ದರೆಗುಡ್ಡೆ: ಶ್ರೀ ೧೦೦೮ ಅನಂತನಾಥ ಸ್ವಾಮಿ ಬಸದಿಯಲ್ಲಿ ಶ್ರೀ ಸಿದ್ಧರ ಪಂಚಾಮೃತ ಅಭಿಷೇಕ
Published Date: 23-Mar-2024
ದ.ಕ.ಜಿಲ್ಲೆಯ ಮೂಡುಬಿದಿರೆ ತಾಲೂಕಿನ ಕೆಲ್ಲಪುತ್ತಿಗೆ- ದರೆಗುಡ್ಡೆ ಗ್ರಾಮದ ಭಗವಾನ್ ಶ್ರೀ ೧೦೦೮ ಅನಂತನಾಥ ಸ್ವಾಮಿ ಬಸದಿಯಲ್ಲಿ ಶ್ರೀ ಸಿದ್ಧರ ಪಂಚಾಮೃತ ಅಭಿಷೇಕ ಮತ್ತು ಅಷ್ಟಮ ನಂದೀಶ್ವರದ ಐವತ್ತೆರಡು ನೂತನ ಜಿನ ಬಿಂಬಗಳಿಗೆ ಮಹಾಭಿಷೇಕವು ಮೂಡುಬಿದಿರೆ ಶ್ರೀ ಜೈನ ಮಠದ ಪ.ಪೂ. ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿಗಳವರ ಪಾವನ ಸಾನ್ನಿಧ್ಯ, ನೇತೃತ್ವ ಮತ್ತು ಆಶೀರ್ವಚನದೊಂದಿಗೆ ಮಾ.24 ರಂದು ನೆರವೇರಲಿರುವುದು.