Article Image

ರಾಜಪರ್ವವಾದ ದಶಧರ್ಮದಲ್ಲಿ ನ್ಯಾನೋ ಕಥೆ: ಉತ್ತಮ ಶೌಚ

Article Image

ರಾಜಪರ್ವವಾದ ದಶಧರ್ಮದಲ್ಲಿ ನ್ಯಾನೋ ಕಥೆ: ಉತ್ತಮ ಶೌಚ

ಆ ವ್ಯಾಪಾರಸ್ಥ ಇನ್ನೇನು ತನ್ನ ಕಾರಲ್ಲಿ ಕುಳಿತು ಡ್ರೈವ್ ಮಾಡಬೇಕೆನ್ನುವಷ್ಟರಲ್ಲಿ ಅವನ ಪರ್ಸ್ ಕಳೆದುಹೋಗಿತ್ತು, ಕೂಡಲೇ ಆಗಷ್ಟೇ ಹೋಗಿದ್ದ ದೇವಸ್ಥಾನದಲ್ಲೂ ಪರ್ಸ್ ದೊರೆಯದಿದ್ದಾಗ ನಿರಾಶೆಯಲ್ಲಿ ಇನ್ನೇನು ಕಾರಲ್ಲಿ ಕೂರಬೇಕೆನ್ನುವಷ್ಟರಲ್ಲಿ ಭಿಕ್ಷುಕನೊಬ್ಬ ಕುಂಟುತ್ತಾ ಆ ವ್ಯಾಪಾರಸ್ಥನನ್ನು ಕೂಗಿ ರ್ಪಟ್ಟು “ನಿಮ್ಮ ಪರ್ಸ್ ಇಲ್ಲೇ ಬಿದ್ದಿತ್ತು. ನಿಮ್ಮನ್ನು ಎಷ್ಟು ಕೂಗಿ ಕರೆದರೂ ನೀವು ನೋಡ್ಲೆ ಇಲ್ಲ ಎಂದಾಗ ಅವನ ಕಣ್ಣುಗಳು ತುಂಬಿ ಬಂದು ಪರ್ಸ್‌ನಲ್ಲಿದ್ದ ಸ್ವಲ್ಪ ಹಣ ವ್ಯಾಪಾರಸ್ಥ ಭಿಕ್ಷುಕನಿಗೆ ಕೊಟ್ಟಾಗ ಭಿಕ್ಷುಕ ಒಂದು ಪೈಸೆಯನ್ನು ತೆಗೆದುಕೊಳ್ಳದೇ ಇವತ್ತಿಗೆ ನನಗೆ ಎಷ್ಟು ಬೇಕಿದೆ ಅಷ್ಟು ಹಣ ದೊರೆತಿದೆ ಇನ್ನೊಮ್ಮೆ ಈ ಕಡೆ ಬಂದಾಗ ಹೊಟ್ಟೆಗೆ ಇಲ್ಲದಿದ್ದಾಗ ಹಣ ಕೊಡಿ" ಎಂದಷ್ಟೇ ಹೇಳಿ ಕುಂಟುತ್ತಾ ತನ್ನ ಜಾಗಕ್ಕೆ ಹಿಂತಿರುಗಿದ. ಆ ಸಮಯಕ್ಕೆ ವ್ಯಾಪಾರಸ್ಥನಿಗೆ ಲೋಭದ ಆಸೆಯಿಂದ ಗೆಳೆಯನೇ ಕೊಡಿಸಿದ ಪ್ರಾಜೆಕ್ಟನ್ನು ಗೆಳೆಯನನ್ನು ಬಿಟ್ಟು ಮಾಡಲು ಹೊರಟಿರುವುದಕ್ಕೆ ಪಶ್ಚಾತ್ತಾಪಪಟ್ಟು ಇಂತಹ ಭಿಕ್ಷುಕನೇ ಲೋಭವನ್ನು ಬಿಟ್ಟು ಯೋಚಿಸುತ್ತಿರುವಾಗ ನಾನೆಷ್ಟು ನೀಚ ಎಂದೆನಿಸಿತು. ಲೋಭ ಕಷಾಯ ಬದುಕಿನ ನೆಮ್ಮದಿಯನ್ನು ಕ್ಷೀಣಗೊಳಿಸುತ್ತದೆ. ಹಾಗೆ ಲೋಭ ಮನಸ್ಸಿನ ಮಲಿನತೆಯನ್ನು ಮುಕ್ತಗೊಳಿಸಿ ಆತ್ಮ ಕಲ್ಯಾಣಕ್ಕೆ ಪ್ರೇರಣಿಯಾಗುತ್ತದೆ ಎನ್ನುವ ಮಾತು ಎಲ್ಲೋ ಓದಿರುವುದು ಅವನಿಗೆ ನೆನಪಾಗಿ ಗೆಳೆಯನಲ್ಲಿ ಮನಸ್ಸಿನಲ್ಲೇ ಕ್ಷಮೆ ಕೇಳಿದ. ಲೋಭದ ಆಭಾವವೇ ಭಾವದ ಪರಿಶುದ್ಧತೆ. ಉತ್ತಮ ಶೌಚ ಧರ್ಮ ಲೌಖಿಕ ಮತ್ತು ಪಾರಮಾರ್ಥಿಕ ಜೀವನದ ಅಭ್ಯುದಕ್ಕೂ ಸಂಜೀವಿನಿ. ಶ್ವೇತಾ ನಿಹಾಲ್ ಜೈನ್

ದಾವಣಗೆರೆ: ದಶ ಲಕ್ಷಣ ಪರ್ವ ಉಪನ್ಯಾಸ

Article Image

ದಾವಣಗೆರೆ: ದಶ ಲಕ್ಷಣ ಪರ್ವ ಉಪನ್ಯಾಸ

ದಾವಣಗೆರೆಯ ಶ್ರೀ ಪಾರ್ಶ್ವನಾಥ ಜಿನ ಮಂದಿರಕ್ಕೆ ಕರ್ನಾಟಕ ಜೈನ ಮಹಿಳಾ ಒಕ್ಕೂಟದ ಉಪಾಧ್ಯಕ್ಷೆ ಹಾಗೂ ರತ್ನತ್ರಯ ಧಾರವಾಹಿ ನಿರ್ದೇಶಕಿ. ಡಾ. ನೀರಜಾ ನಾಗೇಂದ್ರ ಕುಮಾರ್ ಭೇಟಿ ನೀಡಿ ಉತ್ತಮ ಅರ್ಜವ ಧರ್ಮದ ಬಗ್ಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಜೈನ ಮಹಿಳಾ ಒಕ್ಕೂಟದ ಅಧ್ಯಕ್ಷ ಪದ್ಮಪ್ರಕಾಶ್ ಹಾಗೂ ದಾವಣಗೆರೆ ಜೈನ ಸಮಾಜದ ಪದಾಧಿಕಾರಿಗಳು ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು.

ಮೈಸೂರು: ಜೈನಾಲಜಿ ಮತ್ತು ಪ್ರಾಕೃತ ವಿಭಾಗ ಮುಂದುವರಿಸುವಂತೆ ಆಗ್ರಹ

Article Image

ಮೈಸೂರು: ಜೈನಾಲಜಿ ಮತ್ತು ಪ್ರಾಕೃತ ವಿಭಾಗ ಮುಂದುವರಿಸುವಂತೆ ಆಗ್ರಹ

ಮೈಸೂರು ವಿಶ್ವವಿದ್ಯಾಲಯದಲ್ಲಿ ಜೈನಾಲಜಿ ಮತ್ತು ಪ್ರಾಕೃತ ವಿಭಾಗವನ್ನು ಮುಂದುವರಿಸುವಂತೆ ಆಗ್ರಹಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಸುಪ್ರಿಯಾ ಹರ್ಷೇಂದ್ರ ಹೆಗಡೆ ನೇತೃತ್ವದಲ್ಲಿ ಇಂದು ಉಪಕುಲಪತಿ ಲೋಕನಾಥ್ ರವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಾಯಿತು. ನಿಯೋಗದಲ್ಲಿ ಜಯಶ್ರೀ, ಪದ್ಮಪ್ರಸಾದ್, ಭಾರತೀಯ ಜೈನ್ ಮಿಲನ್ ಅಧ್ಯಕ್ಷ ಯುವರಾಜ್ ಭಂಡಾರಿ, ಗೌರವ ಅಧ್ಯಕ್ಷರಾದ ಶೀಲಾ ಅನಂತರಾಜು, ಪ್ರಧಾನ ಕಾರ್ಯದರ್ಶಿ ರತ್ನರಾಜು, ಖಜಾಂಚಿ ಚಂದ್ರಶೇಖರ ಅರಿಗ, ಜಂಟಿ ಕಾರ್ಯದರ್ಶಿ ಪ್ರಶಾಂತ್, ಮೈಸೂರು ವಿಭಾಗದ ಉಪಾಧ್ಯಕ್ಷ ನಾಗರಾಜು, ಕಾರ್ಯದರ್ಶಿ ಚಂದ್ರು ಪ್ರಕಾಶ್, ಅರುಣಾಚಂದ್ರ ಪ್ರಕಾಶ್, ಪದ್ಮಶ್ರೀ ಮಹಿಳಾ ಸಮಾಜದ ಅಧ್ಯಕ್ಷರಾದ ಲತಾ ಸುದರ್ಶನ್, ಜಂಟಿ ಕಾರ್ಯದರ್ಶಿ ಸಿಂಧೂ ಅರುಣ್, ಕರ್ನಾಟಕ ಜೈನ ತೀರ್ಥಕ್ಷೇತ್ರ ಕಮಿಟಿ ಅಧ್ಯಕ್ಷ ವಿನೋದ್ ಬಾಕ್ಲಿವಾಲ, ಶ್ವೇತಾಂಬರ ಮೂರ್ತಿ ಪೂಜಕ್ ಸಂಘದ ಅಧ್ಯಕ್ಷ ಬೇರು ಲಾಲ್, ಟ್ರಸ್ಟಿಗಳಾದ ಹನ್ಸರಾಜ್, ದೇವಿ ಚಂದ, ಚಂಪಾಲಾಲ್, ಪ್ರೊ. ಶುಭಚಂದ್ರ ಭಾಗವಹಿಸಿದ್ದರು. ಜೆ.ರಂಗನಾಥ ತುಮಕೂರು

ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆ

Article Image

ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆ

ಬೆಂಗಳೂರು: ರತ್ನತ್ರಯ ಜೈನ ಮಿಲನ್ ಮಾಸಿಕ ಸಭೆಯು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಲ್ಯಾಣ ಮಂಟಪ, ಬೆಂಗಳೂರಿನಲ್ಲಿ ಇತ್ತೀಚೆಗೆ ಜರುಗಿತು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಎ.ವಿ. ಪದ್ಮನಿಯವರು "ಲೇಶ್ಯಗಳ" ಬಗ್ಗೆ ಉಪನ್ಯಾಸ ನೀಡಿದರು. ಶೋಭಿತ ನವೀನ್ ಅವರು ಪರ್ವವಾಚನ ಮಾಡಿದರು. ಸುಗುಣರವರು ರತ್ನತ್ರಯ ಮಿಲನದ ಉದ್ದೇಶಗಳನ್ನು ತಿಳಿಸಿದರು. ಪದ್ಮಾ ಸೂರಿಯವರು. ವಿವಾಹ ವಾರ್ಷಿಕ ಹಾಗೂ ಹುಟ್ಟುಹಬ್ಬ ಆಚರಿಸಿಕೊಂಡ ರತ್ನತ್ರಯ ಮಿಲನ ಸದಸ್ಯರಿಗೆ ಶುಭ ಕೋರಿದರು. ಶೋಭಾ ಪಾಟೀಲ್, ತ್ರಿಕಾಲ ತೀರ್ಥಂಕರರ ಹೆಸರುಗಳನ್ನು ವಾಚಿಸಿದರು. ಮಹಾವೀರ ಕುಮಾರವರು ರತ್ನತ್ರಯ ಮಿಲನಿನ ನಡಾವಳಿಯನ್ನು ವಾಚಿಸಿದರು. ರಾಣಿ ಪ್ರಫುಲ್ಲ ಅವರು ಅತಿಥಿಗಳನ್ನು ಪರಿಚಯ ಮಾಡಿದರು. ಅನಂತಕುಮಾರಿಯವರು, ಅಗಲಿದ ಕಮಲಾ ಹಂಪನಾ ಅವರ ಕುರಿತಾದ ಸ್ವರಚಿತ ಕವನ ವಾಚನ ಮಾಡುವುದರ ಮುಖೇನ ಶ್ರದ್ಧಾಂಜಲಿ ಅರ್ಪಿಸಿದರು. ನವೀನ್ ಕುಮಾರ್ ಗುಬ್ಬಿಯವರು ಅಧ್ಯಕ್ಷರ ನುಡಿಗಳನ್ನಾಡಿದರು. ಚಂದನ ಸುರೇಂದ್ರ ಅವರು ಕಾರ್ಯಕ್ರಮದ ಆತಿಥ್ಯವನ್ನು ವಹಿಸಿಕೊಂಡಿದ್ದರು. ಚಂದನಾದೇವಿ ಅವರು ಪಾರ್ಥಿಸಿ, ಶಿಲ್ಪಾ ಸುರೇಂದ್ರ ಅವರು ಸ್ವಾಗತಿಸಿದರು, ಉಷಾ ಮಹಾವೀರ್ ಅವರು ವಂದಿಸಿದರು. ಅನಂತಕುಮಾರಿ ಅವರು ಕಾರ್ಯಕ್ರಮ ನಿರೂಪಿಸಿದರು.

“ಪರ್ಯೂಷಣ ಪರ್ವ” ಕೃತಿ ಬಿಡುಗಡೆ

Article Image

“ಪರ್ಯೂಷಣ ಪರ್ವ” ಕೃತಿ ಬಿಡುಗಡೆ

ಉಜಿರೆ: ದಶಲಕ್ಷಣಪರ್ವ ಆಚರಣೆಯ ಶುಭಾವಸರದಲ್ಲಿ ಧರ್ಮಸ್ಥಳದಲ್ಲಿರುವ “ಮಂಜೂಷಾ” ವಸ್ತು ಸಂಗ್ರಹಾಲಯದ ಕ್ಯುರೇಟರ್ ಪುಷ್ಪದಂತ ಬರೆದ “ಪರ್ಯೂಷಣ ಪರ್ವ” ಕೃತಿಯನ್ನು ಸೋಮವಾರ ಬೀಡಿನಲ್ಲಿ (ಹೆಗ್ಗಡೆಯವರ ನಿವಾಸ) ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಪುಸ್ತಕದಲ್ಲಿರುವ ಉಪಯುಕ್ತ ಆಧ್ಯಾತ್ಮಿಕ ಮಾಹಿತಿ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಲೇಖಕ ಪುಷ್ಪದಂತ, ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ, ನಿರಂಜನ್ ಜೈನ್, ಆರ್.ಯನ್. ಪೂವಣಿ ಉಪಸ್ಥಿತರಿದ್ದರು.

