ತುಮಕೂರು ವಿಶ್ವ ವಿದ್ಯಾಲಯದಿಂದ ನಾಡೋಜ ಹಂಪಾನಾ ಸರ್ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ
Published Date: 14-Jul-2025
ಸಂಶೋಧಕ ನಾಡೋಜ, ಹಂ.ಪ ನಾಗರಾಜಯ್ಯ ಭಾಷಾ ವಿಜ್ಞಾನಿ, ಗ್ರಂಥ ಸಂಪಾದಕ, ಶ್ರೇಷ್ಠವಾಗ್ಮಿ, ಅಧ್ಯಾಪಕರಾಗಿ ಸೇವೆ ಸಲ್ಲಿಸಿದವರು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿದ್ದವರು. 1936ರ ಅಕ್ಟೋಬರ್ 7ರಂದು ಕೋಲಾರ ಜಿಲ್ಲೆ (ಚಿಕ್ಕಬಳ್ಳಾಪುರ ಜಿಲ್ಲೆ) ಗೌರಿಬಿದನೂರು ತಾಲೂಕಿನ ಹಂಪಸಂದ್ರದಲ್ಲಿ ಜನನ. ಪ್ರಾಥಮಿಕ ವಿದ್ಯಾಭ್ಯಾಸ ಹಂಪಸಂದ್ರದಲ್ಲಿ, ಪ್ರೌಢ ಹಾಗೂ ಕಾಲೇಜು ಶಿಕ್ಷಣ ಗೌರಿಬಿದನೂರಿನಲ್ಲಿ, ಪಡೆದ ಇವರು ಕಲಾ ಪದವಿ ಹಾಗೂ ಕಲಾ ಸ್ನಾತಕೋತ್ತರ ಪದವಿಗಳನ್ನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪಡೆದರು. ಮೈಸೂರಿನ ಮಹಾರಾಣಿ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಇವರು ಅಂದಿನಿಂದಲೂ ಮೈಸೂರು ದಸರಾ ಬಗ್ಗೆ ವಿಶೇಷವಾದ ಗೌರವ, ಪ್ರೀತಿ. ನಾಡೋಜ ಹಂ.ಪ ನಾಗರಾಜಯ್ಯ ಸಾಹಿತ್ಯ ಲೋಕದ ವಿಶೇಷ ಆಸ್ತಿ, ಹಂಪನ ಎಂಬ ಕಾವ್ಯ ನಾಮದಿಂದ ಹೆಸರಾಗಿರುವ ಇವರು, ನಾಡೋಜ ಎಂಬ ಕೀರ್ತಿ ಭಾಷಾ ವಿಜ್ಞಾನಿ, ಕಾದಂಬರಿ ಕಾರ, ಕಾವ್ಯ, ಇತಿಹಾಸ, ಭಾಷಾ ಶಾಸ್ತ್ರ, ಜೈನ ಸಾಹಿತ್ಯ ಇನ್ನಿತರ ಕೃತಿಗಳನ್ನು ರಚಿಸಿರುವವರು ಕನ್ನಡ ಸಾಹಿತ್ಯ ಹಾಗೂ ಜೈನ ಸಾಹಿತ್ಯಕ್ಕೆ ಇವರ ಕೊಡುಗೆ ಅಪಾರ. (ಜೆ.ರಂಗನಾಥ ತುಮಕೂರು)