ದಶಲಕ್ಷಣ ಪರ್ವ
Published Date: 28-Aug-2025
ಶ್ರೀ ಭುಜಬಲಿ ಬ್ರಹ್ಮಚರ್ಯಾಶ್ರಮ (ರಿ.) ಹಿರಿಯಂಗಡಿ, ಕಾರ್ಕಳದಲ್ಲಿ ದಿನಾಂಕ 28.08.2025ನೇ ಗುರುವಾರದಿಂದ 06.09.2025ನೇ ಶನಿವಾರದ ಪರ್ಯಂತ ಆಶ್ರಮದ ಜಿನ ಮಂದಿರದ ಪ್ರಾಂಗಣದಲ್ಲಿ ಪ್ರತಿನಿತ್ಯ ಸಂಜೆ ಗಂಟೆ 6.00ರಿಂದ ಪರಮಪೂಜ್ಯ 108 ಮುನಿಶ್ರೀ ಮಹಿಮಾಸಾಗರ ಮುನಿ ಮಹಾರಾಜರ ಆಶೀರ್ವಾದ ಪೂರ್ವಕ ಹಾಗೂ ಕಾರ್ಕಳ ಶ್ರೀ ಜೈನ ಮಠದ ರಾಜಗುರು ಧ್ಯಾನಯೋಗಿ ಪರಮಪೂಜ್ಯ ಸ್ವಸ್ತಿಶ್ರೀ ಲಲಿತಕೀರ್ತಿ ಭಟ್ಟಾರಕ ಪಟ್ಟಾಚಾರ್ಯವರ್ಯ ಮಹಾಸ್ವಾಮೀಜಿಯವರ ಪಾವನ ಸಾನಿಧ್ಯದಲ್ಲಿ ದಶಲಕ್ಷಣ ಪರ್ವ ಸಮಾರಂಭವು ಪೂಜೆ, ಭಜನೆ ಉಪನ್ಯಾಸ, ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಜರಗಲಿದೆ. ವಿ.ಸೂ. ಈ ಪುಣ್ಯ ದಿನಗಳಲ್ಲಿ ತಾವು ನೀಡಿದ ಅಮೂಲ್ಯ ದಾನವನ್ನು ಸ್ವೀಕರಿಸಲಾಗುವುದು.