ವಿಶ್ವ ಭೌತಚಿಕಿತ್ಸಾ ಸಪ್ತಾಹ ಮತ್ತು ಭೌತ ಚಿಕಿತ್ಸಾ ದಿನಾಚರಣೆ

Article Image

ವಿಶ್ವ ಭೌತಚಿಕಿತ್ಸಾ ಸಪ್ತಾಹ ಮತ್ತು ಭೌತ ಚಿಕಿತ್ಸಾ ದಿನಾಚರಣೆ

ಎಸ್.ಡಿ.ಎಂ. ವಿಶ್ವವಿದ್ಯಾಲಯದಲ್ಲಿ ವಿಶ್ವ ಭೌತಚಿಕಿತ್ಸಾ ಸಪ್ತಾಹ ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನಲ್ಲಿ ಸೆಪ್ಟೆಂಬರ್ 3 ರಿಂದ 6ರವರೆಗೆ ವಿಶ್ವ ಭೌತಚಿಕಿತ್ಸಾ ಸಪ್ತಾಹ ಮತ್ತು ಭೌತ ಚಿಕಿತ್ಸಾ ದಿನಾಚರಣೆಯನ್ನು ಆಚರಿಸಲಾಯಿತು. ಭೌತಚಿಕಿತ್ಸಾ ಸಪ್ತಾಹದ ಅಂಗವಾಗಿ ಪೋಸ್ಟರ್ ಪ್ರದರ್ಶನ, ಚರ್ಚಾ ಸ್ಪರ್ಧೆ, ಶೈಕ್ಷಣಿಕ ಕಾರ್ಯಕ್ರಮಗಳು, ಕಾಲ್ನಡಿಗೆ ಜಾಥಾ, ತಪಾಸಣಾ ಶಿಬಿರ ಮುಂತಾದ ವಿವಿಧ ಚಟುವಟಿಕೆಗಳನ್ನು ಆಯೋಜಿಸಲಾಗಿತ್ತು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪಕುಲಪತಿಗಳಾದ ಡಾ. ನಿರಂಜನ್ ಕುಮಾರ ಮತ್ತು ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಮುಖ್ಯ ಅತಿಥಿಗಳಾಗಿದ್ದು ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಈ ಕಾರ್ಯಕ್ರಮದಲ್ಲಿ ಹಿರಿಯ ಭೌತಚಿಕಿತ್ಸಕರು ಮತ್ತು ಎಂ.ಎಸ್.ರಾಮಯ್ಯ್ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸವಿತಾ ರವೀಂದ್ರ ಹಾಗೂ ಎಸ್.ಡಿ.ಎಂ. ಫಿಸಿಯೋಥೆರಪಿ ಕಾಲೇಜಿನ ಪ್ರಾಧ್ಯಾಪಕರಾದ ಡಾ. ರವಿ ಸವದತ್ತಿ ಅವರನ್ನು ಭೌತಚಿಕಿತ್ಸೆಯ ಕ್ಷೇತ್ರಕ್ಕೆ ನೀಡಿದ ಸೇವೆಯನ್ನು ಗುರುತಿಸಿ ಸನ್ಮಾನಿಸಲಾಯಿತು. ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪ ಕುಲಪತಿಗಳಾದ ವಿ. ಜೀವಂಧರ್ ಕುಮಾರ್, ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಹಣಕಾಸು ಅಧಿಕಾರಿಗಳಾದ ವಿ. ಜಿ. ಪ್ರಭು ಮತ್ತು ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಸಂಜಯ ಪರಮಾರ ಮತ್ತು ಇತರರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಡಾ. ಸಂಗೀತಾ ಅಪ್ಪಣ್ಣನವರ್ ಮುಖ್ಯ ಅತಿಥಿಗಳನ್ನು ಪರಿಚಯಿಸಿದರು. ಡಾ. ಜ್ಯೋತಿ ಜೀವಣ್ಣವರ ಅತಿಥಿಗಳನ್ನು ಸ್ವಾಗತಿಸಿದರು. ಡಾ. ತುಳಸಿ ಕುಲಕರ್ಣಿ ಮತ್ತು ಡಾ. ಐಶ್ವರ್ಯ ದೇಸಾಯಿ ಕಾರ್ಯಕ್ರಮವನ್ನು ನಿರೂಪಿಸಿದರು. ಡಾ. ಸುಧೀರ್ ಭಟ್ಟಭೋಲನ್ ವಂದರ್ನಾಪಣೆ ಸಲ್ಲಿಸಿದರು.

ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆ-2024

Article Image

ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆ-2024

ಚಾತುರ್ಮಾಸ ಹಾಗೂ ದಶಲಕ್ಷಣ ಮಹಾಪರ್ವದ ನಿಮಿತ್ಯವಾಗಿ ವಿಜಯ ಪಥ ಆಯೋಜಿಸಿರುವ ರಾಜ್ಯ ಮಟ್ಟದ ಆನ್‌ಲೈನ್ ಭಾಷಣ ಸ್ಪರ್ಧೆ-2024. “ಜೈನ ತೀರ್ಥಂಕರ ತತ್ವಾದರ್ಶಗಳು ಈಗ ಹೆಚ್ಚು ಪ್ರಸ್ತುತ” ಈ ವಿಷಯದ ಕುರಿತು ಮಾತನಾಡಿ ಅದನ್ನು ಲ್ಯಾಂಡ್ ಸ್ಕೆಪ್ ಮೋಡ್‌ನಲ್ಲಿ ವಿಡಿಯೋ ಮಾಡಿ ನಮ್ಮ ಟೆಲಿಗ್ರಾಂ (8152970080)ಗೆ ಕಳುಹಿಸಿಕೊಡುವುದು. ವಯೋಮಿತಿ: 12+ ಸಮಯ ಮಿತಿ: 8-10 ನಿಮಿಷ ವಿಡಿಯೋ ಕಳಿಸುವ ಮುನ್ನ ಉಚಿತವಾಗಿ ಹೆಸರು ನೊಂದಾಯಿಸಿಕೊಂಡು ಹೆಚ್ಚಿನ ಮಾಹಿತಿ ಪಡೆಯುವುದು ಕಡ್ಡಾಯ. ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ಅತ್ಯಾಕರ್ಷಕ ನಗದು ಬಹುಮಾನ ಹಾಗೂ ಭಾಗವಹಿಸಿದ ಎಲ್ಲರಿಗೂ ಇ-ಪ್ರಶಸ್ತಿ ನೀಡಲಾಗುವುದು. ಮಾಹಿತಿ ಪಡೆದು ವೀಡಿಯೋ ಕಳಿಸಲು ಕೊನೆಯ ದಿನ: 30-ಸೆಪ್ಟೆಂಬರ್-2024. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: ದಿನೇಶ್ ಜೈನ್: 8152970080/9844221864.

ದಶಧರ್ಮಗಳಲ್ಲಿ ನ್ಯಾನೋ ಕಥೆ ಆರ್ಜವ ಧರ್ಮ

Article Image

ದಶಧರ್ಮಗಳಲ್ಲಿ ನ್ಯಾನೋ ಕಥೆ ಆರ್ಜವ ಧರ್ಮ

ಉತ್ತಮ ಆರ್ಜವ ಧರ್ಮ : ಯೋಗಗಳ ವಕ್ರತೆ ಇಲ್ಲದಿರುವುದೇ ಆರ್ಜವ, ಅಂದರೆ ಕಪಟತೆ, ಕುಟಿಲತೆ, ಮಾಯಾಚಾರದಿಂದ ದೂರಯಿರುವುದು. ಕಾರ್ಯ, ಕೃತಿ, ಮನಸ್ಸು ಈ ಮೂರರಲ್ಲೂ ಏಕತೆಯಲ್ಲಿರುವುದು.ಅನ್ಯರ ಎದುರು ಹೇಗೆ ನಮ್ಮ ನುಡಿ ವರ್ತನೆ ಇರುವುದೋ ಅದೇ ರೀತಿ ಅವರು ಸಮ್ಮುಖದಲ್ಲಿ ಇಲ್ಲದೇ ಇದ್ದಾಗ ಅದೇ ಗೌರವ ಅಭಿಮಾನದಿಂದ ಇರುವುದು. ದಶಧರ್ಮಗಳಲ್ಲಿ ನ್ಯಾನೋ ಕಥೆ ಆರ್ಜವ ಧರ್ಮ ಅವರಿಬ್ಬರು ಒಂದೇ ಶಾಲಾ ಸಹಪಾಠಿಗಳು, ಒಬ್ಬ ಕಂಪನಿಯಲ್ಲಿ ಅ ಉದ್ಯೋಗದಲ್ಲಿದ್ದರೆ ಮತ್ತೊಬ್ಬ ನಿರುದ್ಯೋಗಿಯಾಗಿದ್ದ. ಉದ್ಯೋಗಕ್ಕಾಗಿ ಗೆಳೆಯನಲ್ಲಿ ಅವಕಾಶ ಕೇಳುತ್ತಿದ್ದಾಗ, ಗೆಳೆಯ ತನ್ನ ಪರಿಚಯಸ್ಥರ ಕಂಪನಿಯಲ್ಲಿ ಉದ್ಯೋಗ ಕೊಡಿಸಿದ, ಉದ್ಯೋಗ ದೊರೆತ ಕೆಲವೇ ತಿಂಗಳಲ್ಲಿ ವೃತ್ತಿಯಲ್ಲಿ ಬಹು ಬೇಗನೆ ಪ್ರಗತಿ ಕಂಡಾಗ ಅವನ ಏಳಿಗೆ ಉದ್ಯೋಗ ಕೊಡಿಸಿದವನಿಗೆ ಸಹಿಸಲಾಗಲಿಲ್ಲ, ನಾನೇ ಉದ್ಯೋಗ ಕೊಡಿಸಿ ಈಗ ನನಗಿಂತಲೂ ಹೆಚ್ಚಿನ ಸಂಬಳ ಪಡೆಯುತ್ತಿದ್ದಾನೆ ಎನ್ನುವ ಇರ್ಷಾ ಭಾವನೆಯಿಂದ ಅವನು ಉದ್ಯೋಗ ಕಳೆದು ಕೊಳ್ಳುವಂತೆ ಮಾಡಿದ. ಒಂದು ಸಂದರ್ಭದಲ್ಲಿ ಟಿವಿ ಪರದೆ ಮೇಲೆ ಪಂಡಿತರೊಬ್ಬರು ಆರ್ಜವ ಧರ್ಮದ ವ್ಯಾಖ್ಯಾನ ಮಾಡುತ್ತಿದ್ದರು "ನಾವು ಕಾಯಾ ವಾಚಾ ಮನಸಾ ಮೂರರಲ್ಲಿ ಏಕತೆ ಸಾಧಿಸಿ, ನುಡಿದಂತೆ ನಡೆಯಬೇಕು. ಕಪಟತೆಯಿಲ್ಲದೆ, ಇನ್ನೊಬ್ಬರಿಗೆ ಹಾನಿಯನ್ನು ಮಾಡದೇ ಬದುಕಬೇಕು. ಎಲ್ಲರಲ್ಲೂ ಸರಳಭಾವದಿಂದಯಿರುವುದೇ ಆರ್ಜವ ಧರ್ಮ "ಆರ್ಜವ ಧರ್ಮ ಪಾಲನೆಯಿಂದ ಮನಸ್ಸಿನ ಕಷಾಯಗಳು ಶಮನಗೊಳ್ಳುವುದರೊಂದಿಗೆ ಉತ್ತಮ ಭವ ಪ್ರಾಪ್ತಿಯಾಗುವುದು, "ಪಂಡಿತರ ಮಾತು ಕೇಳಿ, ಕೂಡಲೇ ಗೆಳೆಯನ ಮುಂದೆ ತಾನು ಮಾಡಿದ ದ್ರೋಹವನ್ನು ಹೇಳಿಕೊಂಡು ನಿನಗೆ ಉದ್ಯೋಗ ದೊರೆಯಲು ಹೇಗೆ ನಾನು ಕಾರಣನೋ ಹಾಗೆಯೇ ನನ್ನ ಕುಟೀಲ ಬುದ್ದಿಯಿಂದ ನಿನ್ನ ಉದ್ಯೋಗ ಕಳೆದುಕೊಳ್ಳುವಂತೆ ಮಾಡಿದೆ ಎಂದು ಅವನ ಎದುರೇ ಮರುಗಿದ. ತನ್ನ ಪಾಪದ ಕೆಲಸಕ್ಕಾಗಿ ಪಾಶ್ಚಾತ್ತಾಪ ಪಟ್ಟು ಗೆಳೆಯ ಉದ್ಯೋಗ ಪಡೆಯುವ ತನಕ ಅವನ ಖರ್ಚು ಎಲ್ಲವನ್ನು ಅವನೇ ನೋಡಿಕೊಂಡ, ಮುಂದೆ ಇಬ್ಬರೂ ಒಂದು ವ್ಯವಹಾರದಲ್ಲಿ ಯಶಸ್ವಿಯಾಗಿ ದಾನ ಧರ್ಮ ಪೂಜೆಯಲ್ಲಿ ತಮ್ಮ ಜೀವನ ಕಳೆದರು. ಉತ್ತಮ ಆರ್ಜವ ಧರ್ಮ ಇಹ ಪರದಲ್ಲೂ ಸನ್ಮಮಂಗಲ ಉಂಟಾಗುತ್ತದೆ. ಶ್ವೇತಾ ನಿಹಾಲ್ ಜೈನ್

