ತುಮಕೂರು ಟಿ.ಎನ್. ಅಜಿತ್ ಜೈನ್ ರವರು ನಿಧನ
Published Date: 13-Jun-2025
ತುಮಕೂರು ನಗರ ಅಗ್ರಹಾರದಲ್ಲಿ ವಾಸವಾಗಿದ್ದ ತುಮಕೂರಿನ ಹೆಸರಾಂತ ಸನ್ಮತಿ ಪೇಂಟ್ಸ್ ಮಾಲೀಕರಾದ, ಹಿರಿಯ ವಾಣಿಜ್ಯೋದ್ಯಮಿ ಟಿ.ಎನ್. ಅಜಿತ್ ಜೈನ್ ರವರು ಇಂದು (ಜೂ.13) ಶುಕ್ರವಾರ ಬೆಳಿಗ್ಗೆ ನಿಧನ ಹೊಂದಿದರು. ಇವರು ಪತ್ನಿ ಶಾಂತಲಾ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ. ಪರಮಪೂಜ್ಯ ಯುಗಳ ಮನಿ ಮಹಾರಾಜರ ಸಂಘಪತಿಗಳಾಗಿದ್ದ ಇವರು ಧಾರ್ಮಿಕ, ಸಾಮಾಜಿಕ ವ್ಯವಹಾರಿಕ, ಇಂಜಿನಿಯರಿಂಗ್, ಶೈಕ್ಷಣಿಕ ಹಾಗೂ ಧರ್ಮ ಪ್ರಭಾವನೆಗೆ ಮಾಡಿದ ಶ್ರೇಷ್ಠ ಸೇವೆ ಹಾಗೂ ಸತ್ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು.