ಕ್ಷಮಿತ ಜೈನ್- ಪ್ರಥಮ ಸ್ಥಾನ
Published Date: 27-Jul-2026
ಮಂಗಳೂರಿನ ರಾಜ್ಯ ಸಾಹಿತ್ಯ ಚಿಗುರು ಬಳಗದ ವತಿಯಿಂದ ಬಳಗದ ಸದಸ್ಯರಿಗೆ ರಾಜ್ಯಮಟ್ಟದ ಚಿತ್ರ ಕವನ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಇದರಲ್ಲಿ ಕ್ಷಮಿತ ಜೈನ್ ರವರು ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ. ಇವರು ಕೊಪ್ಪ ತಾಲೂಕಿನ ಬಿ.ಎ. ವರ್ಧಮಾನ ಮತ್ತು ಪದ್ಮಲತಾ ದಂಪತಿಗಳ ಪುತ್ರಿ. ಪ್ರಸ್ತುತ ಇವರು ಬೆಂಗಳೂರಿನ ಶ್ರೀ ಶ್ರೀ ಕಾಲೇಜಿನಲ್ಲಿ ಇಎನ್ಟಿ ವಿಭಾಗದಲ್ಲಿ ಎಂ.ಎಸ್ (ಮಾಸ್ಟರ್ ಆಫ್ ಸರ್ಜರಿ) ಅಂತಿಮ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದಾರೆ.