ರಾಷ್ಟ್ರ ಯುವ ವಾಲಿಬಾಲ್ ಪಂದ್ಯಾಟಕ್ಕೆ ಕರ್ನಾಟಕ ರಾಜ್ಯ ತಂಡಕ್ಕೆ ಲಾಸ್ಯ ಆಯ್ಕೆ
Published Date: 10-Mar-2026
ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಸ್ವಾಯತ್ತ ಕಾಲೇಜಿನ ಪ್ರಥಮ ವಾಣಿಜ್ಯ ಪದವಿ ವಿದ್ಯಾರ್ಥಿನಿ ಲಾಸ್ಯ ಕರ್ನಾಟಕ ರಾಜ್ಯ ವನಿತೆಯರ ಯುವ ವಾಲಿಬಾಲ್ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಇವಳು ಉಜಿರೆಯ ಉದ್ಯಮಿ ಸಿದ್ಧಾಂತಕೀರ್ತಿರಾಜ ಮತ್ತು ಭಾಗ್ಯಶ್ರೀ ದಂಪತಿಯ ಪುತ್ರಿ. ಇವಳು ಸಿದ್ದವನದ ಸಂತ ಜೈನ ಸಂಸ್ಕೃತ ವಿದ್ವಾoಸರಾಗಿದ್ದ ನ್ಯಾಯತೀರ್ಥ ಜಿನರಾಜ ಶಾಸ್ತ್ರೀಗಳ ಮರಿಮಗಳು, ಖ್ಯಾತ ದೈಹಿಕ ಶಿಕ್ಷಣ ಶಿಕ್ಷಕ ಮತ್ತು ಯಕ್ಷಗಾನ ಕಲಾವಿದರಾಗಿದ್ದ ದಿ. ನರೇಂದ್ರಕುಮಾರ್ ರ ಮೊಮ್ಮಗಳು, ಪ್ರಸ್ತುತ ಪೆರಿಂಜೆ ಪ್ರೌಢ ಶಾಲೆಯಲ್ಲಿ ದೈಹಿಕ ಶಿಕ್ಷಣ ಶಿಕ್ಷಕರಾಗಿರುವ ರಾಜೇಂದ್ರ ಅವರ ಸೊಸೆ. ಕಳೆದ ಐದು ವರ್ಷಗಳಿಂದ ಕಾಲೇಜಿನ ದೈಹಿಕ ಶಿಕ್ಷಕರಾದ ರಮೇಶ್ ಅವರಲ್ಲಿ ಲಾಸ್ಯ ನಿರಂತರ ತರಬೇತಿ ಪಡೆಯುತ್ತಿದ್ದಾಳೆ.