ಡಾ. ಹೆಚ್.ಎ.ಪಾಶ್ವ೯ನಾಥ್ ಅವರಿಗೆ ಪ್ರೊ.ಎಚ್ಚೆಸ್ಕೆ ಶತಮಾನೋತ್ಸವ ಪ್ರಶಸ್ತಿ ಪ್ರದಾನ
Published Date: 09-Mar-2025
ಗ್ರಾಮಾಂತರ ಬುದ್ಧಿ ಜೀವಿಗಳ ಬಳಗ (ಕೆ.ಆರ್.ನಗರ) ಸಂಸ್ಥೆಯು ತನ್ನ 40ನೇ ವಾಷಿ೯ಕೋತ್ಸವ ಹಾಗೂ ರಾಷ್ಟ್ರಕವಿ ಕುವೆಂಪು ಸಾಹಿತ್ಯೋತ್ಸವದ ಅಂಗವಾಗಿ ಫೆ.23ರಂದು ಮೈಸೂರಿನ ಇನ್ಸ್ಟಿಟ್ಯೂಟ್ ಆಫ್ ಇಂಜಿನಿಯರ್ಸ್ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಸಾಹಿತ್ಯ ಮತ್ತು ರಂಗಭೂಮಿ ಕ್ಷೇತ್ರಗಳಲ್ಲಿನ ಅತ್ಯಮೂಲ್ಯ ಕೊಡುಗೆಗಳನ್ನು ಪರಿಗಣಿಸಿ ಹಿರಿಯ ಸಾಹಿತಿಗಳು ಹಾಗೂ ರಂಗಭೂಮಿ ಕಲಾವಿದರು ಆಗಿರುವ ಡಾ. ಹೆಚ್.ಎ. ಪಾಶ್ವ೯ನಾಥ್ ಅವರಿಗೆ ಪ್ರೊ, ಎಚ್ಚೆಸ್ಕೆ ಶತಮಾನೋತ್ಸವ ಪ್ರಶಸ್ತಿಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ್ ಜೋಶಿಯವರು ಪ್ರದಾನಮಾಡಿ ಗೌರವಿಸಿದರು. ಇವರು ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿರುತ್ತಾರೆ.