ಹುಬ್ಬಳ್ಳಿ: ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ ಅಸ್ತಿತ್ವಕ್ಕೆ
Published Date: 01-Jul-2024
ಹುಬ್ಬಳ್ಳಿ-ಧಾರವಾಡ ಅವಳಿನಗರಗಳಲ್ಲಿ ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಪ್ರಿಯ ಸಮಾನ ಮನಸ್ಕರು ಕೂಡಿ ಸಂಘಟಿಸಿರುವ "ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಟ್ರಸ್ಟ್ (ರಿ.) ಜೂನ್ 26 ರಂದು ಅಧಿಕೃತವಾಗಿ ಅಸ್ತಿತ್ವಕ್ಕೆ ಬಂದಿತು. ಜೈನ ಸಂಸ್ಕೃತಿ ಮತ್ತು ಸಾಹಿತ್ಯ ಸಂಬಂಧಿತ ನಾನಾ ಕಾರ್ಯಕ್ರಮಗಳನ್ನು ನಡೆಸಲು ಉದ್ದೇಶ ಹೊಂದಿರುವ ಟ್ರಸ್ಟಿಗೆ ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿ ಡಾ. ಅಜಿತಪ್ರಸಾದ ಗೌರವ ಅಧ್ಯಕ್ಷರಾಗಿದ್ದು ಇತರ ಪದಾಧಿಕಾರಿಗಳು ಈ ಮುಂದಿನವರಾಗಿದ್ದಾರೆ. ಡಾ. ಜಿನದತ್ತ ಹಡಗಲಿ(ಅಧ್ಯಕ್ಷರು), ಡಾ. ಭರಮಪ್ಪ ಭಾವಿ(ಉಪಾಧ್ಯಕ್ಷರು), ಶಾಂತಿನಾಥ ಕೆ. ಹೋತಪೇಟಿ(ಪ್ರಧಾನ ಕಾರ್ಯದರ್ಶಿ), ಶಾಂತರಾಜ ಮಲ್ಲಸಮುದ್ರ(ಕಾರ್ಯದರ್ಶಿ), ಮಂಜುನಾಥ ಚವಡಣ್ಣವರ(ಖಜಾಂಚಿ), ಧರಣೇಂದ್ರ ಜವಳಿ, ರಾಯಪ್ಪ ಬಾಳಿಕಾಯಿ, ಮಹಾವೀರ ಉಪಾಧ್ಯೆ, ಶ್ರೀಧರ ಬಸ್ತಿ, ಪ್ರತಿಭಾ ಕಾಗೆ, ತನುಜಾ ರೋಖಡೆ(ಕಾರ್ಯಕಾರಿಣಿ ಸದಸ್ಯರು). ಹೆಚ್ಚಿನ ಮಾಹಿತಿಗೆ: 9945719235, 9980897979, 8762235112ಗಳಿಗೆ ಸಂಪರ್ಕಿಸಬಹುದು. ಶಾಂತಿನಾಥ ಕೆ. ಹೋತಪೇಟಿ (ಪ್ರಧಾನ ಕಾರ್ಯದರ್ಶಿ): 9980897979