ನು ಸ್ವಾಗತಿಸಿದರು. ಉಪ ಪ್ರಾಂಶುಪಾಲರಾದ ಡಾ. ಕಿರಣ ಐತಾಳ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು.. ಡಾ. ಆದಿತ್ಯಾ ಅಗ್ನಿಹೋತ್ರಿ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಪ್ರಸೂತಿ ಮತ್ತು ಸ್ತ್ರೀರೋಗ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಸುನಿಲ್ ಕುಮಾರ್ ಕೆ. ಎಸ್. ವಂದಿಸಿದರು

ಎಸ್.ಡಿ.ಎಂ ಅಂಗಳದಲ್ಲಿ 77ನೇ ಗಣರಾಜ್ಯೋತ್ಸವ

Article Image

ಎಸ್.ಡಿ.ಎಂ ಅಂಗಳದಲ್ಲಿ 77ನೇ ಗಣರಾಜ್ಯೋತ್ಸವ

ಉಜಿರೆ, ಜ 26: ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯು ಉಜಿರೆಯ ಶ್ರೀ ಡಿ.ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ 77ನೇ ಗಣರಾಜ್ಯೋತ್ಸವದ ಪ್ರಯುಕ್ತ ಆಯೋಜಿಸಿದ್ದ ಧ್ವಜಾರೋಹಣ ಕಾರ್ಯಕ್ರಮವು ಭಾರತದ ಶ್ರೇಷ್ಠ ಪರಂಪರೆಯ ಗಟ್ಟಿ ಅಡಿಪಾಯದ ಮೇಲೆ ವರ್ತಮಾನವನ್ನು ಸಮೃದ್ಧಗೊಳಿಸಿಕೊಂಡು ಉಜ್ವಲ ಭವಿಷ್ಯದ ಹಾದಿ ನಿಚ್ಛಳಗೊಳಿಸಿಕೊಳ್ಳುವ ಮಹತ್ವಾಕಾಂಕ್ಷಿ ಸಂಕಲ್ಪವನ್ನು ಎತ್ತಿಹಿಡಿಯಿತು. ಈ ಮೌಲಿಕ ಆಶಯ ಧ್ವನಿಸುವ ವಿದ್ಯಾರ್ಥಿಗಳ ಪ್ರತಿಭಾಪೂರ್ಣ ಕಲಾತ್ಮಕ ಅಭಿವ್ಯಕ್ತಿಯ ಪ್ರದರ್ಶನವು ಭಾರತದ ಆಡಳಿತಾತ್ಮಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹೆಜ್ಜೆಗಳು ಹೇಗಿರಬೇಕು ಎಂಬುದನ್ನು ದೃಢೀಕರಿಸಿದವು. ಭಾರತೀಯ ನೌಕಾದಳದ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಭರತ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು. ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಎಸ್.ಡಿ.ಎಂ ಕಾಲೇಜಿನ ಎನ್.ಸಿ.ಸಿ ವಿಭಾಗದ ಕೆಡೆಟ್ಸ್, ರೋವರ್ಸ್ ಆ್ಯಂಡ್ ರೇಂಜರ್ಸ್ ಪ್ರತಿನಿಧಿಗಳ ಪಥಸಂಚಲನ, ಶಿಸ್ತುಬದ್ಧ ನಡೆಯು ಗಮನ ಸೆಳೆಯಿತು. ಎನ್.ಸಿ.