ವೇಣೂರು: ಬಾಹುಬಲಿ ಬೆಟ್ಟದ ರಥೋತ್ಸವದಂದು ವಿದ್ಯಾರ್ಥಿವೇತನ
Published Date: 07-Mar-2025
ವೇಣೂರು: ಬೆಳ್ತಂಗಡಿ ತಾಲೂಕು, ವೇಣೂರು ಭ| ಶ್ರೀ ಬಾಹುಬಲಿ ಬೆಟ್ಟದ ವಾರ್ಷಿಕ ರಥಯಾತ್ರಾ ಮಹೋತ್ಸವವು ಮಾ.14ರಂದು ಜರಗಲಿರುವುದು. ಅಂದು ರಾತ್ರಿ 7.30ರಿಂದ ನಡೆಯಲಿರುವ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ.ಯಲ್ಲಿ ಅತ್ಯಧಿಕ ಅಂಕಗಳನ್ನು ಗಳಿಸಿದ ಜೈನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ, ದಿ| ಡಾ| ಪಿ. ಅಂತಪ್ಪ ಆಳ್ವ ರವರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳು ಪಂಜಾಲಬೈಲು ವೇಣೂರು ಹಾಗೂ ಬಡಕೋಡಿ ಹೊಸಮನೆ ದಿ| ಪಿ. ಆದಿರಾಜ ಶೆಟ್ಟಿ ಹಾಗೂ ಶ್ರೀಮತಿ ದಿ| ಶಾರದಾದೇವಿಯವರ ಸ್ಮರಣಾರ್ಥ ಮಕ್ಕಳಿಂದ ಹಾಗೂ ಮಾರಗುತ್ತು ದಿ|ವಿಜಯರಾಜ ಅಧಿಕಾರಿಯವರ ಸ್ಮರಣಾರ್ಥ ಪತ್ನಿ ರಾಜೇಶ್ವರಿ ವಿ.ಅಧಿಕಾರಿ ಹಾಗೂ ಶ್ರೀ ಅಕ್ಷಯ ಕುಮಾರ್ ಕಂಬಳಿ ಮತ್ತು ಮಕ್ಕಳು ಜಿನಪದ ಬೆಳಾಲುರಸ್ತೆ ಉಜಿರೆ ಇವರಿಂದ ವಿದ್ಯಾರ್ಥಿ ವೇತನ ನೀಡಲಾಗುವುದು. ಅರ್ಹ ಪ್ರತಿಭಾವಂತ ಜೈನ ವಿದ್ಯಾರ್ಥಿಗಳು 2024ನೇ ಸಾಲಿನ ಪಿ.ಯು.ಸಿ. ಹಾಗೂ ಎಸ್.ಎಸ್.ಎಲ್.ಸಿ. ಅಂಕಪಟ್ಟಿಯ ಜೆರಾಕ್ಸ್ ನೊಂದಿಗೆ ಅರ್ಜಿಯನ್ನು ಕಾರ್ಯದರ್ಶಿ ಶ್ರೀ ದಿಗಂಬರ ಜೈನ ತೀರ್ಥಕ್ಷೇತ್ರ ಸಮಿತಿ ಯಾತ್ರಿ ನಿವಾಸ ಶ್ರೀ ಮಹಾವೀರ ನಗರ ವೇಣೂರು-574242 ಇವರಿಗೆ ಕಳುಹಿಸಿಕೊಡುವಂತೆ ವಿನಂತಿಸಲಾಗಿದೆ. ಅರ್ಜಿದಾರರು ಸರಿಯಾದ ವಿಳಾಸ ಹಾಗೂ ಮೊಬೈಲ್ ನಂಬರ್ ನಮೂದಿಸಬೇಕು. ಮಾರ್ಚ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ ಕಛೇರಿ ಮೊಬೈಲ್ ನಂ: 9606356288