ದಶಲಕ್ಷಣ ಪರ್ವದ ಉದ್ಘಾಟನಾ ಸಮಾರಂಭ

Article Image

ದಶಲಕ್ಷಣ ಪರ್ವದ ಉದ್ಘಾಟನಾ ಸಮಾರಂಭ

ವೇಣೂರಿನಲ್ಲಿ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ (ರಿ.) ವತಿಯಿಂದ ನಡೆಯುತ್ತಿರುವ ದಶಲಕ್ಷಣ ಪರ್ವ ಆಚರಣೆಯ ಉದ್ಘಾಟನಾ ಸಮಾರಂಭವು ಇಂದು (ಅ.08ರಂದು) ಶ್ರೀ ಬಾಹುಬಲಿ ಕ್ಷೇತ್ರ (ಯಾತ್ರಿ ನಿವಾಸ)ದಲ್ಲಿ ನಡೆಯಿತು. ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಜರುಗಿ, ನಂತರ ಕರ್ನಾಟಕ ಸರಕಾರದ ಮಾಜಿ ಸಚಿವರಾದ ಕೆ. ಅಭಯಚಂದ್ರ ಜೈನ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮೂಡುಬಿದಿರೆ ಶ್ರೀ ಜೈನ ಮಠದ ಪ. ಪೂ. ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಯವರು ಪಾವನ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಪರ್ವಗಳ ರಾಜ ದಶಲಕ್ಷಣ ಮಹಾಪರ್ವ. ಜೀವನ ಬಿಟ್ಟು ಧರ್ಮವಿಲ್ಲ. ಸಿಟ್ಟನ್ನು ನಿಗ್ರಹಿಸುವುದನ್ನ ಜೈನ ಆಚಾರ್ಯರು ತಿಳಿಸಿದ್ದಾರೆ. ಜ್ಞಾನಕ್ಕೆ ಗುಣಕ್ಕೆ ಉತ್ತಮ ಬೆಲೆ ಇದೆ. ಒಳಗಿನ ನಮ್ಮ ಮನಸ್ಸನ್ನು ಪರಿವರ್ತನೆ ಮಾಡಬೇಕು ಎಂದು ಜೈನ ಧರ್ಮ ಹೇಳುತ್ತದೆ ಎಂದರು. ಕ್ರೋಧವು ಮಾಯಾದಿಂದ ಮಾನದಿಂದ ಲೋಭದಿಂದ ಹೊರ ಬರಬಾರದು ಕ್ಷಮಾ ಧರ್ಮವನ್ನು ಪಾಲಿಸಬೇಕು. ಕ್ಷಮೆಯನ್ನು ಧಾರಣೆ ಮಾಡಬೇಕು. ದಶಲಕ್ಷಣವನ್ನು ನಾವು ನಮ್ಮ ಜೀವನದಲ್ಲಿ ಪಾಲಿಸೋಣ ಎಂದು ಹೇಳಿದರು. ಕೆ. ಅಭಯಚಂದ್ರ ಜೈನ್‌ರವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ, ಅವರು ಶಿಕ್ಷಣದಿಂದ ಒಳ್ಳೆಯ ಸ್ಥಾನಮಾನ, ಸಮಾಜದಲ್ಲಿ ಉತ್ತಮ ಗೌರವ ಸಿಗುತ್ತದೆ ಎಂದರು. ಈಗಿನ ಕಾಲಘಟ್ಟದಲ್ಲಿ ಯುವ ಪೀಳಿಗೆಯನ್ನು ಹುರಿದುಂಬಿಸುವ ಕೆಲಸ ಆಗಬೇಕು ಎಂದು ಹೇಳಿದರು. ಇತ್ತೀಚೆಗೆ ನಿಧನರಾದ ಯಂ. ವಿಜಯರಾಜ ಅಧಿಕಾರಿಯವರ ಪ್ರೀತಿ, ಪ್ರಾಮಾಣಿಕತೆ, ನೇರ ನುಡಿಯ ವ್ಯಕ್ತಿತ್ವವನ್ನು ನೆನಪಿಸಿಕೊಂಡರು. ಮೂಡುಬಿದಿರೆ ಜೈನ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಡಾ| ಪ್ರಭಾತ್ ಬಲ್ನಾಡ್‌ರವರು ಉತ್ತಮ ಕ್ಷಮಾ ಧರ್ಮದ ಬಗ್ಗೆ ಉಪನ್ಯಾಸ ನೀಡಿದರು. ಮನುಷ್ಯ ಜನ್ಮ ಶ್ರೇಷ್ಠವಾದ ಜನ್ಮವಾಗಿದೆ. ಪರ್ವಗಳ ರಾಜ ದಶಲಕ್ಷಣ ಪರ್ವದ ಹತ್ತು ಲಕ್ಷಣಗಳನ್ನು ಯಾವ ವ್ಯಕ್ತಿ ಅನುಸರಿಸುತ್ತಾನೋ ಅವನು ಪರಿಪೂರ್ಣವಾಗುತ್ತಾನೆ, ನಾಲ್ಕು ಕಷಾಯಗಳಾದ ಕ್ರೋಧ, ಮಾಯಾ, ಮಾನ, ಲೋಭ, ಇವುಗಳನ್ನು ನಿಗ್ರಹಿಸುವುದರಿಂದ ಮಾತ್ರ ಉತ್ತಮ ಕ್ಷಮಾ ಧರ್ಮವನ್ನು ಪಾಲಿಸಿದಂತಾಗುತ್ತದೆ. ಪುಣ್ಯ ಸಂಪಾದನೆಯು ಕ್ಷಮೆಯಿಂದಾಗುತ್ತದೆ. ಕ್ಷಮಾ ಧರ್ಮದ ಪಾಲನೆಯಿಂದ ಮೋಕ್ಷ ಮಾರ್ಗವನ್ನು ಪಡೆಯೋಣ ಎಂದು ಹೇಳಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮೂಡುಬಿದಿರೆ ಎಕ್ಸಲೆಂಟ್ ವಿದ್ಯಾಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್‌ರವರು ಯಾವುದು ಕೂಡ ಭಗವಂತನ ಇಚ್ಚೆಯಿಲ್ಲದೇ ನಡೆಯುವುದಿಲ್ಲ ಮನಸ್ಸಿನಲ್ಲಿ ಒಳ್ಳೆಯ ಭಾವನೆಯಿದ್ದರೆ ಏನನ್ನೂ ಬೇಕಾದರೂ ಸಾಧಿಸಬಹುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಮಿತಿಯ ಉಪಾಧ್ಯಕ್ಷರಾದ ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು, ಕೆಲವು ಘಟನೆಗಳನ್ನು ವಿವರಿಸುವ ಮೂಲಕ ಕ್ಷಮಾ ಧರ್ಮವನ್ನು ತಿಳಿಸಿದರು. ಯಾವುದೇ ಕಾರ್ಯಕ್ರಮ ಮಾಡುವಾಗ ಕ್ಷಮಾ ಧರ್ಮ ಇದ್ದರೆ ಮಾತ್ರ ಆ ಕಾರ್ಯಕ್ರಮ ಯಶಸ್ವಿಯಾಗಲು ಸಾಧ್ಯ ಎಂದು ಹೇಳಿದರು. ಈ ಸಂದರ್ಭದಲ್ಲಿ ಮಹಾಮಸ್ತಕಾಭಿಷೇಕದ ಸಮಯದಲ್ಲಿ ಜಾಗವನ್ನು ನೀಡಿ ಸಹಕರಿಸಿದ ವಿಜೇತ್ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಇತ್ತೀಚೆಗೆ ನಿಧನರಾದ ಶ್ರೀ ದಿಗಂಬರ ಜೈನತೀರ್ಥ ಕ್ಷೇತ್ರ ಸಮಿತಿಯ ಮಾಜಿ ಕಾರ್ಯದರ್ಶಿಗಳಾದ ಮಾರಗುತ್ತು ಯಂ. ವಿಜಯರಾಜ್ ಅಧಿಕಾರಿ ಅವರಿಗೆ ಶ್ರದ್ಧಾಂಜಲಿಯ ನುಡಿ ನಮನ ಸಲ್ಲಿಸಲಾಯಿತು. ವೇದಿಕೆಯಲ್ಲಿ ಅಳದಂಗಡಿ ಅರಮನೆಯ ಶಿವಪ್ರಸಾದ್ ಅಜಿಲರು, ಸಮಿತಿಯ ಕಾರ್ಯದರ್ಶಿಗಳಾದ ವಿ. ಪ್ರವೀಣ್ ಕುಮಾರ್ ಇಂದ್ರ, ಕೋಶಾಧಿಕಾರಿಗಳಾದ ಜಯರಾಜ್ ಕಂಬಳಿ ಉಪಸ್ಥಿತರಿದ್ದರು. ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು ಮತ್ತು ಶಿವಪ್ರಸಾದ್ ಅಜಿಲರು ವಹಿಸಿದ್ದರು. ಕಾರ್ಯಕ್ರಮದಲ್ಲಿ ಅತೀ ಹೆಚ್ಚಿನ ಸಂಖ್ಯೆಯ ಶ್ರಾವಕ-ಶ್ರಾವಕಿಯರು ಭಾಗವಹಿಸಿದ್ದರು. ನಿಧಿ ಜೈನ್ ಪ್ರಾರ್ಥಿಸಿ, ಸಮಿತಿಯ ಕಾರ್ಯದರ್ಶಿಗಳಾದ ವಿ. ಪ್ರವೀಣ್ ಕುಮಾರ್ ಇಂದ್ರ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಮಹಾವೀರ ಜೈನ್ ಮೂಡುಕೋಡಿಯವರು ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯವಾದವಿತ್ತರು.

ಇಂದಿನಿಂದ ದಶಲಕ್ಷಣ ಮಹಾ-ಪರ್ವ ಆಚರಣೆ

Article Image

ಇಂದಿನಿಂದ ದಶಲಕ್ಷಣ ಮಹಾ-ಪರ್ವ ಆಚರಣೆ

ವೇಣೂರು: ಇಲ್ಲಿಯ ಶ್ರೀ ದಿಗಂಬರ ಜೈನ ತೀರ್ಥ ಕ್ಷೇತ್ರ ಸಮಿತಿ (ರಿ.) ವತಿಯಿಂದ ದಶಲಕ್ಷಣ ಪರ್ವ ಆಚರಣೆಯು ಇತಿಹಾಸ ಪ್ರಸಿದ್ಧ ಭಗವಾನ್ ಶ್ರೀ ಬಾಹುಬಲಿ ಕ್ಷೇತ್ರದಲ್ಲಿ ಮೂಡುಬಿದಿರೆ ಶ್ರೀ ದಿಗಂಬರ ಜೈನ ಮಠದ ಪರಮಪೂಜ್ಯ 'ಭಾರತಭೂಷಣ' ಜಗದ್ಗುರು ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ, ದಿವ್ಯ ಆಶೀರ್ವಾದ ಹಾಗೂ ಮಾರ್ಗದರ್ಶನದಲ್ಲಿ ಸಮಿತಿಯ ಅಧ್ಯಕ್ಷರಾದ 'ಪದ್ಮವಿಭೂಷಣ' ರಾಜರ್ಷಿ ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರು, ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಇವರ ಪ್ರೇರಣೆ ಹಾಗೂ ಸಮಿತಿಯ ಉಪಾಧ್ಯಕ್ಷರಾದ ತಿಮ್ಮಣ್ಣರಸರಾದ ಡಾ| ಪದ್ಮಪ್ರಸಾದ್ ಅಜಿಲರು, ಅಳದಂಗಡಿ ಅರಮನೆ ಇವರ ನೇತೃತ್ವದಲ್ಲಿ ತಾ. 08-09-2024ನೇ ಆದಿತ್ಯವಾರದಿಂದ ತಾ. 17-09-2024ನೇ ಮಂಗಳವಾರದವರೆಗೆ ಪ್ರತಿ ದಿನ ಅಪರಾಹ್ನ ಗಂಟೆ 4-30ರಿಂದ 6-00ರ ವರೆಗೆ ಜರುಗಲಿದೆ. ವಿ. ಸೂ.: ಪ್ರತೀ ದಿನ ಅಪರಾಹ್ನ ಗಂಟೆ 4-00ರಿಂದ ವೇಣೂರು ಬಸದಿ ಭಗವಾನ್ ಶ್ರೀ ಪಾರ್ಶ್ವನಾಥ ಸ್ವಾಮಿಗೆ ಕ್ಷೀರಾಭಿಷೇಕ ಯಾತ್ರಿ ನಿವಾಸದಲ್ಲಿ ಉಪನ್ಯಾಸ ನಡೆಯಲಿದೆ.

ಎಕ್ಸಲೆಂಟ್ ಸಂಸ್ಥೆಯಲ್ಲಿ ರಾಜ್ಯ ಮಟ್ಟದ ಜೈನ ಯುವ ಸಮ್ಮೇಳನ ಉದ್ಘಾಟನೆ

Article Image

ಎಕ್ಸಲೆಂಟ್ ಸಂಸ್ಥೆಯಲ್ಲಿ ರಾಜ್ಯ ಮಟ್ಟದ ಜೈನ ಯುವ ಸಮ್ಮೇಳನ ಉದ್ಘಾಟನೆ

ಕಲ್ಲಬೆಟ್ಟು: ಎಕ್ಸಲೆಂಟ್ ಸಮೂಹ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಜೈನ ಸಮುದಾಯದ ಯುವ ಮನಸ್ಸುಗಳನ್ನು ಒಂದುಗೂಡಿಸಿ ವಿವಿಧ ಕ್ಷೇತ್ರಗಳ ಹಿರಿಯ ಸಾಧಕರಿಂದ ಜ್ಞಾನಾಮೃತವನ್ನು ಕೊಡಿಸುವ ಮೂಲಕ ಜೈನ ಸಮುದಾಯದ ಯುವಕ ಯುವತಿಯರನ್ನು ಸದೃಢಗೊಳಿಸುವ ಎರಡು ದಿನಗಳ ರಾಜ್ಯಮಟ್ಟದ ಜೈನ ಯುವ ಸಮ್ಮೇಳನ ಉದ್ಘಾಟನೆಗೊಂಡಿತು. ಮಾಜಿ ಸಚಿವರಾದ ಅಭಯ ಚಂದ್ರ ಜೈನ್ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡುತ್ತಾ ಸಮುದಾಯದ ಯುವ ಜನರು ಶಿಸ್ತು, ಆತ್ಮವಿಶ್ವಾಸ, ನಾಯಕತ್ವ ಗುಣಗಳು ಮತ್ತು ಸಮಾಜದೊಂದಿಗೆ ಬೆರೆತು ಹೊಣೆಗಾರಿಕೆಯನ್ನು ನಿರ್ವಹಿಸುವ ಶಕ್ತಿಯನ್ನು ಬೆಳೆಸಿಕೊಳ್ಳಬೇಕು. ದೂರದೃಷ್ಟಿಯ ಚಿಂತನೆಯಿಂದ ಪ್ರಪಂಚಕ್ಕೆ ಮಾದರಿಯಾಗಬೇಕು. ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಗಣ್ಯರಿಂದ ಪ್ರೇರಣೆಯನ್ನು ಪಡೆದು ಸಾಧನಾ ಮಾರ್ಗದಲ್ಲಿ ದಾಪುಗಾಲಿಡಬೇಕು. ಸಮಾಜದಲ್ಲಿ ಸುಶಿಕ್ಷಿತನಿಗೆ ಗೌರವ ಸದಾ ದೊರಕುತ್ತದೆ. ನಾಗರಿಕ ಸೇವೆಯನ್ನು ವೃತ್ತಿಯಾಗಿಸಿಕೊಂಡು ಸಮಾಜ ಸೇವೆ ಮಾಡುತ್ತಾ ದೇಶದ ಅಭಿವೃದ್ಧಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು. ಎಕ್ಸಲೆಂಟ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡಿ ಸಂಸ್ಥೆಯಲ್ಲಿ ಧ್ಯಾನ ಮಂದಿರ, ಜೈನ ಪಾಠಗಳು, ಭಜನೆಗಳ ಮೂಲಕ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಚಿಂತನೆಗೆ ಅವಕಾಶ ಮಾಡಿಕೊಡಲಾಗಿದೆ. ಆತ್ಮಶುದ್ಧಿಯ ಮೂಲಕ ಅದರ ಸದುಪಯೋಗವನ್ನು ನಮ್ಮ ವಿದ್ಯಾರ್ಥಿಗಳು ಪಡೆದುಕೊಳ್ಳುತ್ತಿರುವಾಗ ರಾಜ್ಯದ ಬೇರೆ ಬೇರೆ ಭಾಗಗಳ ಜೈನ ಸಮಾಜದ ಯುವಶಕ್ತಿಯನ್ನು ಒಂದುಗೂಡಿಸಿ ಜೈನ ಪರಂಪರೆಯ ಶ್ರೇಷ್ಠತೆಯ ಅರಿವನ್ನು ಮೂಡಿಸುವುದಷ್ಟೇ ಅಲ್ಲದೇ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರ ಪರಿಚಯದ ಮೂಲಕ ಯುವ ಜನರಲ್ಲಿ ಸ್ಫೂರ್ತಿಯನ್ನು ತುಂಬುವ ಸಲುವಾಗಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಸ್ತಾವನೆಗೈದರು. ಎರಡು ದಿನಗಳ ಈ ಸಮ್ಮೇಳನದಲ್ಲಿ ರಾಜ್ಯದ ನಾನಾ ಭಾಗಗಳ ಸುಮಾರು ಐದುನೂರು ಯುವಕ ಯುವತಿಯರು ಭಾಗವಹಿಸುತ್ತಿದ್ದಾರೆ. ನ್ಯಾಯಾಂಗ, ನಾಗರಿಕ ಸೇವೆ, ಮಾಧ್ಯಮ, ಶಿಕ್ಷಣ, ಕ್ರೀಡೆ ಮತ್ತು ಉದ್ಯಮ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಜೈನ ಸಮಾಜದ ಬಂಧುಗಳು ಸಮ್ಮೇಳನದಲ್ಲಿ ಪಾಲ್ಗೊಂಡು ಕಾರ್ಯಾಗಾರವನ್ನು ನಡೆಸಿಕೊಡಲಿದ್ದಾರೆ. ವೇದಿಕೆಯಲ್ಲಿ ಖ್ಯಾತ ನ್ಯಾಯವಾದಿಗಳಾದ ಎಂ. ಕೆ. ವಿಜಯಕುಮಾರ್, ಭಾರತೀಯ ಅರಣ್ಯ ಸೇವಾ ಅಧಿಕಾರಿಗಳಾದ ವಿಜಯಕುಮಾರ್ ಗೋಗಿ, ಕಾರ್ಯಕ್ರಮ ಸಂಚಾಲಕರಾದ ಅಜಿತ್ ಮುರುಗುಂಡೆ ಉಪಸ್ಥಿತರಿದ್ದರು. ಸಂಸ್ಥೆಯ ಕಾರ್ಯದರ್ಶಿ ರಶ್ಮಿತಾ ಜೈನ್ ವಂದಿಸಿದರು. ಆಡಳಿತ ನಿರ್ದೇಶಕ ಡಾ. ಬಿ ಪಿ ಸಂಪತ್ ಕುಮಾರ್ ನಿರೂಪಿಸಿದರು.

