ಸಿಂಗಾಪುರ: 24 ತೀರ್ಥಂಕರ ಜಿನ ಬಿಂಬ ಸ್ಥಾಪನೆ ಕಾರ್ಯಕ್ರಮ
Published Date: 02-Jul-2026
ಶ್ರೀ ಕ್ಷೇತ್ರ ಶ್ರವಣಬೆಳಗೊಳದ ಪರಮಪೂಜ್ಯ ಸ್ವಸ್ತಿಶ್ರೀ ಅಭಿನವ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪ್ರಥಮ ವಿದೇಶ ಪ್ರವಾಸ. ಸಿಂಗಾಪುರದಲ್ಲಿ ಹೊಸ ಜಿನಾಲಯದಲ್ಲಿ 24 ತೀರ್ಥಂಕರ ಜಿನ ಬಿಂಬ ಸ್ಥಾಪನೆ ಕಾರ್ಯಕ್ರಮ ವಿಧಿ ವಿಧಾನ ಪೂರ್ವಕ ಅದ್ದೂರಿಯಾಗಿ ಪೂಜ್ಯ ಸ್ವಾಮೀಜಿಯವರ ಸಾನಿಧ್ಯದಲ್ಲಿ ನಡೆಯಿತು. ಒಂದು ವಾರ ಸಿಂಗಾಪುರ ಮತ್ತು ಮಲೇಶಿಯಾ ಧಾರ್ಮಿಕ ವಿಜಯ ಯಾತ್ರೆಯನ್ನು ಮುಗಿಸಿ ಶ್ರವಣಬೆಳಗೊಳಕ್ಕೆ ಬಂದಾಗ ಸಿಂಗಾಪುರ ಜೈನ್ ಮಿಲನ್ ಅಧ್ಯಕ್ಷ ಸುಮಂತ್ ಪ್ರಕಾಶ್ ಮೈಸೂರಿನ ಪ್ರಕಾಶ್ ಮತ್ತು ಪ್ರಮೀಳಾ ಹಾಗೂ ಪ್ರಸನ್ನ ಕುಮಾರ್ ಮತ್ತು ನಾಗರತ್ನ ರವರು ಪೂಜ್ಯರನ್ನು ಭೇಟಿ ಮಾಡಿದ್ದರು. ಪೂಜ್ಯ ಸ್ವಾಮೀಜಿಯವರು ಸಿಂಗಾಪುರ ಜಿನಬಿಂಬ ಪ್ರತಿಷ್ಠಾ ಕಾರ್ಯಕ್ರಮದ ಸ್ಮರಣಿಕೆಯನ್ನು ನೀಡಿ ಆಶೀರ್ವದಿಸಿದರು.