ಶಟಲ್ ಬ್ಯಾಡ್ಮಿಂಟನ್: ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನ ವಿದ್ಯಾರ್ಥಿನಿ ಮನಸ್ವಿ ಎಂ.ವಿ. ರಾಜ್ಯಮಟ್ಟಕ್ಕೆ ಆಯ್ಕೆ
Published Date: 15-Sep-2025
ಮೂಡುಬಿದಿರೆ: ಮಂಗಳೂರಿನ ಫಾದರ್ ಮುಲ್ಲರ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಎಕ್ಸಲೆಂಟ್ ಮೂಡುಬಿದಿರೆ ಪದವಿ ಪೂರ್ವ ಕಾಲೇಜಿನ ಮನಸ್ವಿ ಎಂ.ವಿ. ವಿನ್ನರ್ ಆಗಿ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಇವರು ಮೈಸೂರಿನ ವಿಜಯನಗರದ ವೀರೇಂದ್ರ ಕುಮಾರ್ ಎಂ. ಎನ್. ಮತ್ತು ಅನುಪಮ ಎಸ್. ಇವರ ಪುತ್ರಿ.