ವೇಣೂರು : ಡಾ. ಸುಕೇಶ್ ಕುಮಾರ್ ಬಜಿರೆ ಇವರಿಗೆ ಪಿಎಚ್.ಡಿ ಪದವಿ

Article Image

ವೇಣೂರು : ಡಾ. ಸುಕೇಶ್ ಕುಮಾರ್ ಬಜಿರೆ ಇವರಿಗೆ ಪಿಎಚ್.ಡಿ ಪದವಿ

ಡಾ. ಸುಕೇಶ್ ಕುಮಾರ್ ಬಜಿರೆ ಇವರು ಡಾ. ರಾಜೇಶ್ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಮಂಡಿಸಿದ "ರೋಲ್ ಆಫ್ ಕ್ವೊರಮ್ ಸೆನ್ಸಿಂಗ್ ಇನ್ ಸುಡೋಮೋನಾಸ್ ಅರಜಿನೋಸ ಅಡಾಪ್ಟ್ಯೇಷನ್ ಡ್ಯೂರಿಂಗ್ ಕ್ರಾನಿಕ್ ಒಬ್ಸ್ಟ್ರಕ್ಟಿವ್ ಪಲ್ಮನರಿ ಡಿಸೀಸ್" ಎಂಬ ಮಹಾಪ್ರಬಂಧಕ್ಕೆ ದೇರಳಕಟ್ಟೆಯ ಯೇನೆಪೊಯ ಪರಿಗಣಿತ ವಿಶ್ವವಿದ್ಯಾನಿಲಯವು ಫ್ಯಾಕಲ್ಟಿ ಆಫ್ ಸೈನ್ಸ್ ನಲ್ಲಿ ಪಿಎಚ್.ಡಿ ಪದವಿಯನ್ನು ನೀಡಿ ಗೌರವಿಸಿದೆ. ಬಜಿರೆ ಹಲ್ಲಂದೋಡಿ ಶಶಿ ಕುಮಾರ್ ಇಂದ್ರ ಹಾಗು ಭಾರತಿ ದಂಪತಿಗಳ ಪುತ್ರನಾದ ಇವರು ಪ್ರಸ್ತುತ 'ಯೂನಿವರ್ಸಿಟಿ ಆಫ್ ಟೆಕ್ಸಾಸ್ ಅಟ್ ಟೈಲರ್' ಅಮೇರಿಕಾದಲ್ಲಿ ಪೋಸ್ಟ್ ಡಾಕ್ಟೋರಲ್ ರಿಸರ್ಚ್ ಅಸೋಸಿಯೇಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಮಂಗಳೂರು: ಧವಳ ಕೋ-ಆಪರೇಟಿವ್ ಸೊಸೈಟಿ (ನಿ) ಇದರ ವಾರ್ಷಿಕ ಮಹಾಸಭೆ

Article Image

ಮಂಗಳೂರು: ಧವಳ ಕೋ-ಆಪರೇಟಿವ್ ಸೊಸೈಟಿ (ನಿ) ಇದರ ವಾರ್ಷಿಕ ಮಹಾಸಭೆ

ಮಂಗಳೂರಿನಲ್ಲಿ ಕೇಂದ್ರ ಕಛೇರಿಯನ್ನು ಹೊಂದಿ ಇತ್ತೀಚೆಗೆ ಆರಂಭವಾದ ಧವಳ ಕೋ-ಆಪರೇಟಿವ್ ಸೊಸೈಟಿ ಇದರ ವಾರ್ಷಿಕ ಮಹಾಸಭೆಯು ಸೆ. 1 ರಂದು ಮಂಗಳೂರು ಕೊಡಿಯಾಲ್ ಬೈಲ್ ನಲ್ಲಿರುವ ಸಿದ್ದಾರ್ಥ ಸಭಾಭವನ (ಜೈನ್ ಬೋರ್ಡಿಂಗ್) ದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಸುದರ್ಶನ್ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಸುದರ್ಶನ್ ಜೈನ್ ಇವರು ಈ ಸಂಸ್ಥೆಯ 2023-24 ನೇ ಸಾಲಿನಲ್ಲಿ 65.40 ಕೋಟಿಯಷ್ಟು ವ್ಯವಹಾರ ನಡೆಸಿ, ರೂ. 9.50 ಕೋಟಿ ಠೇವಣಿಯೊಂದಿಗೆ ಸಾಲ ಸೌಲಭ್ಯ ಒದಗಿಸಿ, ರೂ. 2.45 ಲಕ್ಷದಷ್ಟು ನಿವ್ವಳ ಲಾಭ ಗಳಿಸಿದೆ ಎಂದು ತಿಳಿಯಪಡಿಸಿದರು. ನಿರ್ದೇಶಕಾರದ ಶಶಿಕಲಾ ಕೆ.ಹೆಗ್ಡೆ ಕಾರ್ಕಳ ಇವರು ಸಭೆ ಕಾರ್ಯ ಕಲಾಪಗಳ ಕಾರ್ಯ ಸೂಚಿ ಮಂಡಿಸಿ ಅನುಮೋದನೆ ಪಡೆದುಕೊಂಡರು. ನಿರ್ದೇಶಕರಾದ ರಾಜಶ್ರೀ ಎಸ್. ಹೆಗ್ಡೆ ಇವರು 2023-24 ನೇ ಸಾಲಿನ ಆರ್ಥಿಕ ವ್ಯವಹಾರಗಳ ವರದಿಯನ್ನು ಮಂಡಿಸಿ, ಅನುಮೋದನೆ ಪಡೆದುಕೊಂಡರು. ಕಳೆದ ಸಾಲಿನ ವರದಿಯನ್ನು ಸುಧೀರ್ ಕುಮಾರ್ ವೈ, ಇವರು ಮಂಡಿಸಿದರೆ, ನಿರ್ದೇಶಕರಾದ ಪುಷ್ಪರಾಜ್ ಜೈನ್ ಇವರು ಈ ಸಂಸ್ಥೆ ಸ್ಥಾಪಿಸಿದ ಉದ್ದೇಶವನ್ನು ಸಭೆಗೆ ತಿಳಿಯಪಡಿಸಿದರು, ಹಾಗೂ ಇನ್ನೋರ್ವ ನಿರ್ದೇಶಕರಾದ ರಾಜೇಶ್ ಎಮ್. ರವರು ಮಾತನಾಡುತ್ತಾ ಸಂಸ್ಥೆಯ ಮಹಾಸಭೆಯ ಅಧಿಕಾರ-ಸದಸ್ಯರ ಕರ್ತವ್ಯಗಳ ಬಗ್ಗೆ ಸದಸ್ಯರಿಗೆ ಕಿವಿಮಾತು ಹೇಳಿದರು. ಸಂಸ್ಥೆಯ ನಿರ್ದೇಶಕರಾದ ಹೊಸ್ಮಾರು ಶಿಶುಪಾಲ್ ಜೈನ್ ರವರು ಸ್ವಾಗತಿಸಿದರು. ಸಂಸ್ಥೆಯ ಗೌರವ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಭಾಶ್ಚಂದ್ರ ಜೈನ್ ಕಾರ್ಯಕ್ರಮ ನಿರೂಪಣೆಯೊಂದಿಗೆ ಲೆಕ್ಕ ಪತ್ರಗಳನ್ನು ಮಂಡಿಸಿದರು. ಹಿರಿಯ ಪ್ರಭಂದಕ ನಿವೇಶ್ ಕುಮಾರ್ ಮುಂದಿನ ಸಾಲಿನ ಬಜೆಟ್‌ಗೆ ಅನುಮೋದನೆ ಪಡೆದರು. ನಿರ್ದೇಶಕರಾದ ಸಚಿನ್ ಕುಮಾರ್ ವಂದಿಸಿದರು.

ಪುದುವೆಟ್ಟು ಭ. 1008 ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಶಿಲಾನ್ಯಾಸ ಸಮಾರಂಭ

Article Image

ಪುದುವೆಟ್ಟು ಭ. 1008 ಶ್ರೀ ಪಾರ್ಶ್ವನಾಥ ಸ್ವಾಮಿ ಬಸದಿಯ ಶಿಲಾನ್ಯಾಸ ಸಮಾರಂಭ

ಜೈನ ಧರ್ಮವು ಜಗತ್ತಿನ ಅತ್ಯಂತ ಪುರಾತನ ಧರ್ಮಗಳಲ್ಲಿ ಒಂದು ಜೈನ ಧರ್ಮದ ತತ್ವ ಸಿದ್ಧಾಂತಗಳು ವೈಜ್ಞಾನಿಕ ಹಿನ್ನೆಲೆಯಲ್ಲಿದೆ ಜೈನ ಧರ್ಮೀಯರಲ್ಲಿ ಜೈನ ಧರ್ಮದ ಪ್ರಜ್ಞೆ ಉಳಿಸಿ ಬೆಳೆಸುವಲ್ಲಿ ಜಿನಚೈತ್ಯಾಲಯಗಳು ಪೂರಕ ಮತ್ತು ಪ್ರೇರಕ ಅಂತೆಯೇ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪುದುವೆಟ್ಟು ಗ್ರಾಮದ 600 ವರ್ಷಗಳ ಪುರಾತನ ಇತಿಹಾಸ ಹೊಂದಿರುವ ಭ| 1008 ಶ್ರೀ ಪಾರ್ಶ್ವನಾಥ ಸ್ವಾಮಿಯ ಬಸದಿಯು ಪಾಳುಬಿದ್ದಿತ್ತು ಈದೀಗ ಈ ಸೀಮೆಯ ಜೈನ ಗುರುಗಳಾದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರು ಶ್ರೀ ಜೈನ ಮಠ ಕಾರ್ಕಳ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ ವೀರೇಂದ್ರ ಹೆಗ್ಗಡೆಯವರ ದಿವ್ಯ ಮಾರ್ಗದರ್ಶನ ಮತ್ತು ಆಶೀರ್ವಾದದೊಂದಿಗೆ ಮತ್ತು ಬಸದಿಗೆ ಸಂಬಂಧಪಟ್ಟ ಎಲ್ಲಾ ಮನೆತನಗಳು ಸೇರಿಕೊಂಡು ಜೀರ್ಣೋದ್ಧಾರ ನಡೆಸಲು ತೀರ್ಮಾನಿಸಿದ್ದು ಇದರ ಶಿಲಾನ್ಯಾಸ ಸಮಾರಂಭ ದಿನಾಂಕ 28-08-2024ರಂದು ಗುರುಗಳಾದ ಪರಮಪೂಜ್ಯ ರಾಜಗುರು ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮಿಯವರು ಶ್ರೀ ಜೈನ ಮಠ ಕಾರ್ಕಳ ಇವರ ದಿವ್ಯ ಹಸ್ತದಿಂದ ಶಿಲಾನ್ಯಾಸ ಮತ್ತು ವಾಸ್ತು ತಜ್ಞ ಪಾದೂರು ಸುದರ್ಶನ್ ಇಂದ್ರ ಇವರ ಮಾರ್ಗದರ್ಶನದಲ್ಲಿ ಪೂಜಾ ಕಾರ್ಯಕ್ರಮಗಳು ನಡೆಯಿತು ಈ ಸಂದರ್ಭದಲ್ಲಿ ನಿಡ್ವಾಳ ಬಸದಿಗೆ ಸೇರಿರುವ ಎಲ್ಲಾ ಊರ-ಪರವೂರ ಶ್ರಾವಕ ಶ್ರಾವಕೀಯರು ಭಾಗವಹಿಸಿದ್ದರು.

ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ-25ನೇ ವರ್ದಂತಿ ಉತ್ಸವ

Article Image

ಮೂಡುಬಿದಿರೆ ಭಟ್ಟಾರಕ ಸ್ವಾಮೀಜಿ ಪಟ್ಟಾಭಿಷೇಕ-25ನೇ ವರ್ದಂತಿ ಉತ್ಸವ

ಮೂಡುಬಿದಿರೆ: ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಸ್ವಾಮೀಜಿ ಪಟ್ಟಾಭಿಷೇಕ 25ನೇ ವರ್ದಂತಿ ಉತ್ಸವದ ಅಂಗವಾಗಿ ಮಹಾವೀರ ಭವನದಲ್ಲಿ ಆ.29ರಂದು ಗುರುವಂದನೆ ಕಾರ್ಯಕ್ರಮ ನಡೆಯಿತು. ವಿದ್ವಾಂಸ ಡಾ. ಪ್ರಭಾಕರ ಜೋಶಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿ ಭಟ್ಟಾರಕ ಪರಂಪರೆ ಈ ಭಾಗದಲ್ಲಿ ವಿಶೇಷವಾದದ್ದು. ಭಾರತೀಯ ಧಾರ್ಮಿಕ ಪರಂಪರೆಯ ಸಂತ ಎಂದ ಅವರು ತಮ್ಮ ವರ್ದಂತಿ ಉತ್ಸವವನ್ನು ಆಡಂಬರದಿಂದ ಆಚರಿಸದೆ, ಪುರಾತನ ಜಿನ ಚೈತ್ಯಾಲಯದ ಜೀರ್ಣೋದ್ಧಾರ, 25 ತಾಳಮದ್ದಳೆ ಸರಣಿ ಕಾರ್ಯಕ್ರಮ, ಪ್ರಾಚೀನ, ಅಪರೂಪದ ಗ್ರಂಥಗಳಿರುವ ರಮಾರಾಣಿ ಶೋಧ ಸಂಸ್ಥಾನಕ್ಕೆ ಕಾಯಕಲ್ಪ ನೀಡಲು ಮುಂದಾಗಿರುವುದು ಅರ್ಥಪೂರ್ಣ ಆಚರಣೆ ಎಂದರು. ಭಟ್ಟಾರಕ ಸ್ವಾಮೀಜಿಯವರು ಶ್ರಾವಕ, ಶ್ರಾವಕಿಯರಿಗೆ ಆಶೀರ್ವಾದವಿತ್ತರು. ಬಸದಿಗಳ ಮೊಕ್ತೇಸರರಾದ ಪಟ್ಟಶೆಟ್ಟಿ ಸುದೇಶ್ ಆದರ್ಶ, ಎ. ಸುದೀಶ್ ಕುಮಾರ್ ಬೆಕ್ಕೇರಿ, ಚೌಟರ ಅರಮನೆಯ ಕುಲದೀಪ ಎಂ., ಎಂಸಿಎಸ್ ಬ್ಯಾಂಕ್ ಅಧ್ಯಕ್ಷ ಎಂ. ಬಾಹುಬಲಿ ಪ್ರಸಾದ್, ವಿಶೇಷ ಕರ್ತವ್ಯಾಧಿಕಾರಿ ಚಂದ್ರಶೇಖರ್ ಎಂ., ಧಾರ್ಮಿಕ ಮುಖಂಡರಾದ ಧನಕೀರ್ತಿ ಬಲಿಪ, ಶೈಲೇಂದ್ರ ಕುಮಾರ್, ಕೃಷ್ಣರಾಜ ಹೆಗ್ಡೆ, ಮಠದ ವ್ಯವಸ್ಥಾಪಕ ಸಂಜಯಂತ್ ಕುಮಾರ್, ಜಯಪ್ರಕಾಶ್ ಪಡಿವಾಳ್, ಸುಭಾಶ್ಚಂದ್ರ ಚೌಟ, ಮತ್ತಿತರರು ಉಪಸ್ಥಿತರಿದ್ದರು. ನೇಮಿರಾಜ್ ಕಾರ್ಯಕ್ರಮ ನಿರೂಪಿಸಿದರು. ನಂತರ ಅಹಿಂಸ ವಿಜಯ ಹಾಗೂ ತ್ರಿಶಂಕು ಸ್ವರ್ಗ ತಾಳಮದ್ದಳೆ ನಡೆಯಿತು.

ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ 'ನವ ನಕ್ಷತ್ರ ಸನ್ಮಾನ 2024'

Article Image

ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ 'ನವ ನಕ್ಷತ್ರ ಸನ್ಮಾನ 2024'

ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರಿಗೆ ನವ ನಕ್ಷತ್ರ ಸನ್ಮಾನ 2024 ಗೌರವ ಪುರಸ್ಕಾರವನ್ನು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿವಿ9 ಕನ್ನಡ ಸುದ್ದಿ ವಾಹಿನಿಯ 17ನೇ ಹುಟ್ಟು ಹಬ್ಬದ ಸಂಭ್ರಮಾಚರಣೆ ಸಂದರ್ಭದಲ್ಲಿ ಅರಮನೆ ಮೈದಾನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿರುವ ಸಾಧಕರಿಗೆ ಗೌರವ ಪುರಸ್ಕಾರ ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು.

