ಪ್ರತಿಷ್ಠಾಚಾರ್ಯ ಪದ್ಮಪ್ರಭ ಇಂದ್ರ ಇವರಿಗೆ “ಶಾಸ್ತ್ರಿ ಉಪಾದಿ” ಪದವಿ ಪ್ರದಾನ
Published Date: 08-Aug-2024
ಮಂಡ್ಯ: ಆಚಾರ್ಯ ಗುರುಕುಲ ಮಹಾ ವಿದ್ಯಾಲಯ, ಮೈಸೂರು, ಮತ್ತು ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠ, ಮಂಡ್ಯ ಜಿಲ್ಲೆ ಹಾಗೂ ಭಾರತ ದಿಗಂಬರ ಜೈನ ಜೈನ ಅರ್ಚಕ ಸಂಘ ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಆಚಾರ್ಯ ಗುರುಕುಲ ಮಹಾ ವಿದ್ಯಾಲಯದ ಆರನೇ ಘಟಿಕೋತ್ಸವ, ಮಹಾಕವಿ ರತ್ನಾಕರವರ್ಣಿ ಸಾಹಿತ್ಯ ಪ್ರಸಾರ 1280ನೇ ದಿನ ಮನದ ನಿತ್ಯೋತ್ಸವ ಸಂಭ್ರಮ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಉಪಾದಿ ಪ್ರಶಸ್ತಿ ಪ್ರದಾನ ಸಮಾರಂಭವು ಪರಮ ಪೂಜ್ಯ ಸ್ವಸ್ತಿಶ್ರೀ ಭಾನುಕೀರ್ತಿ ಸ್ವಾಮೀಜಿಗಳವರ ಪಾವನ ಸಾನಿಧ್ಯದಲ್ಲಿ ಶ್ರೀ ಕ್ಷೇತ್ರ ಕಂಬದ ಹಳ್ಳಿ, ಜೈನ ಮಠದ “ಸನ್ಮತಿ” ಸಮುದಾಯ ಭವನದಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಪ್ರತಿಷ್ಠಾಚಾರ್ಯ ಪದ್ಮಪ್ರಭ ಇಂದ್ರ ಅಳದಂಗಡಿ ಇವರ ಜೈನ ಆಗಮ ಶಾಶ್ತç ಸಂಕೃತಿ ಅಧ್ಯಯನ ಜ್ಞಾನಕ್ಕಾಗಿ “ಶಾಸ್ತ್ರಿ ಉಪಾದಿ” ಪದವಿ ಪ್ರದಾನ ಮಾಡಿ ಸನ್ಮಾನಿಲಾಯಿತು.