ಹುಬ್ಬಳ್ಳಿ ಜೈನ ಬೋರ್ಡಿಂಗ್ ನಲ್ಲಿ ರತ್ನತ್ರಯ ವಿಧಾನ ಮತ್ತು ಮೃತ್ಯುಂಜಯ ಆರಾಧನಾ ಕಾರ್ಯಕ್ರಮ
Published Date: 04-Nov-2024
ಹುಬ್ಬಳ್ಳಿ ಜೈನ ಬೋರ್ಡಿಂಗ್ ನಲ್ಲಿ ಚಾತುರ್ಮಾಸ ಅನುಷ್ಠಾನದಲ್ಲಿರುವ ಪರಮ ಪೂಜ್ಯ ವಾತ್ಸಲ್ಯ ಮೂರ್ತಿ ಪುಣ್ಯಸಾಗರ್ ಮಹಾರಾಜರ ಸಾನಿಧ್ಯದಲ್ಲಿ ರವಿವಾರ ಜರುಗಿದ "ರತ್ನತ್ರಯ ವಿಧಾನ ಮತ್ತು ಮೃತ್ಯುಂಜಯ ಆರಾಧನಾ" ಕಾರ್ಯಕ್ರಮದಲ್ಲಿ ರಾಜ್ಯದ ಸಚಿವರಾದ ಸನ್ಮಾನ್ಯ ಡಿ. ಸುಧಾಕರ್ ಇವರು ಭಾಗಿಯಾಗಿ ಪೂಜ್ಯರ ಆಶೀರ್ವಾದ ಪಡೆದರು. ದಿಗಂಬರ ಜೈನ್ ಬೋರ್ಡಿಂಗ್ ವತಿಯಿಂದ ಅಧ್ಯಕ್ಷರಾದ ವಿದ್ಯಾದರ ಪಾಟೀಲ ಹಾಗೂ ಕಮಿಟಿ ಸದಸ್ಯರು ಸಚಿವರನ್ನು ಸನ್ಮಾನಿಸಿ ಜೈನ ಸಮುದಾಯದ ಬಹುದಿನಗಳ ಬೇಡಿಕೆಯಾದ "ಜೈನ್ ಅಭಿವೃದ್ಧಿ ನಿಗಮ" ಸ್ಥಾಪಿಸುವ ಕುರಿತು ಮನವಿ ಸಲ್ಲಿಸಿ ಆದಷ್ಟು ಬೇಗ ಅನುಷ್ಠಾನಗೊಳಿಸಲು ವಿನಂತಿಸಲಾಯಿತು. ಈ ಸಂದರ್ಭದಲ್ಲಿ ಆರ್ ಟಿ ತನ್ನಪ್ಪನವರ, ಜಿ ಜಿ ಲೋಬೋಗೋಳ, ಸುಭದ್ರಮ್ಮ ಮುತ್ತಿನ, ದೇವೇಂದ್ರಪ್ಪ ಕಾಗೆನವರ, ವಿಮಲ ಚಂದ ಸಂಗಮಿ, ಪ್ರಶಾಂತ್ ಬಿ ಶೆಟ್ಟಿ , ಸ್ಮಿತಾ ವಾಕಳೆ, ಮಹಾವೀರ ಮಣಕಟ್ಟಿ, ಮಹಾವೀರ ಕಂಚಗಾರ ಉದಯ್ ಧಡೋತಿ, ಪಂಕಜಾ ಸೂಜಿ, ಹಾಗೂ ಸಮಾಜದ ಶ್ರಾವಕ-ಶ್ರಾವಕಿಯರು ಹಾಜರಿದ್ದರು. ವರದಿ : ಎಸ್. ಆರ್. ಮಲ್ಲಸಮುದ್ರ