ಸಿ. ಅಧಿಕಾರಿ ಭಾನುಪ್ರಕಾಶ್ (ಆರ್ಮಿ) ಅವರ ಮಾರ್ಗದರ್ಶನದಲ್ಲಿ ಪಥಸಂಚಲನ ನಡೆಯಿತು. ತದನಂತರ ಎಸ್.ಡಿ.ಎಂ ಸಂಸ್ಥೆಯ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಪ್ರದರ್ಶಿಸಿದ ಸಾಂಸ್ಕೃತಿಕ ಅಭಿವ್ಯಕ್ತಿಯ ವಿವಿಧ ಮಾದರಿಗಳು ವೈವಿಧ್ಯಮಯ ಇತಿಹಾಸವನ್ನು ಸಮಗ್ರವಾಗಿ ತಿಳಿದುಕೊಂಡು ಹೊಸ ಕಾಲದ ಸ್ಪರ್ಧಾತ್ಮಕತೆರೂಢಿಸಿಕೊಳ್ಳುವ ಉತ್ಸಾಹವನ್ನು ಮೂಡಿಸುವಲ್ಲಿ ಯಶಸ್ವಿಯಾಯಿತು. ಆರಂಭದಲ್ಲಿ ಎಸ್.ಡಿ.ಎಂ ಶಾಲೆಯ ಚಿಣ್ಣರು ಅನಾವರಣಗೊಳಿಸಿದ ಪ್ಯಾರಾಚ್ಯೂಟ್ ಜೊತೆಗಿನ ಸಂವಾದಿ ಅಭಿನಯ ಭಾರತದ ಭವಿಷ್ಯದ ದಿಗ್ವಿಜಯದ ಮುನ್ನಡೆಯ ಹುಮ್ಮಸ್ಸನ್ನು ಸಂಕೇತಿಸಿತು. ಅವರ ನೃತ್ಯಸಂವಾದದ ಅಭಿವ್ಯಕ್ತಿಯ ಹಿನ್ನೆಲೆಯಾಗಿ ಕೇಳಿಬಂದ ಜನಜನಿತ "ಡಾಗ್ ಮಿಲಿನಿಯೇರ್" ಸಿನಿಮಾದ "ಜೈ ಹೋ" ಹಾಡು ಹೊಸ ತಲೆಮಾರಿನ ಎಳೆಯ ಮನಸುಗಳ ಆತ್ಮವಿಶ್ವಾಸದ ಜೋಷ್‌ಅನ್ನು ಆಕರ್ಷಣೀಯವಾಗಿ ಅನಾವರಣಗೊಳಿಸಿತು. ಭಾರತವನ್ನು ಅನ್ಯರ ಹಿಡಿತದಿಂದ ವಿಮುಕ್ತಗೊಳಿಸುವ ಕ್ರಾಂತಿಕಾರಕ ಹೋರಾಟಗಳಲ್ಲಿ ಭಾಗಿಯಾಗಿದ್ದ ಮಹಿಳಾ ಹೋರಾಟಗಾರರಾಗಿದ್ದ ರಜಿಯಾ ಸುಲ್ತಾನಾ, ರುದ್ರಮಾದೇವಿ, ರಾಣಿ ಪದ್ಮಿನಿ, ರಾಣಿ ಅಬ್ಬಕ್ಕ, ಚೆನ್ನ ಬೈರಾದೇವಿ, ಬೆಳವಡಿ ಮಲ್ಲಮ್ಮ, ತಾರಾಬಾಯಿ, ಅಹಲ್ಯಾಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಭೀಮಾಬಾಯಿ ಮತ್ತು ಝಾನ್ಸಿರಾಣಿ ಲಕ್ಷ್ಮೀಬಾಯಿ ಕುರಿತ ವೀರೋಚಿತ ಇತಿಹಾಸದ ವಿವರಗಳು ವಿದ್ಯಾರ್ಥಿನಿಯರ ಕಲಾತ್ಮಕ ಅಭಿನಯದ ಮೂಲಕ ದೇಶದ ಬಗೆಗಿನ ಹೆಮ್ಮೆ ಮತ್ತು ಅಭಿಮಾನ ಹೆಚ್ಚಿಸಿದವು. ಹಿಂದಿನ ಕಾಲದ ಬದುಕಿನ ವೈಶಿಷ್ಟ್ಯತೆಯನ್ನು ಕಾಣಿಸಿ ಸದ್ಯದ ವೈರುಧ್ಯಗಳನ್ನು ಅನಾವರಣಗೊಳಿಸಿದ ವಿದ್ಯಾರ್ಥಿಗಳ ಅಭಿನಯ ಸಾಮರ್ಥ್ಯ ವಿಭಿನ್ನವಾಗಿತ್ತು. ಹಿನ್ನೆಲೆಯಲ್ಲಿ "ಮಾಲ್ಗುಡಿ ಡೇಸ್" ಧಾರಾವಹಿಯ ಶೀರ್ಷಿಕೆ ಗೀತೆಯ ಸಂಗೀತ ನಿನಾದ ಹಳೆಯ ಕಾಲ ಮತ್ತು ಹೊಸ ಕಾಲದ ಅರ್ಥಪೂರ್ಣ ಸಂಯೋಜನೆಯ ದ್ಯೋತಕವಾಗಿ ಮನಸೂರೆಗೊಂಡಿತು. ನ್ಯಾಚುರೋಪತಿ ಕಾಲೇಜಿನ ವಿದ್ಯಾರ್ಥಿಗಳು ಪ್ರದರ್ಶಿಸಿದ ಕಲಾಭಿವ್ಯಕ್ತಿಯು ನಿಸರ್ಗಸಹಜವಾದ ಪ್ರಾಕೃತಿಕ ಚಿಕಿತ್ಸೆಯ ವಿಧಾನಗಳ ಅನುಸರಣೆಯೊಂದೇ ಮನುಷ್ಯ ಬದುಕನ್ನು ಪುನರುಜ್ಜೀವನಗೊಳಿಸಬಲ್ಲದು ಎಂಬ ಸಂದೇಶವನ್ನು ಸಾರಿತು. ಶಿವ ಪಾರ್ವತಿ ನಡುವಿನ ಇಂಗ್ಲಿಷ್ ಸಂಭಾಷಣೆಯ ಮೂಲಕ ಶುರುವಾದ ಈ ಕಲಾತ್ಮಕ ಪ್ರದರ್ಶನವು ಋಷಿಮುನಿಗಳೂ ಸೇರಿದಂತೆ ವಿವಿಧ ಪ್ರಾಜ್ಞರು ಕೊಡಮಾಡಿದ ನಿಸರ್ಗಸ್ನೇಹಿ ಚಿಕಿತ್ಸಾ ಜ್ಞಾನ ಹಿಂದಿನ ಕಾಲದಿಂದ ಸದ್ಯದ ಆಧುನಿಕ ಕಾಲದವರೆಗೆ ದಾಟಿಕೊಂಡ ಬಗೆಯನ್ನು ಆಪ್ತವಾಗಿ ಚಿತ್ರಿಸಿತು. ಜಗತ್ತಿನ ಎಲ್ಲಾ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಪ್ರಕೃತಿಯಲ್ಲಿಯೇ ಅಡಗಿದೆ ಎನ್ನುವ ಮೌಲಿಕ ಚಿಂತನೆಯನ್ನು ಧ್ವನಿಸಿತು. ವಿವಿಧ ಕ್ಷೇತ್ರಗಳ ಗಣ್ಯರು ತಮ್ಮ ಸಾಧನೆಯ ಹೆಜ್ಜೆಗಳ ಮೂಲಕ ಅಭಿವೃದ್ಧಿಯ ಸಾಧ್ಯತೆಗಳನ್ನು ಕಂಡರಿಸುವ ಹೊಸ ಮಾದರಿಗಳನ್ನು ಕಾಣಿಸುತ್ತಾ ಹೇಗೆ ತಲೆಮಾರುಗಳನ್ನು ಪ್ರಭಾವಿಸಿದರು ಎಂಬ ಅಂಶವನ್ನು ಎತ್ತಿಹಿಡಿಯುವ ವಿದ್ಯಾರ್ಥಿ ತಂಡದ ಮತ್ತೊಂದು ಪ್ರದರ್ಶನ ಆಕರ್ಷಣೀಯವಾಗಿತ್ತು. ಭಾರತದ ಜಾನಪದ ವೈಭವ, ಕೇರಳ ಸಂಸ್ಕೃತಿಯ ವಿಶೇಷತೆ, ಆಪರೇಷನ್ ಸಿಂಧೂರದ ವಿವರ, ವಂದೇ ಮಾತರಂ ಗೀತೆಯ ಜೊತೆಗಿನ ಸತ್ವಯುತ ಮೌಲ್ಯ, ವಿಜ್ಞಾನ ಮತ್ತು ತಂತ್ರಜ್ಞಾನದ ನಿಖರ ಸಾಧನೆಯ ವಿವರಗಳನ್ನು ವಿವಿಧ ಪ್ರದರ್ಶನಗಳು ಬಿಂಬಿಸಿದವು. ವಿವಿಧ ಶಾಲಾ ಕಾಲೇಜುಗಳ ಪ್ರಾಂಶುಪಾಲರು, ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು. ಉಜಿರೆಯ ಎಸ್.ಡಿ.ಎಂ ಶಿಕ್ಷಣ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು, ಉಪನ್ಯಾಸಕರು, ಸಿಬ್ಬಂದಿವರ್ಗ, ಕ್ರೀಡಾವಿಭಾಗ ಹಾಗೂ ಊರಿನ ನಾಗರಿಕರು ಪಾಲ್ಗೊಂಡಿದ್ದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆಯ ವಿವರಗಳನ್ನು ಪ್ರಸ್ತುಪಡಿಸಲಾಯಿತು.

ಧಾರವಾಡದಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

Article Image

ಧಾರವಾಡದಲ್ಲಿ 77ನೇ ಗಣರಾಜ್ಯೋತ್ಸವ ಆಚರಣೆ

ಧಾರವಾಡದ ಹೊಸಯಲ್ಲಾಪುರದ ದಿಗಂಬರ ಜೈನ್ ಸಮಾಜ ಟ್ರಸ್ಟ್ ವತಿಯಿಂದ ಶ್ರೀ ಆದಿನಾಥ ಜೈನ ಬಸದಿಯಲ್ಲಿ 77ನೆಯ ಗಣರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು. ಟ್ರಸ್ಟ್‌ನ ಉಪಾಧ್ಯಕ್ಷರಾದ ಡಾ. ಆರ್. ಎ. ಬಾಳಿಕಾಯಿ ಅವರು ಧ್ವಜ ಅನಾವರಣ ಮಾಡಿ, ಭಾರತೀಯ ಸಂವಿಧಾನವು: ಎಲ್ಲ ನಾಗರಿಕರಿಗೆ ಸಮಾನ ಹಕ್ಕುಗಳನ್ನು ನೀಡುತ್ತದೆ. ಜಾತಿ, ಧರ್ಮ, ಲಿಂಗ ಆಧಾರಿತ ಭೇದಭಾವವನ್ನು ತಿರಸ್ಕರಿಸುತ್ತದೆ. ಮೂಲಭೂತ ಹಕ್ಕುಗಳು ಹಾಗೂ ಕರ್ತವ್ಯಗಳನ್ನು ನಿರ್ದಿಷ್ಟಪಡಿಸುತ್ತದೆ. ಇದು ಕೇವಲ ಕಾನೂನು ಪುಸ್ತಕವಲ್ಲ, ಒಂದು ಸಾಮಾಜಿಕ ಒಪ್ಪಂದವಾಗಿದೆ. ಆರ್ಥಿಕವಾಗಿ ಅಭಿವೃದ್ಧಿ ಹೊಂದುವುದು ಮಾತ್ರವಲ್ಲದೆ ಸಾಮಾಜಿಕ ಸಾಮರಸ್ಯ ಮತ್ತು ಸಾಂಸ್ಕೃತಿಕ ಶ್ರೀಮಂತಿಕೆಯಲ್ಲಿ ಬೆಳೆಯುತ್ತಿರುವ ಭಾರತಕ್ಕಾಗಿ ಕೆಲಸ ಮಾಡಲು ನಾವು ಇಂದು ಪ್ರತಿಜ್ಞೆ ಮಾಡೋಣ, ಎಂದು ತಿಳಿಸುತ್ತ, ಟ್ರಸ್ಟಿನ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಟ್ರಸ್ಟಿನ ಕಾರ್ಯದರ್ಶಿ ಅರುಣ ಬ್ಯಾಡಗಿ, ಸಹ ಕೋಶಾಧ್ಯಕ್ಷ ಯಲ್ಲಪ್ಪ ಜೈನರ ಮತ್ತು ಆಡಳಿತ ಮಂಡಳಿ ಸದಸ್ಯರಾದ ಶ್ರೀಧರ ಬಸ್ತಿ, ಶ್ರಾವಕ-ಶ್ರಾವಕಿಯರು ಹಾಗೂ ಇತರರು ಉಪಸ್ಥಿತರಿದ್ದರು. ಡಾ. ಆರ್. ಎ. ಬಾಳಿಕಾಯಿ ಉಪಾಧ್ಯಕ್ಷರು, ದಿಗಂಬರ ಜೈನ್ ಸಮಾಜ ಟ್ರಸ್ಟ್, ಹೊಸಯಲ್ಲಾಪುರ, ಧಾರವಾಡ

ಸಿಂದಿಗೆರೆಯ ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ವೀರೇಂದ್ರಕುಮಾರ್ ಬೇಗೂರುರವರ ಬಿಡುಗಡೆ

Article Image

ಸಿಂದಿಗೆರೆಯ ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ವೀರೇಂದ್ರಕುಮಾರ್ ಬೇಗೂರುರವರ ಬಿಡುಗಡೆ