ಎಸ್.ಡಿ.ಎಂ. ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ ಬಯೋಮೆಡಿಕಲ್ ಸೈನ್ಸಸ್‌ನಲ್ಲಿ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ

Article Image

ಎಸ್.ಡಿ.ಎಂ. ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ ಬಯೋಮೆಡಿಕಲ್ ಸೈನ್ಸಸ್‌ನಲ್ಲಿ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮ

ಸತ್ತೂರು, ಧಾರವಾಡ: "ಆರೋಹಣ"ವನ್ನು 23 ಆಗಸ್ಟ್ 2024 ರಂದು ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ್ ಅವರು ಉದ್ಘಾಟಿಸಿದರು. ಈ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಅಧ್ಯಾಪಕರಿಗೆ ವಿವಿಧ ಪಠ್ಯೇತರ ಚಟುವಟಿಕೆ, ಮನರಂಜನೆ ಕಾರ್ಯಕ್ರಮ, ಕ್ರೀಡೆ, ರಂಗೋಲಿ, ಛಾಯಾಗ್ರಹಣ, ಚಿತ್ರಕಲೆ, ಅಡುಗೆ, ಮೆಹಂದಿ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಈ ಚಟುವಟಿಕೆಗಳನ್ನು ಒಳಗೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮ ಮನಸ್ಸು ಮತ್ತು ದೇಹದ ಸಮತೋಲನೆಯನ್ನು ಕಾಪಾಡಿಕೊಳ್ಳಬಹುದು ಹಾಗೂ ಶೈಕ್ಷಣಿಕ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಬಹುದು. ಮುಖ್ಯ ಅತಿಥಿಗಳಾದ ಡಾ. ನಿರಂಜನ ಕುಮಾರ್ ಅವರು ಕಾರ್ಯಕ್ರಮ ಉದ್ದೇಶಿಸಿ ಮತನಾಡುತ್ತಾ: "ಆರೋಹಣ" ಎಂದರೆ ಉತ್ತಮ ಸಾಧನೆಗಾಗಿ ಸೃಜನಶೀಲತೆಯನ್ನು ಕಂಡುಕೊಳ್ಳುವುದು. ಸೃಜನಶೀಲತೆಯು ಅವರ ಅಧ್ಯಯನದ ಉದ್ದಕ್ಕೂ ವಿದ್ಯಾರ್ಥಿಗಳ ಶಕ್ತಿಯಾಗಿರಬೇಕು. ವಿದ್ಯಾರ್ಥಿಗಳು ಪರಸ್ಪರ ಹೋಲಿಕೆ ಮಾಡದೆ ಆರೋಗ್ಯಕರ ಸ್ಪರ್ಧೆಯನ್ನು ಅಳವಡಿಸಿಕೊಳ್ಳಬೇಕು. ತಪ್ಪುಗಳನ್ನು ಒಪ್ಪಿಕೊಂಡು ವಿದ್ಯಾರ್ಥಿಗಳು ಅವುಗಳ ಪುನರಾವರ್ತನೆಯಾಗದಂತೆ ಮುನ್ನಡೆಯಬೇಕು. ಶಿಕ್ಷಣವು ಸ್ಪಷ್ಟ ಉದ್ದೇಶ ಮತ್ತು ಜಾಗತಿಕ ಬೆಳವಣಿಗೆಯತ್ತ ಗಮನಹರಿಸಬೇಕು ಎಂದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್ ಸ್ಪರ್ಧಾ ವಿಜೇತರಿಗೆ ಬಹುಮಾನಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ ಕುಲಸಚಿವರಾದ ಡಾ. ಚಿದೇಂದ್ರ ಎಂ. ಶೆಟ್ಟರ್, ಹಣಕಾಸು ಅಧಿಕಾರಿಗಳಾದ ವಿ. ಜಿ. ಪ್ರಭು, ಸಂಶೋಧನಾ ನಿರ್ದೇಶಕರಾದ ಡಾ. ಕೆ. ಸತ್ಯಮೂರ್ತಿ ಮತ್ತಿತರರು ಉಪಸ್ಥಿತರಿದ್ದರು. ಎಸ್.ಡಿ.ಎಂ. ರಿಸರ್ಚ್ ಇನ್‌ಸ್ಟಿಟ್ಯೂಟ್ ಫಾರ ಬಯೋಮೆಡಿಕಲ್ ಸೈನ್ಸಸ್ ಸಂಸ್ಥೆಯ ಉಪ ಪ್ರಾಂಶುಪಾಲರಾದ ಡಾ. ಅಜಯಕುಮಾರ ಓಲಿ ಸ್ವಾಗತಿಸಿದರು. ಡಾ. ಅಜಯ್ ಎಸ್.ಕೆ ಪ್ರಶಸ್ತಿ ವಿಜೇತರ ಪಟ್ಟಿಯನ್ನು ವಾಚಿಸಿದರು. ಕುಮಾರಿ ಅಕ್ಸಾ ಶಫೀಕ್ ಕಾರ್ಯಕ್ರಮ ನಿರೂಪಿಸಿದರು. ಶ್ರೀದೇವಿ ಆಚಾರ್ಯ ವಂದನಾರ್ಪಣೆ ಸಲ್ಲಿಸಿದರು.

ತೌಳವ ಇಂದ್ರ ಸಮಾಜ(ರಿ.)ದಿಂದ ಆಟಿಡೊಂಜಿ ವಿಹಾರ ಕೂಟ

Article Image

ತೌಳವ ಇಂದ್ರ ಸಮಾಜ(ರಿ.)ದಿಂದ ಆಟಿಡೊಂಜಿ ವಿಹಾರ ಕೂಟ

ತೌಳವ ಇಂದ್ರ ಸಮಾಜದ "ಆಟಿಡೊಂಜಿ ವಿಹಾರ ಕೂಟ" ವಿನೂತನವಾದ ಕಾರ್ಯಕ್ರಮ ರವಿವಾರ ಕಾರ್ಕಳ ಶಿರ್ಲಾಲಿನ ಪ್ರಕೃತಿ ಸೌಂದರ್ಯದ ಮಡಿಲಲ್ಲಿರುವ ಸೂಡಿ ಬಸದಿ ಪರಿಸರದಲ್ಲಿ ನಡೆಯಿತು.ಬಸದಿಗೆ ಬನ್ನಿ ಕಾರ್ಯಕ್ರಮದಿಂದ ಪ್ರೇರಿತರಾಗಿ ಈ ಕಾರ್ಯಕ್ರಮ ರೂಪಿಸಲಾಗಿದ್ದು ಸದಸ್ಯರೆಲ್ಲರೂ ಮೂಡಬಿದಿರೆಯಿಂದ ಸೂಡಿಗೆ ವಿಹಾರಗೈದು ಆಟಿ ಕೂಟ ನಡೆಸಿದರು. "ಸೂಡಿ ಬಸದಿ ಸಂದರ್ಶಿಸುವವರಿಗೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎನ್ನುತ್ತಾ "ಪ್ರಸ್ತುತ ಕಾಲಘಟ್ಟದಲ್ಲಿ ಯುವ ಪೀಳಿಗೆಗೆ ನಮ್ಮ ಸಂಸ್ಕೃತಿ ತಿಳಿಸುವ ಪ್ರಯತ್ನ ಇದಾಗಿದ್ದು ಹಳ್ಳಿ ಪ್ರದೇಶದಲ್ಲಿರುವ ಬಸದಿಗಳನ್ನು ಸಂದರ್ಶಿಸಿ ಸ್ಥಳೀಯರೊಡನೆ ಒಂದುದಿನ ಕಳೆದು ಸಂಪರ್ಕ ಕೊಂಡಿಯನ್ನು ಹೆಚ್ಚಿಸಿಕೊಳ್ಳುವುದು ಒಂದು ಒಳ್ಳೆಯ ಕಾರ್ಯಕ್ರಮ ಅಲ್ಲದೆ ಸ್ಥಳೀಯ ಆಡಳಿತ ಮಂಡಳಿಯವರ ಕಾರ್ಯಕ್ಕೆ ಪ್ರೋತ್ಸಾಹ ಹಾಗೂ ಬೆಂಬಲ ಕೊಟ್ಟಂತೆಯೂ ಆಗುತ್ತದೆ "ಎಂದು ಮುಖ್ಯ ಅತಿಥಿಯಾದ ಭಾಗವಹಿಸಿ ಕಾರ್ಯಕ್ರಮ ಉದ್ಘಾಟಿಸಿದ ಗುಣಪಾಲ ಕಡಂಬ ಇಂದಿಲ್ಲಿ ಹೇಳಿದರು. ಸೂಡಿ ಬಸದಿ ಆಡಳಿತ ಮಂಡಳಿ ಕಾರ್ಯದರ್ಶಿ ಸೂರಜ್ ಜೈನ್ ರವರು ಮಾತನಾಡುತ್ತಾ ತೌಳವ ಇಂದ್ರ ಸಮಾಜದ ವಿನೂತನ ವಿಶಿಷ್ಟ ಶೈಲಿಯ ಕಾರ್ಯಕ್ರಮವನ್ನು ಶ್ಲಾಘಿಸುತ್ತಾ ವೇದಿಕೆಯಲ್ಲಿದ್ದು ಶುಭ ಹಾರೈಸಿದರು. ತೌಳವ ಇಂದ್ರ ಸಮಾಜದ ಅಧ್ಯಕ್ಷರಾದ ಜ್ಞಾನಚಂದ್ರ ಇಂದ್ರರು ಪ್ರಾಸ್ತಾವಿಕ ಮಾತು ಆಡಿ, ಅತಿಥಿಗಳನ್ನು ಸ್ವಾಗತಿಸಿದರು. ನಿಕಟ ಪೂರ್ವ ಅಧ್ಯಕ್ಷರಾದ ಅರ್ಕಕೀರ್ತಿ ಇಂದ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮೊದಲಿಗೆ ಬಸದಿಯ ಶ್ರೀ ಆದಿನಾಥ ಸ್ವಾಮಿಗೆ ಕ್ಷೀರಾಭಿಷೇಕ ಪೂಜೆಯನ್ನು ನಯನ ಇಂದ್ರರು ನೆರವೇರಿಸಿದ ಬಳಿಕ ಬಸದಿಯ ಸಭಾಂಗಣದಲ್ಲಿ ಕಾರ್ಯಕ್ರಮ ಉದ್ಘಾಟನೆ ಮಾಡಿ ಸದಸ್ಯರಿಗೆ ವಿವಿಧ ಮನರಂಜನಾತ್ಮಕ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನಗಳನ್ನು ವಿತರಿಸಲಾಯಿತು. ಮದ್ಯಾಹ್ನ ಗಂಜಿ ಚಟ್ನಿಯೂಟ, ಉಪಹಾರಕ್ಕೆ ಬಸಳೆಪುಂಡಿ, ಅರಸಿನ ಎಲೆಕಡುಬು ಮುಂತಾದ ಸಾಂಪ್ರದಾಯಿಕ ತಿಂಡಿಗಳನ್ನು ನೀಡಲಾಯಿತು. ಕಾರ್ಯಕ್ರಮದ ಅಂಗವಾಗಿ ಅಲ್ಲಿಂದ ವಿಹಾರ ನಿರ್ಮಾಣ ಹಂತದಲ್ಲಿರುವ ಮೂಡಾರು ಬಸದಿಗೆ ತೆರಳಿ ದರ್ಶನ ಪಡೆದು ಮುಂದುವರಿದು ಹತ್ತಿರದ ಜಲಪಾತ ವೀಕ್ಷಣೆಯೂ ನಡೆಯಿತು. ಮೇಘನಾ ಪ್ರಾರ್ಥನೆ ನೆರವೇರಿಸಿದರು, ತೌಳವ ಇಂದ್ರ ಸಮಾಜದ ಉಪಾಧ್ಯಕ್ಷರಾದ ಅಕ್ಷಯ ಕುಮಾರ್ ಮಳಲಿಯವರು ಕಾರ್ಯಕ್ರಮ ಸಂಯೋಜಿಸಿ, ನಿರ್ವಹಣೆ ಮಾಡಿದರು, ಕಾರ್ಯದರ್ಶಿ ಅಭಯಕುಮಾರ್ ಬಿ. ಧನ್ಯವಾದಗಳನ್ನು ಅರ್ಪಿಸಿದರು.

ಭಾರತಿಯ ಜೈನ್ ಮಿಲನ್ ವಲಯ 8 ರ ವಾರ್ಷಿಕ ಮಹಾಸಭೆ

Article Image

ಭಾರತಿಯ ಜೈನ್ ಮಿಲನ್ ವಲಯ 8 ರ ವಾರ್ಷಿಕ ಮಹಾಸಭೆ

ಭಾರತಿಯ ಜೈನ್ ಮಿಲನ್ ವಲಯ 8ರ ವಾರ್ಷಿಕ ಮಹಾಸಭೆ ಬೆಂಗಳೂರಿನ ಮಂಜುನಾಥ ಸ್ವಾಮಿ ಕಲಾಮಂಟಪದಲ್ಲಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾದ ಡಿ. ಸುರೇಂದ್ರಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರಗಿತು. ಸಾಮೂಹಿಕ ಪಂಚ ನಮಸ್ಕಾರದೊಂದಿಗೆ ಪ್ರಾರಂಭವಾದ ಕಾರ್ಯಕ್ರಮದಲ್ಲಿ ಮಂಗಳೂರು ವಿಭಾಗದ ಉಪಾಧ್ಯಕ್ಷರಾದ ಸುದರ್ಶನ್ ಜೈನ್, ನಿರ್ದೇಶಕರಾದ B. ಸೋಮಶೇಖರ ಶೆಟ್ಟಿ ಹಾಗೂ ಇತರ ಉಪಾಧ್ಯಕ್ಷರು, ನಿರ್ದೇಶಕರು ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು, ಜೈನ್ ಮಿಲನ್ ರಾಷ್ಟೀಯ ಉಪಾಧ್ಯಕ್ಷರಾದ ಅನಿತಾ ಸುರೇಂದ್ರ ಕುಮಾರ್ ದಿಕ್ಸೂಚಿ ಭಾಷಣ ಮಾಡಿದರು, ಸಭಾಧ್ಯಕ್ಷರಾದ ಡಿ. ಸುರೇಂದ್ರ ಕುಮಾರ್ ಅವರು ಸಂಘಟನೆ ಬಲಪಡಿಸುವ ನಿಟ್ಟಿನಲ್ಲಿ ಹಾಗೂ ಜಿನಭಜನೆ ಕಾರ್ಯಕ್ರಮದ ಕುರಿತು ಮಾರ್ಗದರ್ಶನ ನೀಡಿದರು. ವಲಯಾಧ್ಯಕ್ಷರಾದ ಯುವರಾಜ್ ಭಂಡಾರಿ ಅವರು ಎಲ್ಲಾ ವಿಭಾಗಗಳ ಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿ ನೀಡಿದರು, ಕಾರ್ಯದರ್ಶಿ ರತ್ನರಾಜ್ ನಿರೂಪಿಸಿದರು. ಕಾರ್ಯಕ್ರಮದಲ್ಲಿ ವಲಯದ ಪದಾಧಿಕಾರಿಗಳು, ಉಪಾಧ್ಯಕ್ಷರು, ನಿರ್ದೇಶಕರು ಭಾಗವಹಿಸಿ, ಕಾರ್ಯಕ್ರಮ ಯಶಸ್ವಿಗೊಳಿಸಿದರು, ಶಾಂತಿಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.

