ಕುತ್ಲೂರು, ಪರುಷಗುಡ್ಡೆ: ಶ್ರಾವಣ ಮಾಸದ ಸಂಪತ್ತು ಶುಕ್ರವಾರದ ವಿಶೇಷ ಪೂಜೆ
Published Date: 12-Sep-2024
ಅತಿಶಯ ಕ್ಷೇತ್ರ ಕುತ್ಲೂರು ಪರುಷಗುಡ್ಡೆ ಭಗವಾನ್ ಶಾಂತಿನಾಥ ಸ್ವಾಮಿ ಬಸದಿಯ ಆಡಳಿತ ಟ್ರಸ್ಟ್, ಭಾರತೀಯ ಚೈನ್ ಮಿಲನ್ ಪರುಷಗುಡ್ಡೆ ಶಾಖೆ, ಶ್ರೀ ಶಾಂತಿ ಸೌಹಾರ್ದ ಸಂಘ, ಪರುಷಗುಡ್ಡೆ ಇದರ ಸಂಯುಕ್ತ ಆಶ್ರಯದಲ್ಲಿ ಶ್ರಾವಣ ಮಾಸದ ಸಂಪತ್ತು ಶುಕ್ರವಾರ ನಾಳೆ (ಸೆ. 13)ವಿಶೇಷ ಪೂಜೆಯೊಂದಿಗೆ ಬೆಳಗ್ಗೆ 10.30ರಿಂದ ಭರತೇಶ ವೈಭವ ಎಂಬ ಜೈನ ಪುಣ್ಯ ಕಥಾ ಭಾಗ ಯಕ್ಷಗಾನ - ತಾಳಮದ್ದಳೆ ಜರಗಲಿದೆ.