ಭಾರತೀಯ ಜೈನ್ ಮಿಲನ್: ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣೆ
Published Date: 21-Jul-2025
ಮಹಾನಗರ, ಜು. 20: ಭಾರತೀಯ ಜೈನ್ ಮಿಲನ್ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ಕಾರ್ಯಕ್ರಮ ನಗರದ ಲಾರ್ಡ್ ಮಹಾವೀರ್ ಜೈನ್ ಬೋರ್ಡಿಂಗ್ ಸಭಾಂಗಣದಲ್ಲಿ ನಡೆಯಿತು. ಮಂಗಳೂರಿನ ಭಾರತೀಯ ಜೈನ್ ಮಿಲನ್ ಅಧ್ಯಕ್ಷ ರತ್ನಾಕರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಶಾರದಾ ವಿದ್ಯಾ ಸಮೂಹದ ಟ್ರಸ್ಟಿ ಸುಧಾಕರ್ ರಾವ್ ಪೇಜಾವರ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಡಾ| ಸಿ.ಕೆ. ಬಲ್ಲಾಳ್ ಹಾಗೂ ಉದ್ಯಮಿ ದರ್ಶನ್ ಜೈನ್, ದಿಲೀಪ್ ಜೈನ್ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಮಿಲನ್ ವತಿಯಿಂದ ಗೌರವಿಸಲಾಯಿತು. ನ್ಯಾಯಾಂಗ ಇಲಾಖೆಯ ಆಡಳಿತಾಧಿಕಾರಿಯಾಗಿ ನೇಮಕಗೊಂಡ ರಾಜೇಶ್ ಎಂ. ಅವರನ್ನು ಮಿಲನ್ ವತಿಯಿಂದ ಸಮ್ಮಾನಿಸಲಾಯಿತು. ವಲಯ ನಿರ್ದೇಶಕ ಸುಕುಮಾರ್ ಬಲ್ಲಾಳ್, ಕಾರ್ಯದರ್ಶಿ ವೈಶಾಲಿ ಪಡೀವಾಳ್ ಇದ್ದರು. ಪ್ರೀಯ ಸುದೇಶ್, ಶಿಲ್ಪಾ ಸಂದೀಪ್ ನಿರೂಪಿಸಿದರು. ನಿರ್ಮಲಾ ಜ್ಞಾನಚಂದ್ರ, ಯಶೋಧರ ಜೈನ್ ಸಹಕರಿಸಿದರು.