ಬೆಂಗಳೂರಿನ ರಾಜಾಜಿನಗರ: ಜೈನ್ ಮಿಲನ್ ಕಾರ್ಯಕ್ರಮ

Article Image

ಬೆಂಗಳೂರಿನ ರಾಜಾಜಿನಗರ: ಜೈನ್ ಮಿಲನ್ ಕಾರ್ಯಕ್ರಮ

ಬೆಂಗಳೂರು: ಕರ್ನಾಟಕದಲ್ಲಿ ಜೈನ ಧರ್ಮ ಸಮಸ್ಯೆಗಳನ್ನು ಎದುರಿಸುತ್ತಿದ್ದು , ಉತ್ತರ ಕರ್ನಾಟಕದ ಸಂಘಟನೆ ಕೊರತೆಯ ಜೊತೆಗೆ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಸುಹಾಸ್ತಿ ಜೈನ ಮಿಲನ. ಮುಖಂಡ, ಕಲಾವಿದ ಚಿತ್ತ ಜಿನೇಂದ್ರ ತಿಳಿಸಿದರು. ಅವರು ರಾಜಾಜಿನಗರ ಜೈನ್ ಮಿಲನ್ ಮಾಸಿಕ ಸಭೆಯಲ್ಲಿ, ಮುಖ್ಯ ಅತಿಥಿಗಳಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಜೈನ ಧರ್ಮದ ಸಮಸ್ಯೆ, ಸಂಘಟನೆ, ಸಂಸ್ಕೃತಿ, ಸಂಸ್ಕಾರ, ಆರ್ಥಿಕ ರಾಜಕೀಯ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮಸ್ಯೆಗಳ ಬಗ್ಗೆ ಮಾತನಾಡಿದ ಅವರು ಉತ್ತರ ಕರ್ನಾಟಕದಲ್ಲಿ ಸಮಸ್ಯೆಗಳು ಎದ್ದು ಕಾಣುತ್ತಿವೆ, ಜೈನ ಧರ್ಮದ ಪರಿಸ್ಥಿತಿ ಹೀನಾಯವಾಗಿದ್ದು ಸಂಘಟನೆ ಕೊರತೆ ಎದ್ದು ಕಾಣುತ್ತಿವೆ ಈ ಬಗ್ಗೆ ಎಲ್ಲರೂ ಸಂಘಟಿತರಾಗಿ ಧ್ವನಿ ಗೂಡಿಸಬೇಕೆಂದರು. ರಾಜಾಜಿನಗರ ಜೈನ್ ಮಿಲನ್ ಅಧ್ಯಕ್ಷೇ ಮಮತಾ ರಾಜೇಂದ್ರ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಸುಧಾ ಬಾಹುಬಲಿ, ಬಾಹುಬಲಿ ಗೌರಜ್ ಸೇರಿದಂತೆ ರಾಜಾಜಿನಗರ ಜೈನ ಮಿಲನ್ ಪದಾಧಿಕಾರಿಗಳು, ಶ್ರಾವಕ -ಶ್ರಾವಕಿಯರು ಭಾಗವಹಿಸಿದ್ದರು. ಇದೇ ಸಂದರ್ಭದಲ್ಲಿ ಕಲಾವಿದ ಚಿತ್ತ ಜಿನೇಂದ್ರರವರನ್ನು ಸನ್ಮಾನಿಸಲಾಯಿತು. ಜೆ. ರಂಗನಾಥ - ತುಮಕೂರು

ವೇಣೂರು: ಭಾರತೀಯ ಜೈನ್ ಮಿಲನ್ ತಿಂಗಳ ಮಾಸಿಕ ಸಭೆ

Article Image

ವೇಣೂರು: ಭಾರತೀಯ ಜೈನ್ ಮಿಲನ್ ತಿಂಗಳ ಮಾಸಿಕ ಸಭೆ

ವೇಣೂರು: ಭಾರತೀಯ ಜೈನ್ ಮಿಲನ್ ನ ಜುಲೈ ತಿಂಗಳ ಮಾಸಿಕ ಸಭೆ ಹಾಗೂ ಆಹಾರವೋತ್ಸವ ಕಾರ್ಯಕ್ರಮವನ್ನು ಆ. 15ರಂದು ಶ್ರೀ ಬಾಹುಬಲಿ ಸಭಾಭವನದಲ್ಲಿ ವಿಜೃಂಭಣೆಯಿಂದ ಆಚರಿಸಲಾಯಿತು. ವೀರ್ ವೀರಾಂಗನೆಯರು ತಮ್ಮ ಮನೆಯಲ್ಲಿ ತಯಾರಿಸಿದ ಸುಮಾರು 50 ಬಗೆಯ ಆಹಾರ ಪದಾರ್ಥಗಳನ್ನು ಪ್ರದರ್ಶಿಸಿದರು. ಮಾಸಿಕ ಸಭೆಯ ಅಧ್ಯಕ್ಷತೆಯನ್ನು ಸುಕುಮಾರ್ ಜೈನ್ ವಹಿಸಿದ್ದರು. ಆಹಾರೋತ್ಸವದ ಉದ್ಘಾಟನೆಯನ್ನು ತಿಮ್ಮಣ್ಣರಸರಾದ ಡಾಕ್ಟರ್ ಪದ್ಮಪ್ರಸಾದ್ ಅಜಿಲರು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಪ್ರಮೋದ್ ಕುಮಾರ್ ಉಪಸ್ಥಿತರಿದ್ದರು. ಸಾಂಪ್ರದಾಯಿಕ ತಿಂಡಿ ತಿನಿಸುಗಳ ಮಹತ್ವದ ಕುರಿತು ಉದ್ಘಾಟಕರು ಮತ್ತು ಅತಿಥಿಗಳು ವಿವರಿಸಿದರು. ವಿಜಯರಾಜ ಅಧಿಕಾರಿ ಅವರ ಪ್ರಾರ್ಥನೆಯೊಂದಿಗೆ ನಿರ್ಮಲ್ ಕುಮಾರ್ ಜೈನ್ ಸ್ವಾಗತಿಸಿ, ಪ್ರಾರಂಭವಾದ ಕಾರ್ಯಕ್ರಮವನ್ನು ಮಹಾವೀರ ಜೈನ್ ನಿರೂಪಿಸಿದರು. ಸುನಿತಾ ಎನ್. ಬಲ್ಲಾಳ್ ರವರ ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ಸುಮಾರು 150 ವೀರ್ ವೀರಾಂಗನೆಯರು ಮತ್ತು ವೀರ್ ಕುವರಿಯರು ಮತ್ತು ವೀರ್ ಕುವರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸತ್ತೂರು, ಧಾರವಾಡ: ಡಾ. ಎಸ್.ಕೆ ಜೋಶಿ ಅವರಿಗೆ ಬಿಳ್ಕೋಡುಗೆ ಸಮಾರಂಭ

Article Image

ಸತ್ತೂರು, ಧಾರವಾಡ: ಡಾ. ಎಸ್.ಕೆ ಜೋಶಿ ಅವರಿಗೆ ಬಿಳ್ಕೋಡುಗೆ ಸಮಾರಂಭ

ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಹಿರಿಯ ರೇಡಿಯಾಲಜಿ ಪ್ರಾಧ್ಯಾಪಕರು ಮತ್ತು ಮಾಜಿ ಪ್ರಾಂಶುಪಾಲರು ಹಾಗೂ ವಿಶ್ವವಿದ್ಯಾಲಯದ ಸಹ ಉಪ ಕುಲಪತಿಗಳಾದ ಡಾ. ಎಸ್.ಕೆ ಜೋಶಿಯವರು ಸೇವಾ ನಿವೃತ್ತಿ ಹೊಂದಿದ ಸಂಧರ್ಭದಲ್ಲಿ ಇತ್ತೀಚಿಗೆ ಅವರನ್ನು ಬೀಳ್ಕೋಡಲಾಯಿತು. ಸುಮಾರು 21 ವರ್ಷಗಳ ಕಾಲ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಹಾಗೂ ಸಹ ಉಪ ಕುಲಪತಿಗಳಾಗಿ ಅನನ್ಯ ಕೊಡುಗೆಯನ್ನು ನೀಡಿದ ಡಾ. ಎಸ್.ಕೆ ಜೋಶಿ ಅವರ ಸೇವೆಯನ್ನು ಎಸ್.ಡಿ.ಎಂ. ವಿಶ್ವವಿದ್ಯಾಲಯದ ಉಪ ಕುಲಪತಿಗಳಾದ ಡಾ. ನಿರಂಜನ್ ಕುಮಾರ ಶ್ಲಾಘಿಸಿದರು ಮತ್ತು ಎಸ್.ಡಿ.ಎಂ. ವೈದ್ಯಕೀಯ ಕಾಲೇಜಿನ ಬೆಳವಣಿಗೆಗೆ ಅವರ ಸೇವೆ ಅಪಾರ ಕೊಡುಗೆ ನೀಡಿದೆ ಎಂದು ಹೇಳಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ನಿರ್ದೇಶಕಿಯವರಾದ ಪದ್ಮಲತಾ ನಿರಂಜನ್, ಆಡಳಿತ ನಿರ್ದೇಶಕರಾದ ಸಾಕೇತ್ ಶೆಟ್ಟಿ, ಸಹ ಉಪಕುಲಪತಿಗಳಾದ ವಿ. ಜೀವಂಧರ ಕುಮಾರ, ಹಣಕಾಸು ಅಧಿಕಾರಿಯಾದ ವಿ. ಜಿ. ಪ್ರಭು ಅವರು ಡಾ. ಎಸ್.ಕೆ ಜೋಶಿ ಅವರಿಗೆ ಸನ್ಮಾನ ಪತ್ರ, ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು. ಡಾ. ಎಸ್.ಕೆ ಜೋಶಿಯವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ತಾವು ಎಸ್.ಡಿಎಂ. ಸಂಸ್ಥೆಗೆ ಸೇರುವಾಗ ಆಡಳಿತ ಮಂಡಳಿಯವರ ಮಾಡಿದ ಸಹಕಾರವನ್ನು ಸ್ಮರಿಸಿಕೊಂಡರು. ತಮ್ಮ ಸುದೀರ್ಘ 21 ವರ್ಷಗಳ ಸೇವೆಗೆ ಅನುವು ಮಾಡಿಕೊಟ್ಟ ಕುಲಪತಿಗಳು, ಉಪ ಕಲಪತಿಗಳು ಮತ್ತಿತರೆಲ್ಲರಿಗೂ ತಮ್ಮ ಕೃತಜ್ಞತೆಯನ್ನು ಹೇಳಿದರು. ತಾವು ಸಂಸ್ಥೆಯಿಂದ ನಿರ್ಗಮಿಸುತ್ತಿರುವ ಈ ಸಂದರ್ಭದಲ್ಲಿ ಎಸ್.ಡಿಎಂ. ಸಂಸ್ಥೆಗಳು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು. ಎಸ್.ಡಿ.ಎಂ. ವಿಶ್ವವಿದ್ಯಾಲಯದ ಅಂಗ ಸಂಸ್ಥೆಗಳ ಮುಖ್ಯಸ್ಥರುಗಳು, ವೈದ್ಯಕೀಯ ಅಧೀಕ್ಷಕರು, ಉಪ ವೈದ್ಯಕೀಯ ಅಧೀಕ್ಷಕರು, ಶೂಶ್ರುಷಕ ಅಧೀಕ್ಷಕರು ಮತ್ತು ವೈದ್ಯಕೀಯ ಕಾಲೇಜಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲರಾದ ಡಾ. ರತ್ನಮಾಲಾ ದೇಸಾಯಿ ಮತ್ತು ಕಾಲೇಜಿನ ಹಿರಿಯ ಪ್ರಾಧ್ಯಾಪಕರಾದ ಡಾ. ನರೇಂದ್ರ ಶಾ ಅವರು ಡಾ. ಎಸ್.ಕೆ. ಜೋಶಿ ಅವರ ಸಮರ್ಪಣಾ ಸೇವೆ ಮತ್ತು ಅವರು ಕಾಲೇಜಿನಲ್ಲಿ ಅನುಸರಿಸಿದ ಶಿಸ್ತು ಬದ್ದತೆಯನ್ನು ಸ್ಮರಿಸಿದರು. ಉಪ ಕುಲಸಚಿವರಾದ ಡಾ. ಅಜಂತಾ ಜಿ.ಎಸ್ ಅವರು ಅತಿಥಿಗಳನ್ನು ಸ್ವಾಗತಿಸಿದರು. ಡಾ. ವಿನುತಾ ಚಿಕ್ಕಮಠ್ ಕಾರ್ಯಕ್ರಮವನ್ನು ನಿರೂಪಿಸಿದರು. ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿಗಳಾದ ಬಾಬಣ್ಣ ಶೆಟ್ಟಿಗಾರ್ ವಂದನಾರ್ಪಣೆ ಸಲ್ಲಿಸಿದರು.

ಯೋಗ ಕ್ಷೇತ್ರದಲ್ಲಿ ಉನ್ನತ ಸೇವೆ, ಸಾಧನೆ: ಡಾ. ಶಶಿಕಾಂತ ಜೈನ್‌ರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

Article Image

ಯೋಗ ಕ್ಷೇತ್ರದಲ್ಲಿ ಉನ್ನತ ಸೇವೆ, ಸಾಧನೆ: ಡಾ. ಶಶಿಕಾಂತ ಜೈನ್‌ರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ

ಯೋಗ ಕ್ಷೇತ್ರದಲ್ಲಿ ಮಾಡಿದ ಉನ್ನತ ಸೇವೆ, ಸಾಧನೆಗಾಗಿ ಧರ್ಮಸ್ಥಳದ ಶಾಂತಿವನ ಟ್ರಸ್ಟ್ ನ ಯೋಗ ನಿರ್ದೇಶಕ ಡಾ. ಶಶಿಕಾಂತ ಜೈನ್ ಏಶಿಯಾ ಪೆಸಿಫಿಕ್ ಐಕಾನ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅ. 22 ರಂದು ಗುರುವಾರ ಕೊಲೊಂಬೊದಲ್ಲಿ ನಡೆಯುವ ಸಮಾರಂಭದಲ್ಲಿ ಅವರಿಗೆ ಅಂತಾರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

ಮಾರಗುತ್ತು ವಿಜಯರಾಜ್ ಅಧಿಕಾರಿ ನಿಧನ

Article Image

ಮಾರಗುತ್ತು ವಿಜಯರಾಜ್ ಅಧಿಕಾರಿ ನಿಧನ

ಬೆಳ್ತಂಗಡಿ ತಾಲೂಕಿನ ವೇಣೂರು, ಶ್ರೀಕ್ಷೇತ್ರ ಮುದ್ದಾಡಿ ದೈವಸ್ಥಾನದ ಆಡಳಿತ ಮೊಕ್ತೇಸರರು, ನಿವೃತ್ತ ಉಪನ್ಯಾಸಕರಾದ ಮಾರಗುತ್ತು ವಿಜಯರಾಜ್ ಅಧಿಕಾರಿಯವರು ಇಂದು (ಆ. 16ರಂದು) ಸಂಜೆ ಹೃದಯಾಘಾತದಿಂದ ನಿಧನ ಹೊಂದಿದರು. ಇವರು ಪತ್ನಿ ಮತ್ತು ಮೂವರು ಪುತ್ರಿಯರನ್ನು ಸಹಿತ ಅಪಾರ ಬಂಧು ವಗ೯ವನ್ನು ಅಗಲಿದ್ದಾರೆ. ವೇಣೂರು ಶ್ರೀ ಜೈನ ದಿಗಂಬರ ತೀಥ೯ಕ್ಷೇತ್ರ ಸಮಿತಿಯ ಮಾಜಿ ಕಾಯ೯ದಶಿ೯ಗಳು, ವಿವೇಕಾನಂದ ಸೇವಾ ಟ್ರಸ್ಟ್ ನ ಸ್ಥಾಪಾಕಾಧ್ಯಕ್ಷರೂ ಆದ ಇವರು ಪ್ರಗತಿ ಪರ ಕೃಷಿಕರು, ಧಾರ್ಮಿಕ, ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡವರು.

