ಸಾಹಿತಿ ರವಿರಾಜ್ರವರಿಗೆ ಸನ್ಮಾನ
Published Date: 07-Jun-2024
ಭಾರತೀಯ ಜೈನ್ ಮಿಲನ್ ಮೂಡಬಿದ್ರೆ ಶಾಖೆಯ ಮಾಸಿಕ ಸಭೆಯಲ್ಲಿ ಸಾಹಿತಿ, ಕವಿ, ಸಂಗೀತಗಾರ “ಕಲಾಭೂಷಣ” ಎಂ. ರವಿರಾಜ್ ಅವರನ್ನು ಸನ್ಮಾನಿಸಲಾಯಿತು. ಮೂಡಬಿದ್ರೆಯ ಎಂ.ಸಿ.ಎಸ್ ಬ್ಯಾಂಕಿನ ಕಲ್ಪವೃಕ್ಷ ಸಭಾಭವನದಲ್ಲಿ ಜರುಗಿದ ಸಮಾರಂಭದಲ್ಲಿ ಶಾಖಾ ಅಧ್ಯಕ್ಷರಾದ ಆನಡ್ಕ ದಿನೇಶ್ ಕುಮಾರ್, ವಲಯಾಧಿಕಾರಿಗಳಾದ ಜಯರಾಜ್ ಕಂಬಳಿ, ವಕೀಲರಾದ ಎಂ. ಬಾಹುಬಲಿ ಪ್ರಸಾದ್, ವಕೀಲೆ ಶ್ವೇತಾ ಜೈನ್ ಮತ್ತಿತರರು ಹಾಜರಿದ್ದರು. ಸನ್ಮಾನ ಸ್ವೀಕರಿಸಿದ ರವಿರಾಜ್ರವರು ತಾನು 52 ವರ್ಷಗಳ ಹಿಂದೆ ರಚಿಸಿದ “ಮಹಾವೀರ ವಿದ್ಯಾಲಯ ಚರಿತೆ” ಎಂಬ ಕಥನ ಕಾವ್ಯವನ್ನು ವಾಚಿಸಿದರು.