ಡಾ. ಜಿನದತ್ತ ದೇಸಾಯಿ ಇವರಿಗೆ ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ
Published Date: 28-Jan-2024
ನಿವೃತ್ತ ಜಿಲ್ಲಾ ನ್ಯಾಯಾಧೀಶರೂ, ಸಮಾಜದ ಹಿರಿಯ ಸಾಹಿತಿಗಳೂ, ಈ ನಾಡು ಕಂಡ ಅಪರೂಪದ ಜನಪ್ರಿಯ ಕವಿ, ಶಿಕ್ಷಣ ಪ್ರೇಮಿ ಡಾ. ಜಿನದತ್ತ ದೇಸಾಯಿ ಇವರು ಸಾಹಿತ್ಯ ಕ್ಷೇತ್ರಕ್ಕೆ ಹಾಗೂ ಹಲವಾರು ಸಾಮಾಜಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಸಲ್ಲಿಸಿದ ಸೇವೆ ಮತ್ತು ಜೀವಮಾನದ ಅಮೋಘ ಸಾಧನೆಯನ್ನು ಗುರುತಿಸಿ ಕರ್ನಾಟಕ ಸರಕಾರ 2023ನೇ ಸಾಲಿನ ಪ್ರತಿಷ್ಠಿತ "ಭಗವಾನ್ ಮಹಾವೀರ ಶಾಂತಿ ಪ್ರಶಸ್ತಿ"ಗೆ ಆಯ್ಕೆ ಮಾಡಲಾಗಿದ್ದು, ಈ ಪ್ರಶಸ್ತಿಯು ರೂ. ಹತ್ತು ಲಕ್ಷ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.