ಮುನಿಶ್ರೀ ಪುಣ್ಯಸಾಗರ ಮಹಾರಾಜರ ಆಶೀರ್ವಾದ ಪಡೆದ ಧರ್ಮಸ್ಥಳದ ಹೆಗ್ಗಡೆ ಸಹೋದರರು

Article Image

ಮುನಿಶ್ರೀ ಪುಣ್ಯಸಾಗರ ಮಹಾರಾಜರ ಆಶೀರ್ವಾದ ಪಡೆದ ಧರ್ಮಸ್ಥಳದ ಹೆಗ್ಗಡೆ ಸಹೋದರರು

ಹುಬ್ಬಳ್ಳಿ ದಿಗಂಬರ ಜೈನ ಬೋರ್ಡಿಂಗಿನಲ್ಲಿ ಚಾತುರ್ಮಾಸ ನಿರತ ಮುನಿಶ್ರೀ ಪುಣ್ಯಸಾಗರ ಮಹಾರಾಜರ ದರ್ಶನಕ್ಕಾಗಿ ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ ವೀರೇಂದ್ರ ಹೆಗ್ಗಡೆ ಮತ್ತು ಶ್ರೀ ಸುರೇಂದ್ರ ಹೆಗಡೆಯವರು ಇಂದು ನಗರಕ್ಕೆ ಆಗಮಿಸಿ ಪೂಜ್ಯರಿಂದ ಆಶೀರ್ವಾದ ಪಡೆದರು. ಈ ಸಂಧರ್ಭದಲ್ಲಿ ಧಾರ್ಮಿಕ ಚರ್ಚೆಗಳನ್ನೂ ಮಾಡಿದ ಹೆಗ್ಗಡೆ ಸಹೋದರರು ಇಲ್ಲಿ ನಡೆದಿರುವ ವರ್ಷಾಯೋಗ ಧಾರ್ಮಿಕ ಪ್ರಭಾವನೆಗೆ ಪ್ರೇರಕವಾಗಿದೆ ಎಂದು ತಿಳಿಸಿ ಅತ್ಯಂತ ಹರ್ಷ ವ್ಯಕ್ತಪಡಿಸಿದರು. ಪೂಜ್ಯ ಶ್ರೀ ಹೆಗ್ಗಡೆ ಸಹೋದರರನ್ನು ದಿಗಂಬರ ಜೈನ ಬೋರ್ಡಿಂಗ ಆಡಳಿತಮಂಡಳಿ ಸದಸ್ಯರು ಸನ್ಮಾನಿಸಿ ಗೌರವಿಸಿದರು, ಈ ಸಂದರ್ಭದಲ್ಲಿ ದಿಗಂಬರ ಜೈನ ಬೋರ್ಡಿಂಗ ಅಧ್ಯಕ್ಷ ವಿದ್ಯಾಧರ್ ಪಾಟೀಲ, ಆರ್ ಟಿ ತವನಪ್ಪನವರ, ದೇವೇಂದ್ರಪ್ಪ ಕಾಗೇನವರ, ಜಿ ಜಿ ಲೋಗೋಳ, ವಿಮಲಚಂದ ಸಂಗಮಿ, ಪ್ರಶಾಂತ್ ಬಿಶೆಟ್ಟಿ, ಮಹಾವೀರ ಮಣಕಟ್ಟಿ, ಸಂತೋಷಕುಮಾರ ಮುರಗಿ ಪಾಟಿಲ, ಭರತ ಬೀಳಗಿ, ಮಹಿಳಾ ಅಧ್ಯಕ್ಷರಾದ ಸ್ಮಿತಾ ವಾಕಳೆ, ಎ ಎಸ್ ಪಾಟೀಲ, ಮನ್ಮತ ಕ್ಯಾಸಾ, ತ್ರಿಶಲಾ ಮಾಲಗತ್ತಿ ಮತ್ತು ಎಸ್ ಡಿ ಎಂನ ಕಾರ್ಯದರ್ಶಿ ಜೀವoದರಕುಮಾರ ಹಾಗೂ ಹಲವಾರು ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದರು. ವರದಿ: ಎಸ್ ಆರ್ ಮಲ್ಲಸಮುದ್ರ

ಉಜಿರೆ: ಜೈನ್ ಮಿಲನ್ ಆಹಾರೋತ್ಸವ

Article Image

ಉಜಿರೆ: ಜೈನ್ ಮಿಲನ್ ಆಹಾರೋತ್ಸವ

ಭಾರತೀಯ ಜೈನ್ ಮಿಲನ್,ಬೆಳ್ತಂಗಡಿ ಹಾಗೂ ಧೀಮತಿ ಮಹಿಳಾ ಸಂಘ , ಉಜಿರೆ ಜಂಟಿ ಆಶ್ರಯದಲ್ಲಿ ನಡೆದ ಆಷಾಡ ಮಾಸದ ವಿಶೇಷ ಆಹಾರೋತ್ಸವ ಕಾರ್ಯಕ್ರಮ ಅರ್ಥ ಪೂರ್ಣವಾಗಿ ಜರಗಿತು, ಈ ಕಾರ್ಯಕ್ರಮವನ್ನು ಎರಡೂ ಸಂಸ್ಥೆಗಳ ಗೌರವ ಸಲಹೆಗಾರ ರಾಗಿರುವ ಸೋನಿಯಾ ಯಶೋವರ್ಮ ಅವರು ಚೆನ್ನೆ ಮಣೆ ಆಡುವ ಮೂಲಕ ಉದ್ಘಾಟಿಸಿ, ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಪ್ರಯತ್ನ ಈ ಕಾರ್ಯಕ್ರಮದ ಮೂಲಕ ಆಗುತ್ತಿದೆ, ಔಷಧೀಯ ಗುಣ ಇರುವ ಕಾಲ ಕಾಲಕ್ಕೆ ಹೊಂದುವ, ದೊರೆಯುವ ಪದಾರ್ಥ ವಸ್ತುಗಳನ್ನು ಉಪಯೋಗಿಸುವಂತೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ವಲಯ ನಿರ್ದೇಶಕರಾದ ಬಿ. ಪ್ರಮೋದ್ ಕುಮಾರ್, ಪ್ರಾಂಶುಪಾಲರು ಮಾತನಾಡಿ ವರ್ಷದ ಪ್ರತಿ ತಿಂಗಳಿಗೂ ಅದರದ್ದೇ ಆದ ಮಹತ್ವ ಇದೆ, ಆಷಾಡ ಮಾಸದ ವಿಶೇಷ ಗಳನ್ನು,ಮುಂದಿನ ಜನಾಂಗ ಅರಿತು ನಮ್ಮ ಪರಂಪರೆಯನ್ನು ಬೆಳೆಸಿಕೊಂಡು ಹೋಗಲು ಇಂತಹ ಕಾರ್ಯಕ್ರಮ ಅವಶ್ಯಕ ಎಂದು ತಿಳಿಸಿದರು. ಇನ್ನೋರ್ವ ವಲಯ ನಿರ್ದೇಶಕರಾದ B.ಸೋಮಶೇಖರ ಶೆಟ್ಟಿ ಅವರು ಮಾತನಾಡಿ, ಹಿಂದಿನ ಕಾಲದಲ್ಲಿ ಅನಿವಾರ್ಯವಾಗಿದ್ದ ಆಷಾಡ ಮಾಸದ ತಿಂಡಿ ತಿನಸುಗಳು ಇಂದು ಆಹಾರೋತ್ಸವವಾಗಿ ಆಚರಿಸಲ್ಪಡುತ್ತದೆ, ಆರೋಗ್ಯಕ್ಕೆ ಪೂರಕವಾದ ಆಹಾರ ಪದ್ಧತಿಯನ್ನು ನಾವು ಅನುಸರಿಸುವುದರಿಂದ ಅನೇಕ ಬಗೆಯ ಕಾಯಿಲೆಗಳಿಂದ ದೂರ ಇರಬಹುದು, ಇಂತಹ ಆಹಾರ ವಸ್ತುಗಳಲ್ಲಿ ಇರುವ ಆರೋಗ್ಯಪೂರಕ ಮಹತ್ವದ ಅರಿವು ಮೂಡಿಸಲು ಮತ್ತು ಹಿಂದಿನ ಕಾಲದ ಜನಜೀವನದ ಪರಿಚಯ ಇಂದಿನ ಯುವ ಪೀಳಿಗೆಗೆ ಪರಿಚಯಿಸುವ ಈ ಕಾರ್ಯ ಕ್ರಮ ಯಶಸ್ವಿ ಆದ ಬಗ್ಗೆ ಮತ್ತು ಅಪಾರ ಸಂಖ್ಯೆಯಲ್ಲಿ ಸೇರಿದ ಸದಸ್ಯರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಧೀಮತಿ ಮಹಿಳಾ ಸಮಾಜದ ಅಧ್ಯಕ್ಷೆ ರಜತ ಪಿ. ಶೆಟ್ಟಿ ಮಾತನಾಡಿ ಈ ಕಾರ್ಯ ಕ್ರಮವನ್ನು ವಿಶೇಷ ರೀತಿಯಲ್ಲಿ ಆಯೋಜಿಸಿದ ಹಿನ್ನಲೆಯನ್ನು ವಿವರಿಸಿದರು, ಪ್ರಕೃತಿಯಲ್ಲಿ ದೊರೆಯುವ ಆಹಾರ ಪದಾರ್ಥಗಳನ್ನು ಉಪಯೋಗಿಸುವಾಗ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ವಿವರಿಸಿ ತಿಳಿಸಿದರು. ಜೈನ್ ಮಿಲನ್ ಅಧ್ಯಕ್ಷರಾದ ಡಾ, ನವೀನ್ ಕುಮಾರ್ ಜೈನ್ ಅವರು ಮಾತನಾಡಿ, ಆಹಾರ ಪದ್ಧತಿಯ ಹಿನ್ನೆಲೆಯನ್ನು ವೈಜ್ಞಾನಿಕವಾಗಿ ವಿವರಿಸಿ, ಉಪ್ಪಿನ ಕಾಯಿಯಂತಹ ವಸ್ತುಗಳನ್ನು ಪ್ಲಾಸ್ಟಿಕ್ ಡಬ್ಬಗಳಲ್ಲಿ ತುಂಬಿಸಿ ಇಟ್ಟು ಉಪಯೋಗಿಸುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ, ಆಹಾರ ಪದಾರ್ಥಗಳು ಮತ್ತು ಅದನ್ನು ತಯಾರಿಸುವ ಬಗ್ಗೆ ಸಂಗ್ರಹಿಸಿ ಇಡುವ ವಸ್ತುಗಳ ಬಗ್ಗೆ ವಿಶೇಷ ಮಾಹಿತಿಯನ್ನು ವೈಜ್ಞಾನಿಕ ಅಧ್ಯಯನ ಹಿನ್ನೆಲೆಯಲ್ಲಿ ವಿವರಿಸಿ ತಿಳಿಸಿದರು. ಈ ದಿನದ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಧೀಮತಿ ಮಹಿಳಾ ಸಮಾಜದ ಸರ್ವರಿಗೂ ಮಿಲನ್ ನ ಸರ್ವಸದಸ್ಯರಿಗೂ ಕೃತ್ತಜ್ಞತೆ ಸಲ್ಲಿಸಿದರು, ಧೀಮತಿ ಮಹಿಳಾ ಸಮಾಜದ ಕಾರ್ಯದರ್ಶಿ ಪ್ರಾಧ್ಯಾಪಕಿ ದಿವ್ಯ ಪ್ರಧಾನ್ ಪ್ರಾಸ್ತಾವಿಕ ಮಾತಿನೊಂದಿಗೆ ಸರ್ವರನ್ನೂ ಸ್ವಾಗತಿಸಿದರು. ಜೈನ್ ಮಿಲನ್ ಕಾರ್ಯದರ್ಶಿ ಸಂಪತ್ ಕುಮಾರ್ ಜೈನ್ ನಿರ್ವಹಿಸಿದ ಕಾರ್ಯಕ್ರಮದಲ್ಲಿ ನಿಖಿತ್ ಕುಮಾರ್ ವಂದಿಸಿದರು. ಸ್ಮಿತಾ ಪ್ರಶಾಂತ್ ಶಾಂತಿ ಮಂತ್ರ ಪಠಿಸಿದರು, ವಿಶೇಷ ಖಾದ್ಯಗಳನ್ನು ಅಳದಂಗಡಿಯ ಸುನಿಲ್ ಕುಮಾರ್ ಜೈನ್ ತಯಾರಿಸಿದ್ದು ಎಲ್ಲರ ಪ್ರಶಂಸೆಗೆ ಪಾತ್ರರಾದರು.

ವರೂರ ನವಗ್ರಹತೀರ್ಥದ ದ್ವಿತೀಯ ಮಹಾಮಸ್ತಕಾಭಿಷೇಕದ ಸರ್ವಾಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಗೌರವ ಸನ್ಮಾನ

Article Image

ವರೂರ ನವಗ್ರಹತೀರ್ಥದ ದ್ವಿತೀಯ ಮಹಾಮಸ್ತಕಾಭಿಷೇಕದ ಸರ್ವಾಧ್ಯಕ್ಷರಾದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಗೌರವ ಸನ್ಮಾನ

ಅಂತರಾಷ್ಟ್ರೀಯ ಮಟ್ಟದ ಮತ್ತು ಪ್ರಪಂಚಕ್ಕೆ ಮಾದರಿಯಾಗಲಿರುವ ನವ ತೀರ್ಥoಕರರ ದ್ವಿತೀಯ ಮಹಾಮಸ್ತಕಾಭಿಷೇಕ, ಹಾಗೂ ಪ್ರಪಂಚದ ಮೊದಲ 405 ಅಡಿ ಎತ್ತರದ " ಸುಮೇರು ಪರ್ವತದ" ಲೋಕಾರ್ಪಣೆ ಮತ್ತು ಜಿನಬಿಂಬಗಳ ಪ್ರತಿಷ್ಠಾ ಮಹಾಮಹೋತ್ಸವದ ಸರ್ವಾಧ್ಯಕ್ಷರಾಗಿ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮಭೂಷಣ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಯವರನ್ನು ಆಯ್ಕೆ ಮಾಡಿದ ಹಿನ್ನಲೆಯಲ್ಲಿ ಇಂದು ಡಾ. ಹೆಗ್ಗಡೆಯವರ ನಿವಾಸದಲ್ಲಿ ಪರಮಪೂಜ್ಯ ರಾಷ್ಟ್ರಸಂತ ಯುವಾಚಾರ್ಯ ಶ್ರೀ 108 ಗುಣದರಂದಿ ಮುನಿ ಮಹಾರಾಜರ ಹಾಗೂ ಸ್ವಸ್ತಿಶ್ರೀ ಧರ್ಮಸೇನ ಭಟ್ಟಾರಕ ಸ್ವಾಮಿಗಳ ಶುಭ ಆಶೀರ್ವಾದದೊಂದಿಗೆ ಮತ್ತು ಸೂಚನೆಯ ಪ್ರಕಾರ ಸನ್ಮಾನಿಸಲಾಯಿತು. ಸನ್ಮಾನಕ್ಕೆ ಉತ್ತರಿಸಿದ ಡಾ. ಹೆಗ್ಗಡೆಯವರು ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ನನಗೆ ಅಧ್ಯಕ್ಷ ಸ್ಥಾನ ನೀಡಿ ಜವಾಬ್ದಾರಿ ವಹಿಸಿದ ಪೂಜ್ಯರ ಆಶಯದಂತೆ ಕಾರ್ಯಕ್ರಮವನ್ನು ಅತ್ಯಂತ ಯಶಸ್ವಿಗೊಳಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು. ಈ ಸಮಾರಂಭದಲ್ಲಿ ನವಗ್ರಹ ಕ್ಷೇತ್ರದ ವತಿಯಿಂದ ರಾಜೇಶ್ವರಿ ದಿದಿ, ಸಂದೀಪ ಖ್ಯಾತನವರ ಹಾಗೂ ಎ ಜಿ ಎಂ ಸಮೂಹ ಸಂಸ್ಥೆಯ ಸಿಬ್ಬಂದಿ ಮತ್ತು ಜೈನ ಬೋರ್ಡಿಂಗ ಅಧ್ಯಕ್ಷ ವಿದ್ಯಾಧರ ಪಾಟೀಲ, ಸದಸ್ಯರಾದ ದೇವಿಂದ್ರಪ್ಪ ಕಾಗೆನವರ, ವಿಮಲ್ ತಾಳಿಕೋಟಿ ಸಂತೋಷ್ ಮುರಗಿ ಪಾಟೀಲ್, ವಿಮಲನಾಥ ಸಂಗಮಿ, ಪ್ರಶಾಂತ ಬಿಶೆಟ್ಟಿ, ಭರತ ಬಿಳಗಿ ಮತ್ತು ಹುಬ್ಬಳ್ಳಿ ಜೈನ ಸಮಾಜದ ಅಧ್ಯಕ್ಷ ರಾಜೇಂದ್ರ ಬೀಳಗಿ, ಶಾಂತಿನಾಥ ಹೋತಪೇಟೆ ಛಬ್ಬಿ ಹುಬ್ಬಳ್ಳಿ ವರೂರ ಗ್ರಾಮಗಳ ಮತ್ತು ಹಲವಾರು ಜೈನ ಸಮಾಜದ ಮುಖಂಡರು ಭಾಗವಹಿಸಿದ್ದರು. ವರದಿ: ಎಸ್ ಆರ್ ಮಲ್ಲಸಮುದ್ರ

