ಸಂಪತ್ತು ಶ್ರಾವಣ ಶುಕ್ರವಾರ ವಿಶೇಷ ಪೂಜೆ
Published Date: 05-Aug-2026
ನಾರಾವಿ ಮಾಗಣೆ ಭ| 1008 ಶ್ರೀ ಧರ್ಮನಾಥ ಸ್ವಾಮಿ ಸನ್ನಿಧಿಯಲ್ಲಿ ಕಾರ್ಕಳ ಶ್ರೀ ಜೈನಮಠದ ಪೂಜ್ಯ ರಾಜಗುರು, ಧ್ಯಾನಯೋಗಿ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿಗಳವರ ಶುಭಾಶೀರ್ವಾದಗಳೊಂದಿಗೆ ಶ್ರಾವಣ (ಸೋಣ) ತಿಂಗಳ ಸಂಪತ್ತು ಶ್ರಾವಣ ಶುಕ್ರವಾರದ ವಿಶೇಷ ಪೂಜೆಯು ದಿನಾಂಕ 21/08/2026 ರಿಂದ 11/09/2026 ರ ಪರ್ಯಂತ ಜರಗಲಿರುವುದು. ವಿ.ಸೂ: ಶ್ರಾವಣ ಶುಕ್ರವಾರದಂದು ಪ್ರತಿ ದಿನ ಬೆಳಗ್ಗೆ ಗಂಟೆ 9-00ರಿಂದ ಧಾರ್ಮಿಕ ಪೂಜಾ ಕಾರ್ಯಕ್ರಮ ಮತ್ತು ಮಹಾಮಾತೆ ಶ್ರೀ ಪದ್ಮಾವತೀ ಅಮ್ಮನವರ ಸಹಸ್ರನಾಮ ಕುಂಕುಮಾರ್ಚನೆ ನಡೆಯಲಿರುವುದು. ಕುಂಕುಮಾರ್ಚನೆ ಮಾಡಲು ಇಚ್ಛೆ ಉಳ್ಳವರು 10 ನಿಮಿಷ ಮುಂಚಿತವಾಗಿ ಬರುವುದು. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ: ಶ್ರೀ ಶಾಂತಿರಾಜ ಮುದ್ಯ, ವ್ಯವಸ್ಥಾಪಕರು ಮೊ: 9902469108, ಶ್ರೀ ಹರ್ಷಿತ್ ಇಂದ್ರ, ಪುರೋಹಿತರು ಮೊ: 9901630039