ಚಿಕ್ಕಮಗಳೂರು ಜಿಲ್ಲೆಯ ಪ್ರಸಿದ್ಧ ಹಾಗೂ ಪ್ರಾಚೀನ ಜೈನ ಕ್ಷೇತ್ರ ಬ್ರಹ್ಮಯಕ್ಷನ ಮಹೋನ್ನತ ಮಹಿಮಾ ಕ್ಷೇತ್ರ ಸಿಂದಿಗೆರೆಯ ವಾರ್ಷಿಕ ಪೂಜಾ ಮಹೋತ್ಸವ ಕಾರ್ಯಕ್ರಮದಲ್ಲಿ ವೀರೇಂದ್ರಕುಮಾರ್ ಬೇಗೂರುರವರ ಜೈನ ಸಮಾಜದ ನಿರೀಕ್ಷಿತ ಸಂಶೋಧನಾ ಕೃತಿಯಾದ "ಕರ್ನಾಟಕ ಜೈನ ಪರಂಪರೆಯಲ್ಲಿ ಬ್ರಹ್ಮಯಕ್ಷ" ಹಾಗೂ "ನಿರಂಜನ ವೈಭವ" ಎಂಬ ಎರಡು ಕೃತಿಗಳನ್ನು ನಿವೃತ್ತ ಇಂಜಿನಿಯರ್ ಹಾಗೂ ಹಾಸನ ಮಹಾವೀರ ಜೈನ್ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ನಾಗೇಂದ್ರಯ್ಯರವರು ಬಿಡುಗಡೆಗೊಳಿಸಿದರು. ಈ ಕಾರ್ಯಕ್ರಮದಲ್ಲಿ ಕೃತಿಯನ್ನು ಕುರಿತು ವೃಷಬ್ ಕುಮಾರ್ ರವರು ಮಾತಾನಾಡಿದರು. ಕೃತಿಕಾರರಾದ ವೀರೇಂದ್ರ ಕುಮಾರ್ ರವರು ಜೈನ ಯಕ್ಷಯಕ್ಷಿಯರ ಮಹತ್ವ ಹಾಗೂ ಬ್ರಹ್ಮ ಯಕ್ಷರ ಆರಾಧನೆಯ ಕುರಿತು ಉಪನ್ಯಾಸ ಮಾಡಿದರು. ಈ ಕೃತಿಯ ಪ್ರಕಾಶಕರಾದ ಸಿಂದಗೆರೆ ಸುಪಾರ್ಶ್ವ ತೀರ್ಥಂಕರ ಹಾಗೂ ಬ್ರಹ್ಮ ಯಕ್ಷ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ರಾದ ನಾಗರತ್ನರಾಜಯ್ಯ ಹಾಗೂ ಕಾರ್ಯದರ್ಶಿಗಳಾದ ಪಾರ್ಶ್ವನಾಥಯ್ಯರವರು, ವಿಪುಲ್ ಜೈನ್ ಅತುಲ್ ಜೈನ್ ಚಂದ್ರಕೀರ್ತಿ, ಹಾಸನ ದ ಧನಪಾಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ನಾಡಿನ ತುಮಕೂರು ಮೈಸೂರು ಹಾಸನ ಬೆಂಗಳೂರು ಅಡಗೂರು ಮಾಯಸಂದ್ರ ಶ್ರವಣಬೆಳಗೊಳ ದಿಂದ ಜನರು ಆಗಮಿಸಿ ಈ ಕಾರ್ಯಕ್ರಮ ಕ್ಕೆ ಸಾಕ್ಷಿಯಾದರು.

ಭುವನವಾಹಿನಿ ಕ್ಯಾಲೆಂಡರ್‌ ಬಿಡುಗಡೆ

Article Image

ಭುವನವಾಹಿನಿ ಕ್ಯಾಲೆಂಡರ್‌ ಬಿಡುಗಡೆ

ವೇಣೂರು: ಭುವನವಾಹಿನಿ ಜಿನಮಿತ್ರ ಪತ್ರಿಕೆಯು ರಜತ ವರ್ಷ ಆಚರಣೆಯ ಸುಸಂದರ್ಭದಲ್ಲಿ ನೂತನವಾಗಿ ಆರಂಭಿಸಿದ ಭುವನವಾಹಿನಿ ಕ್ಯಾಲೆಂಡರ್‌ನ್ನು ಇಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ| ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

First Previous

Showing 3 of 23 pages

Next Last