ಮುಸಕೊಂಡ್ಲಿ ಶ್ರೀ ಪಾರ್ಶ್ವನಾಥ - ಉಡೆದಾರ್ ಪದ್ಮಾವತಿ ವಾರ್ಷಿಕ ಪೂಜಾ ಸಂಪನ್ನ


Logo

Published Date: 22-Jun-2025

ತುಮಕೂರು ಜಿಲ್ಲೆ, ಗುಬ್ಬಿ ತಾಲೂಕಿನ ನಿಟ್ಟೂರು ಹೋಬಳಿಯ ಮುಸಕೊಂಡ್ಲಿಯ ಇತಿಹಾಸ ಪ್ರಸಿದ್ಧ ಶ್ರೀ ಪಾರ್ಶ್ವನಾಥ ತೀರ್ಥಂಕರ, ಉಡೆದರ್ ಪದ್ಮಾವತಿ ಜೈನಬಸದಿಯ ವಾರ್ಷಿಕ ಪೂಜಾ ಮಹೋತ್ಸವ ಇಂದು ಧಾರ್ಮಿಕ ವಿಧಿ ವಿಧಾನಗಳೊಂದಿಗೆ ಸಂಪನ್ನಗೊಂಡಿತು. ಶ್ರೀ ಕ್ಷೇತ್ರ ನರಸಿಂಹರಾಜಪುರ ಸಿಂಹನಗದ್ದೆ ಬಸ್ತಿ ಮಠದ ಪೀಠಾಧ್ಯಕ್ಷರಾದ ಸ್ವಸ್ತಿಶ್ರೀ ಲಕ್ಷ್ಮೀಸೇನ ಭಟ್ಟಾರಕ ಪಟ್ಟಾಚಾರ್ಯ ಮಹಾಸ್ವಾಮಿಜಿಗಳವರ ದಿವ್ಯ ಆಶೀರ್ವಾದದೊಂದಿಗೆ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿ ಬೆಳಗ್ಗೆ ನಿತ್ಯ ಅಭಿಷೇಕ, ಪೂಜೆ, ಉತ್ಸವ, ಆರಾಧನೆಗಳು, 108 ಕಳಶಗಳ ಅಭಿಷೇಕಗಳು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಶ್ರೀ ಪಾರ್ಶ್ವನಾಥ, ಉಡೆದರ್ ಪದ್ಮಾವತಿ ಜೈನ ಬಸದಿ ಸಮಿತಿಯ ಅಧ್ಯಕ್ಷ ಕಾಂತರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ ತುಮಕೂರು ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಜಿನಮಂದಿರ ಸಮಿತಿಯ ಮಹಾವೀರ್, ಮುಸಕೊಂಡ್ಲಿ ಜೈನ ಸಮಾಜದ ಎಂ.ಡಿ ಶಾಂತರಾಜು, ಪತ್ರಿಕಾ ವರದಿಗಾರ ಎಂ.ಡಿ. ಮೋಹನ್ ಎಂ.ಡಿ. ಚಂದ್ರಯ್ಯ. ಪಂಕಜ ಚಂದ್ರಯ್ಯ, ಉಡೆದರ್ ವಂಶಸ್ಥರಾದ ಧರಣಿಂದ್ರ, ಭರತ್ ಕುಮಾರ್, ಪದ್ಮಲತಾ, ಎಂ.ಎನ್. ಬಾಹುಬಲಿ, ಶ್ರೀ ಮಹಾವೀರ ಜೈ ನ ಬಸದಿ ಹಾಗೂ ಶ್ರೀ ಪಾರ್ಶ್ವನಾಥ- ಉಡೆದರ್ ಪದ್ಮಾವತಿ ಜೈನಬಸದಿಯ ಸದಸ್ಯರು, ಮುಸಕೊಂಡ್ಲಿ ಜೈನ ಸಮಾಜದ ಮುಖಂಡರು, ಪದ್ಮಾವತಿ ಮಹಿಳಾ ಸಮಾಜದ ಅಧ್ಯಕ್ಷರು, ಪದಾಧಿಕಾರಿಗಳು, ಉಡೇದಾರ್ ವಂಶಸ್ಥರು, ಮೈಸೂರು, ಮುಸಕೊಂಡ್ಲಿ, ತುಮಕೂರು, ಕುಣಿಗಲ್, ಬೆಂಗಳೂರು, ಸೇರಿದಂತೆ ರಾಜ್ಯದ ವಿವಿಧಡೆಗಳಿಂದ ವಿವಿಧ ಜೈನ ಸಂಘಟನೆಗಳ ಪದಾಧಿಕಾರಿಗಳು, ಶ್ರಾವಕ- ಶ್ರಾವಕಿಯರು ಭಾಗವಹಿಸಿದ್ದರು. ಪ್ರತಿಷ್ಠಾಪನಾಚಾರ್ಯ ಅನಿಲ್ ಕುಮಾರ್ ಹಾಗೂ ಸ್ಥಳೀಯ ಪುರೋಹಿತರಾದ ಅಮೃತ್ ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದರು. ಜೆ. ರoಗನಾಥ, ತುಮಕೂರು.

Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img Recomendatoion img