Article Image

ಎಂ. ಬಾಹುಬಲಿ ಪ್ರಸಾದ್ ಇವರು ಪುನರ್ ಆಯ್ಕೆ

Article Image

ಎಂ. ಬಾಹುಬಲಿ ಪ್ರಸಾದ್ ಇವರು ಪುನರ್ ಆಯ್ಕೆ

ಮೂಡುಬಿದಿರೆ ಕೋ-ಓಪರೇಟಿವ್ ಸರ್ವಿಸ್ ಸೊಸೈಟಿ ಲಿ., ಇದರ ಅಧ್ಯಕ್ಷರಾಗಿ “ಸಹಕಾರ ರತ್ನ” ಎಂ. ಬಾಹುಬಲಿ ಪ್ರಸಾದ್ ನ್ಯಾಯವಾದಿ ಇವರು ಎರಡನೇ ಬಾರಿಗೆ ಸರ್ವಾನುಮತದಿಂದ ಪುನರ್ ಆಯ್ಕೆಯಾಗಿದ್ದಾರೆ. ನಿರ್ದೇಶಕರಾಗಿ ಕೆ. ಅಭಯಚಂದ್ರ ಜೈನ್, ಅಶೋಕ ಕಾಮತ್ ಎಂ.ಪಿ., ಎಂ. ಜ್ಞಾನೇಶ್ವರ ಕಾಳಿಂಗ ಪೈ, ಜಯರಾಮ ಕೋಟ್ಯಾನ್, ಮನೋಜ್ ಕುಮಾರ್ ಶೆಟ್ಟಿ ಸಿ. ಎಚ್. ಅಬ್ದುಲ್ ಗಫೂರ್ ಆಯ್ಕೆಯಾಗಿದ್ದಾರೆ. ಈಗಾಗಲೇ ಎಂ. ಗಣೇಶ್ ನಾಯಕ್, ಜಾರ್ಜ್ ಮೋನಿಸ್, ಎಂ. ಪದ್ಮನಾಭ ಹಾಗೂ ದಯಾನಂದ ನಾಯ್ಕ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಡಾ. ಅಜಿತ ಮುರುಗುಂಡೆ

Article Image

ಡಾ. ಅಜಿತ ಮುರುಗುಂಡೆ

ಡಾ. ಅಜಿತ ಮುರುಗುಂಡೆ ಅವರ ಕೃತಿ ಕೆ. ಸಾ. ಪ. ದತ್ತಿನಿಧಿ ಪ್ರಶಸ್ತಿಗೆ ಆಯ್ಕೆ. ಕನ್ನಡ ಸಾಹಿತ್ಯ ಪರಿಷತ್ತು ೨೦೨೦ ಎರಡನೇ ಸಾಲಿನ ವಿವಿಧ ದತ್ತಿ ಪ್ರತಿ ಪ್ರಶಸ್ತಿಗಳನ್ನು ಪ್ರಕಟಿಸಿದೆ. ಬೆಂಗಳೂರಿನ ಡಾ. ಅಜಿತ ಮುರಗುಂಡೆ ಇವರು ಬರೆದ ‘ರತ್ನಾಕರ ವರ್ಣಿಯ ಹಾಡುಗಳು, ಸಾಹಿತ್ಯ ಮತ್ತು ತಾತ್ವಿಕತೆ’ ಈ ಕೃತಿ ಹೊಳಲ್ಕೆರೆ ಪದ್ಮಾವತಮ್ಮ ಶ್ರೀಪಾಲ ಶೆಟ್ಟಿ ಡಾ. ಮದನಕೇಸರಿ ಜೈನ ಸಾಹಿತ್ಯ ದತ್ತಿ ಪ್ರಶಸ್ತಿಗೆ ಆಯ್ಕೆಯಾಗಿದೆ. ಪ್ರಸ್ತುತ ಇವರು ಯೋಜನೆ ಮತ್ತು ಸಾಂಖ್ಯಿಕ ಸಚಿವರ ವಿಶೇಷ ಅಧಿಕಾರಿ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ

First Previous

Showing 9 of 9 pages

Next Last