ವೈದ್ಯರಿಂದ ಸಮಾಲೋಚನೆ ಹಾಗೂ ಉಚಿತ ಶಿಬಿರ
Published Date: 28-Apr-2025
ತುಮಕೂರು: ಚಿಕ್ಕಪೇಟೆಯ ಶ್ರೀ ದಿಗಂಬರ ಜೈನ ಶ್ರೀ ಪಾರ್ಶ್ವನಾಥ ಸ್ವಾಮಿ ಜಿನ ಮಂದಿರ ಹೃದಯ ಸಂಬಂಧಿತ ರೋಗದ ಬಗ್ಗೆ ವೈದ್ಯರಿಂದ ಸಮಾಲೋಚನೆ ಹಾಗೂ ಉಚಿತ ಶಿಬಿರವು 27.04.2025ನೇ ಭಾನುವಾರ ಜೈನ ಭವನದಲ್ಲಿ ಯಶಸ್ವಿಯಾಗಿ ನಡೆಯಿತು. ಟಸ್ಟ್ ವೆಲ್ ಹಾಸ್ಪಿಟಲ್ ವತಿಯಿಂದ ಡಾಕ್ಟರ್ ಅಮಿತ್ ಕುಮಾರ್ ಎಂ. ಒಸ್ವಾಲ್ ರವರು ಯುವಕರಲ್ಲಿ ಹೆಚ್ಚುತ್ತಿರುವ ಹೃದಯ ಕಾಯಿಲೆಯ ಬಗ್ಗೆ ಹೆಚ್ಚಿನ ಮಾಹಿತಿ ಹಾಗೂ ಮುನ್ನೆಚ್ಚರಿಕೆಯನ್ನು ನೀಡಿದರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವವರಿಗೆ ಉಚಿತವಾಗಿ ಮಧುಮೇಹ,ರಕ್ತದೊತ್ತಡ, ಹಾಗೂ ಇಸಿಜಿ ಪರೀಕ್ಷೆಗಳನ್ನು ಮಾಡಲಾಯಿತು. ಉಚಿತ ವೈದ್ಯಕೀಯ ಶಿಬಿರವನ್ನು ಮಾಡಿಕೊಟ್ಟ ಟ್ರಸ್ಟ್ ಆಸ್ಪತ್ರೆಯ ಡಾ. ಅಮಿತ್ ಕುಮಾರ್ ಎಂ ಒಸ್ಪಾಲ್ ರವರು ಮತ್ತು ಅವರ ತಂಡಕ್ಕೆ ಜೈನ ಸಮಾಜದ ವತಿಯಿಂದ ಸನ್ಮಾನಿಸಲಾಯಿತು.