ವಾರ್ಷಿಕ ಪೂಜಾ ಮಹೋತ್ಸವ ಮತ್ತು ಕಲಿಕುಂಡ ಯಂತ್ರಾರಾಧನೆ, ಅಷ್ಟಾವಧಾನ ಪೂಜೆ ಹಾಗೂ ಧಾರ್ಮಿಕ ಪ್ರವಚನ
Published Date: 25-Jan-2025
ವೇಣೂರು: ಬಜಿರೆ ಹಲ್ಲಂದೋಡಿ ಬಸದಿ ಭಗವಾನ್ 1008 ಶ್ರೀ ವರ್ಧಮಾನ ಸ್ವಾಮಿ ಸನ್ನಿಧಿಯಲ್ಲಿ ವರ್ಷಂಪ್ರತಿ ಜರಗುವ ವಾರ್ಷಿಕ ಪೂಜಾ ಮಹೋತ್ಸವವು ಮೂಡುಬಿದಿರೆ ಶ್ರೀ ಜೈನ ಮಠದ “ಭಾರತಭೂಷಣ” ಡಾ| ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ ಮತ್ತು ಮಾರ್ಗದರ್ಶನದಲ್ಲಿ ಆಶೀರ್ವಚನಗಳೊಂದಿಗೆ 108 ಕಲಶ ಮಹಾಭಿಷೇಕ, ಕಲಿಕುಂಡ ಯಂತ್ರಾರಾಧನೆ, ಶ್ರೀ ಸರ್ವಾಹ್ಣಯಕ್ಷ ಅಷ್ಟಾವಧಾನ ಪೂಜೆ, ಮಹೋತ್ಸವ, ಮಹಾಪೂಜೆ ಹಾಗೂ ಮಹಾಮಾತೆ ಶ್ರೀ ಪದ್ಮಾವತಿ ಅಮ್ಮನವರ ಲಕ್ಷ ಹೂವಿನ ಪೂಜೆ ಮುಂತಾದ ಧರ್ಮಕಾರ್ಯಗಳೊಂದಿಗೆ ನಾಳೆ(ಜ.26) ನೆರವೇರಲಿದೆ.