ಹೆಗ್ಗಡೆಯವರ ಕಾರ್ಯವೈಖರಿಗೆ ಪ್ರಧಾನಿಯವರಿಂದ ಮೆಚ್ಚುಗೆ

Article Image

ಹೆಗ್ಗಡೆಯವರ ಕಾರ್ಯವೈಖರಿಗೆ ಪ್ರಧಾನಿಯವರಿಂದ ಮೆಚ್ಚುಗೆ

ಡಾ|| ಡಿ. ವೀರೇಂದ್ರ ಹೆಗ್ಗಡೆಯವರು ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಜಿಯವರನ್ನು ಆ.9 ರಂದು ಪಾರ್ಲಿಮೆಂಟ್ ಭವನದ ಪ್ರಧಾನ ಕಚೇರಿಯಲ್ಲಿ ಭೇಟಿಯಾಗಿ ಮೂರನೇ ಬಾರಿ ಪ್ರಧಾನಮಂತ್ರಿ ಆಯ್ಕೆಯಾಗಿರುವುದಕ್ಕೆ ಶುಭಹಾರೈಸಿ ಶ್ರೀ ಕ್ಷೇತ್ರದ ಶ್ರೀ ಮಂಜುನಾಥ ಸ್ವಾಮಿಯ ಪ್ರಸಾದವನ್ನು ನೀಡಿ ದೇಶಕ್ಕೆ ಇನ್ನು ಉತ್ತಮ ಸೇವೆ ಸಲ್ಲಿಸುವಂತಾಗಲಿ ಎಂದು ಆಶೀರ್ವದಿಸಿದರು. ನಂತರ ಅನೇಕ ವಿಷಯಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಿದರು. ರಾಜ್ಯಸಭಾ ಸಂಸದರ ವ್ಯಾಪ್ತಿಗೆ ಬರುವ ನಿಧಿಯನ್ನು ಹೆಗ್ಗಡೆಯವರು ಬೀದರ್‌ನಲ್ಲಿ ವಿನೂತನವಾಗಿ ವಿನಿಯೋಗಿಸಿ ಒಂದು ಕ್ಷೀರಕ್ರಾಂತಿಗೆ ನಾಂದಿ ಹಾಡಿರುವ ಬಗ್ಗೆ ಪ್ರಧಾನಮಂತ್ರಿಯವರಿಗೆ ವಿವರಿಸಿದರು. ಇದು ಒಂದು ಮಾದರಿ ಸಂಸದರ ನಿಧಿಯ ಸದ್ವಿನಿಯೋಗ ಎಂದು ಪ್ರಧಾನಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು. ಹಾಗೆಯೇ ರಾಜ್ಯದಾದ್ಯಂತ ಗ್ರಾಮಾಭಿವೃದ್ಧಿ ಯೋಜನೆಯಿಂದ ನಿರ್ವಹಿಸಲ್ಪಡುತ್ತಿರುವ 10 ಸಾವಿರ ಸಿ.ಎಸ್.ಸಿ. ಕೇಂದ್ರಗಳ ಮೂಲಕ ಕೇಂದ್ರ ಸರಕಾರದ ಹಾಗೂ ಸಿ.ಎಸ್.ಸಿ.ಯ ಪ್ರಮುಖ ಸೇವೆಗಳನ್ನು ಗ್ರಾಮೀಣ ಜನತೆಯ ಮನೆ ಬಾಗಿಲಿಗೆ ತಲುಪಿಸುತ್ತಿರುವ ಬಗ್ಗೆ ಹೆಗ್ಗಡೆಯವರು ವಿವರಿಸಿದರು. ಇಲ್ಲಿಯವರೆಗೆ ಸುಮಾರು 3 ಕೋಟಿ ಸಿ.ಎಸ್.ಸಿ. ಸೇವೆಗಳು ಯೋಜನೆಯ ಮೂಲಕ ಜನಸಾಮಾನ್ಯರಿಗೆ ತಲುಪಿರುವ ಬಗ್ಗೆ ಪ್ರಧಾನಮಂತ್ರಿಗಳು ಅಚ್ಚರಿ ವ್ಯಕ್ತಪಡಿಸಿದರು. ಹೆಗ್ಗಡೆಯವರ ಈ ಎಲ್ಲಾ ಸೇವೆಗಳ ಚಿಂತನೆಯು ದೇಶಕ್ಕೆ ಮಾದರಿಯಾಗಲಿ ಎಂದು ಪ್ರಧಾನಮಂತ್ರಿಗಳು ಶ್ಲಾಘಿಸಿದರು. ಬೀದರ್‌ನಲ್ಲಿ ಕ್ಷೀರಕ್ರಾಂತಿ: ಡಿ. ವೀರೇಂದ್ರ ಹೆಗ್ಗಡೆಯವರು ತಮ್ಮ ಸಂಸದರ ನಿಧಿಯಿಂದ ಉತ್ತರ ಕರ್ನಾಟಕದ ಹಿಂದುಳಿದ ಜಿಲ್ಲೆಯಾದ ಬೀದರ್‌ನಲ್ಲಿ ಒಂದು ಕ್ಷೀರಕ್ರಾಂತಿಯನ್ನೇ ಮಾಡುವ ಯೋಜನೆ ಹಾಕಿಕೊಂಡು ಕೆ.ಎಂ.ಎಫ್. ಸಹಯೋಗದೊಂದಿಗೆ ಅನೇಕ ಹಾಲು ಒಕ್ಕೂಟಗಳನ್ನು ಅಭಿವೃದ್ಧಿಪಡಿಸಿ ಹೈನುಗಾರಿಕೆ ಮಾಡಲು ಅನೇಕ ಪ್ರೋತ್ಸಾಹಗಳನ್ನು ನೀಡಿದ್ದಾರೆ. ಸಂಸದರ ನಿಧಿಯಿಂದ ಹಾಲು ಸಂಗ್ರಹಣಾ ಕಟ್ಟಡಗಳನ್ನು ನಿರ್ಮಿಸಿದ್ದಲ್ಲದೆ, ಹಾಲು ಸಂಗ್ರಹವನ್ನು ಹೆಚ್ಚಿಸಿಕೊಳ್ಳಲು ಅತ್ಯಾಧುನಿಕ ಯಂತ್ರಗಳಾದ ಆಟೋಮ್ಯಾಟಿಕ್ ಮಿಲ್ಕ್ ಕಲೆಕ್ಟಿಂಗ್ ಯುನಿಟ್(ಎ.ಎಂ.ಸಿ.ಯು.), ಸ್ಪೈನ್‌ಲೆಸ್ ಸ್ಟೀಲ್ ಕ್ಯಾನ್, ಪ್ಯಾಟೋಮ್ಯಾಟಿಕ್ ಯಂತ್ರ, ಹಾಲು ತೂಕದ ಯಂತ್ರಗಳನ್ನು ಒದಗಿಸಿರುತ್ತಾರೆ. ಯೋಜನೆಯ ಕೃಷಿ ಅಧಿಕಾರಿಗಳನ್ನು ನಿಯೋಜಿಸಿ ಗ್ರಾಮೀಣ ರೈತರರಿಗೆ ಹೈನುಗಾರಿಕೆಯ ಬಗ್ಗೆ ಸೂಕ್ತ ತರಬೇತಿಯನ್ನು ನೀಡಿದ್ದಾರೆ. ಈ ಯೋಜನೆ ಪ್ರಾರಂಭವಾಗುವುದಕ್ಕಿಂತ ಮುಂಚೆ ಜಿಲ್ಲೆಯಲ್ಲಿ ಹಾಲು ಉತ್ಪಾದನೆ ಪ್ರತಿನಿತ್ಯ 18 ಸಾವಿರ ಲೀಟರ್ ಮಾತ್ರ ಇತ್ತು. ಇದು ಯೋಜನೆಯಿಂದಾಗಿ ಪ್ರತಿ ದಿನ ಗರಿಷ್ಠ 60 ಸಾವಿರ ಲೀಟರ್‌ಗೆ ಏರಿಕೆ ಕಂಡಿದ್ದು ಕೆಲವೇ ತಿಂಗಳುಗಳಲ್ಲಿ ಪ್ರತಿನಿತ್ಯ 1 ಲಕ್ಷ ಲೀಟರ್ ಹಾಲು ಸಂಗ್ರಹದ ಗುರಿಯನ್ನು ತಲುಪಲಿದ್ದು ಇದೊಂದು ಐತಿಹಾಸಿಕ ಉತ್ಪಾದನೆಯಾಗಿರುತ್ತದೆ. ಸಂಸದರ ನಿಧಿಯ ಬಳಕೆಗೆ ಇದು ಒಂದು ಉತ್ತಮ ಮಾದರಿ ಎಂದು ಪ್ರಧಾನಮಂತ್ರಿಗಳು ಶ್ಲಾಘಿಸಿದರು. ಆಯುಷ್ಮಾನ್ ಸೇವೆಗೂ ಮೆಚ್ಚುಗೆ: ಡಿ. ವೀರೇಂದ್ರ ಹೆಗ್ಗಡೆಯವರು ಮುನ್ನಡೆಸುತ್ತಿರುವ ಗ್ರಾಮಾಭಿವೃದ್ಧಿ ಯೋಜನೆಯೊಂದಿಗೆ ಕೇಂದ್ರ ಸರಕಾರದ ತಂತ್ರಜ್ಞಾನ ಮತ್ತು ಮಾಹಿತಿ ವಿದ್ಯುನ್ಮಾನ ಸಚಿವಾಲಯದ ಮಹತ್ವದ ಕಾರ್ಯಕ್ರಮವಾದ ಸಿ.ಎಸ್.ಸಿ. ಸೇವೆಗಳನ್ನು ಜನ ಸಾಮಾನ್ಯರಿಗೆ ನೀಡುವ ಒಂದು ಪಾಲುದಾರಿಕಾ ಒಪ್ಪಂದವಾಗಿರುತ್ತದೆ. ರಾಜ್ಯಾದ್ಯಾಂತ ಯೋಜನೆಯು 10 ಸಾವಿರ ಗ್ರಾಹಕ ಸೇವಾಕೇಂದ್ರಗಳ ಮೂಲಕ ಸಿ.ಎಸ್.ಸಿ. ಸೇವೆಯನ್ನು ಯಶಸ್ವಿಯಾಗಿ ಜನಸಾಮಾನ್ಯರಿಗೆ ಯೋಜನೆಯಿಂದ ನೀಡಲಾಗುತ್ತಿದೆ. ‘ಆಯುಷ್ಮಾನ್ ಭಾರತ್’ ಸರಕಾರದ ಮಹತ್ವದ ಆರೋಗ್ಯ ವಿಮೆಯಾಗಿದ್ದು ಅರ್ಹ ಫಲಾನುಭವಿಗಳಿಗೆ ಇದನ್ನು ಉಚಿತವಾಗಿ ಸಿ.ಎಸ್.ಸಿ. ಕೇಂದ್ರಗಳ ಮೂಲಕ ವಿತರಿಸಿದ್ದು ಇಲ್ಲಿಯವರೆಗೆ 1.40 ಕೋಟಿಗೂ ಅಧಿಕ ಜನರು ‘ಆಯುಷ್ಮಾನ್ ವಿಮೆ’ಗೆ ನೋಂದಾಯಿಸಿಕೊಂಡಿದ್ದಾರೆ. ಗ್ರಾಮೀಣ ಮಟ್ಟದಲ್ಲಿ ಜನರಿಗೆ ಇಷ್ಟು ದೊಡ್ಡ ಸಂಖ್ಯೆಯಲ್ಲಿ ಸೇವೆ ನೀಡುವ ಬಗ್ಗೆಯೂ ಪ್ರಧಾನಮಂತ್ರಿಗಳು ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.

ಮಾಲತಿ ವಸಂತರಾಜ್ ಕಾರ್ಕಳ ಇವರಿಗೆ ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ

Article Image

ಮಾಲತಿ ವಸಂತರಾಜ್ ಕಾರ್ಕಳ ಇವರಿಗೆ ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ

ಮಂಡ್ಯ: ಆಚಾರ್ಯ ಗುರುಕುಲ ಮಹಾ ವಿದ್ಯಾಲಯ, ಮೈಸೂರು, ಮತ್ತು ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠ, ಮಂಡ್ಯ ಜಿಲ್ಲೆ ಹಾಗೂ ಭಾರತ ದಿಗಂಬರ ಜೈನ ಜೈನ ಅರ್ಚಕ ಸಂಘ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಆಚಾರ್ಯ ಗುರುಕುಲ ಮಹಾ ವಿದ್ಯಾಲಯದ ಆರನೇ ಘಟಿಕೋತ್ಸವ, ಮಹಾಕವಿ ರತ್ನಾಕರವರ್ಣಿ ಸಾಹಿತ್ಯ ಪ್ರಸಾರ 1280ನೇ ದಿನ ಮನದ ನಿತ್ಯೋತ್ಸವ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಉಪಾದಿ ಪ್ರಶಸ್ತಿ ಪ್ರದಾನ ಸಮಾರಂಭವು ಪರಮ ಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠದ “ಸನ್ಮತಿ” ಸಮುದಾಯ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ವಿಶ್ರಾಂತ ಭೋಧಕರಾದ ಮಾಲತಿ ವಸಂತರಾಜ್ ಕಾರ್ಕಳ ಇವರ ಶೈಕ್ಷಣಿಕ ಕ್ಷೇತ್ರದ ಸೇವೆಯ ಪರಿಗಣನೆಯ ಮೇಲೆ "ಆಚಾರ್ಯ ಗುರುಕುಲ ಭಗವಾನ್ ಮಹಾವೀರ ಪ್ರಶಸ್ತಿ"ಯನ್ನು ನೀಡಿ ಸನ್ಮಾನಿಲಾಯಿತು.

ಪ್ರತಿಷ್ಠಾಚಾರ್ಯ ಪದ್ಮಪ್ರಭ ಇಂದ್ರ ಇವರಿಗೆ “ಶಾಸ್ತ್ರಿ ಉಪಾದಿ” ಪದವಿ ಪ್ರದಾನ

Article Image

ಪ್ರತಿಷ್ಠಾಚಾರ್ಯ ಪದ್ಮಪ್ರಭ ಇಂದ್ರ ಇವರಿಗೆ “ಶಾಸ್ತ್ರಿ ಉಪಾದಿ” ಪದವಿ ಪ್ರದಾನ

ಮಂಡ್ಯ: ಆಚಾರ್ಯ ಗುರುಕುಲ ಮಹಾ ವಿದ್ಯಾಲಯ, ಮೈಸೂರು, ಮತ್ತು ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠ, ಮಂಡ್ಯ ಜಿಲ್ಲೆ ಹಾಗೂ ಭಾರತ ದಿಗಂಬರ ಜೈನ ಜೈನ ಅರ್ಚಕ ಸಂಘ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಆಚಾರ್ಯ ಗುರುಕುಲ ಮಹಾ ವಿದ್ಯಾಲಯದ ಆರನೇ ಘಟಿಕೋತ್ಸವ, ಮಹಾಕವಿ ರತ್ನಾಕರವರ್ಣಿ ಸಾಹಿತ್ಯ ಪ್ರಸಾರ 1280ನೇ ದಿನ ಮನದ ನಿತ್ಯೋತ್ಸವ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಉಪಾದಿ ಪ್ರಶಸ್ತಿ ಪ್ರದಾನ ಸಮಾರಂಭವು ಪರಮ ಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠದ “ಸನ್ಮತಿ” ಸಮುದಾಯ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾಚಾರ್ಯ ಪದ್ಮಪ್ರಭ ಇಂದ್ರ ಅಳದಂಗಡಿ ಇವರ ಜೈನ ಆಗಮ ಶಾಶ್ತç ಸಂಕೃತಿ ಅಧ್ಯಯನ ಜ್ಞಾನಕ್ಕಾಗಿ “ಶಾಸ್ತ್ರಿ ಉಪಾದಿ” ಪದವಿ ಪ್ರದಾನ ಮಾಡಿ ಸನ್ಮಾನಿಲಾಯಿತು.

First Previous

Showing 16 of 23 pages

Next Last