ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಮೂರ್ತಿಗಳು, ಶಾಸನಗಳು ಪತ್ತೆ


Logo

Published Date: 17-Jul-2026

ಮೈಸೂರಿನ ಬಳಿ ಇರುವ ಕುಮಾರ ಬೀಡು ಗ್ರಾಮದಲ್ಲಿ ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿದ್ದ ಜೈನ ಬಸದಿಯು ಈಗ ಶಿಥಿಲವಾಗಿ ಪಾಳು ಬಿದ್ದಿರುವುದು ಪತ್ತೆಯಾಗಿದೆ. ಗಂಗರ ಕಾಲದ ಮತ್ತು ಹೊಯ್ಸಳರ ಕಾಲದ ಎರಡು ಭಗವಾನ್ ಶ್ರೀ ಪಾರ್ಶ್ವನಾಥ ತೀರ್ಥಂಕರರ ಮೂರ್ತಿಗಳು ಎರಡು ಶಾಸನಗಳು ಮತ್ತು ಅನೇಕ ಜಿನ ಬಿಂಬಗಳು ಸ್ಥಳದಲ್ಲಿವೆ. ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಸೂಚನೆಯಂತೆ ಜಿ ಡಿ ಪಾರ್ಶ್ವನಾಥ್ ಮತ್ತು ವೀರೇಂದ್ರ ಬೇಗೂರ್ ರವರು ಸ್ಥಳ ಪರಿಶೀಲನೆಗಾಗಿ ಇತ್ತೀಚೆಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ಕುಮಾರಬೀಡು ಅಭಿವೃದ್ಧಿಗಾಗಿ ರಚಿಸಿರುವ ಟ್ರಸ್ಟಿನ ಅಧ್ಯಕ್ಷರಾದ ಮಿತ್ರಸೇನ ಜೈನ್ ಉಪಾಧ್ಯಕ್ಷ ಚಂದ್ರಶೇಖರ್ ಅರಿಗ ಕಾರ್ಯದರ್ಶಿ ಮಹಾವೀರ ಗೋಗಿ ಸಹಕಾರ್ಯದರ್ಶಿ ವಾಗೀಶ್ವರಿ ಪ್ರಕಾಶ್ ಸಂಘಟನಾ ಕಾರ್ಯದರ್ಶಿ ನವೀನ್ ಬಸ್ತಿ ಮತ್ತು ಟ್ರಸ್ಟಿಯಾದ ಶಾಂತಪ್ಪ ಮೈಸೂರು ಜೈನ ಸಮಾಜದ ಅಧ್ಯಕ್ಷರಾದ ಸುನಿಲ್ ಕುಮಾರ್ ತೀರ್ಥಕ್ಷೇತ್ರ ಕಮಿಟಿಯ ಕರ್ನಾಟಕ ಅಧ್ಯಕ್ಷರಾದ ವಿನೋದ್ ಕುಮಾರ್ ಬಾಕ್ಲೀವಾಲ್ ಭಾರತೀಯ ಜೈನ್ ಮಿಲನ್ ರಾಷ್ಟ್ರೀಯ ಉಪಾಧ್ಯಕ್ಷರಾದ ಎನ್ ಪ್ರಸನ್ನ ಕುಮಾರ್ ವರ್ಧಮಾನ ಜೈನ್ ಮಿಲನ್ ಉಪಾಧ್ಯಕ್ಷರಾದ ನಾಗರತ್ನ ಮತ್ತು ಚಂದ್ರಿಕಾ ರವರು ಕುಮಾರಬೀಡು ಉಪಸ್ಥಿತರಿದ್ದರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img