ಹಂತೂರು ಜೈನ ಬಸದಿಯ ನೂತನ ಮಾನಸ್ತಂಭ ಸ್ಥಾಪನೆ
Published Date: 18-Mar-2024
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಇತಿಹಾಸ ಪ್ರಸಿದ್ಧ ನೂತನ ಶ್ರೀ ಪಾರ್ಶ್ವನಾಥ ಜಿನ ಮಂದಿರದ ಮಾನಸ್ಥಂಭ ಹಾಗೂ ಚತುರ್ಮುಖ ಜಿನಬಿಂಬ ಸ್ಥಾಪನ ಕಾರ್ಯಕ್ರಮವು ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಸ್ವಸ್ತಿಶ್ರೀ ಲಕ್ಷ್ಮಿಸೇನಾ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಗಳರ ಪಾವನ ಸಾನಿಧ್ಯದಲ್ಲಿ ವಿವಿಧ ಧಾರ್ಮಿಕ ವಿಧಿ-ವಿಧಾನಗಳಿಂದ ಮಾ. 16ರಂದು ನೆರವೇರಿತು. ನೂತನ ಮಾನಸ್ತಂಭವು 31.4 ಅಡಿಗಳ ಎತ್ತರದಲ್ಲಿದೆ. ಇದನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ, ದೇವನಹಳ್ಳಿ ತಾಲೂಕಿನ, ಕೊಯ್ರಾ ಬಂಡೆಯಿಂದ ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ಮಾನಸ್ತಂಭದ ದಾನಿಗಳಾದ ಚಿತ್ರದುರ್ಗ ಜಿಲ್ಲೆ ಚಳ್ಳಕೆರಿಯ ಸವಿತಾ-ಗೌರಿಪುರ ಪಾರ್ಶ್ವನಾಥ ದಂಪತಿಗಳು, ಪುರೋಹಿತ ಬಿ. ಎಸ್. ಧರಣಿಂದ್ರ ಇಂದ್ರ, ಆರ್. ಕೆ. ಬ್ರಹ್ಮದೇವ್, ಬಸದಿ ಸಮಿತಿಯ ಅಧ್ಯಕ್ಷರು, ಪದಾಧಿಕಾರಿಗಳು ಊರ-ಪರವೂರ ಜಿನ ಬಂಧುಗಳು, ಮತ್ತಿತರರು ಉಪಸ್ಥಿತರಿದ್ದರು.