ರಾಜಸ್ಥಾನದ, ಜೈಪುರ: ಮಹಿಳೆಯರ ವಾಲಿಬಾಲ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಲಾಸ್ಯರಾಜ್
Published Date: 07-Aug-2025
ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪದವಿ ಕಾಲೇಜಿನ ವಿದ್ಯಾರ್ಥಿನಿಯಾದ ಲಾಸ್ಯರಾಜ್ ಇವಳು ರಾಜಸ್ಥಾನದ ಜೈಪುರದಲ್ಲಿ ನಡೆದ ಮಹಿಳೆಯರ ವಾಲಿಬಾಲ್ ಪಂದ್ಯಾಟದಲ್ಲಿ ರಾಷ್ಟ್ರಮಟ್ಟದ ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸಿರುತ್ತಾಳೆ. ಇವಳು ವೀರವನ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರಾದ ಎಸ್. ಬಿ. ನರೇಂದ್ರ ಕುಮಾರ್ ಇವರ ಮೊಮ್ಮಗಳು ಹಾಗೂ ಸಿದ್ಧಾಂತ್ ಕೀರ್ತಿರಾಜ್ ಮತ್ತು ಸೌಭಾಗ್ಯ ಇವರ ಪುತ್ರಿ. ಇವರಿಗೆ ಎಸ್. ಡಿ.ಎಂ ಶಿಕ್ಷಣ ಸಂಸ್ಥೆಗಳ ಕ್ರೀಡಾ ಕಾರ್ಯದರ್ಶಿಗಳು ಹಾಗೂ ವಾಲಿಬಾಲ್ ತರಬೇತುದಾರರಾದ ರಮೇಶ್ ಹೆಚ್ ಇವರು ಸಹಕರಿಸಿ ಮಾರ್ಗದರ್ಶನವನ್ನು ನೀಡಿದರು.