ಸತ್ತೂರು, ಧಾರವಾಡ: “ಮಿಷನ್ ಪ್ರಿಸನ್ 2.0”
Published Date: 05-Aug-2024
ಎಸ್.ಡಿ.ಎಂ. ವೈದ್ಯಕೀಯ ಮಹಾವಿದ್ಯಾಲಯದ ಚರ್ಮರೋಗ ಚಿಕಿತ್ಸಾ ವಿಭಾಗವು ಕೇಂದ್ರ ಕಾರಾಗೃಹ ಮತ್ತು ಜಿಲ್ಲಾ ಆಸ್ಪತ್ರೆ, ಧಾರವಾಡ ಹಾಗೂ ಹುಬ್ಬಳ್ಳಿ-ಧಾರವಾಡ ಚರ್ಮರೋಗ ಸಂಘದ ಸಹಯೋಗದಿಂದ ಕೇಂದ್ರ ಕಾರಾಗೃಹದ ಬಂಧಿಗಳಿಗೆ ಉಚಿತ ಚರ್ಮರೋಗ ಮಾಹಿತಿ, ಚಿಕಿತ್ಸೆ ಮತ್ತು ಔಷಧ ವಿತರಣಾ ಕಾರ್ಯಕ್ರಮವನ್ನು ದಿನಾಂಕ ಆಗಸ್ಟ್ 05, 2024 ರಂದು “ಮಿಷನ್ ಪ್ರಿಸನ್ 2.0” ಎಂಬ ಧ್ಯೇಯೆಯೊಂದಿಗೆ ಧಾರವಾಡದ ಕಾರಗೃಹದಲ್ಲಿ ಆಯೋಜಿಸಲಾಯಿತು. ಕಾರ್ಯಕ್ರಮದ ಉದ್ಘಾಟನೆಯನ್ನು ಕಾರಾಗೃಹದ ಅಧೀಕ್ಷಕರಾದ ಪಿ. ಮಹಾದೇವ ನಾಯ್ಕ ಅವರು ಉದ್ಘಾಟಿಸಿದರು. ಕಾರಾಗೃಹದ ಸಹಾಯಕ ಅಧೀಕ್ಷಕರಾದ ಶಹಾಬುದ್ದಿನ ಕೆ., ನಿರ್ಮಲ, ಕಾರಾಗೃಹದ ಮುಖ್ಯ ವೈದ್ಯಾಧಿಕಾರಿಗಳಾದ ಡಾ. ಎಸ್. ಎನ್. ಹೊನಕೇರಿ ಮುಖ್ಯ ಅತಿಥಿಗಳಾಗಿದ್ದರು. ಜಿಲ್ಲಾ ಆಸ್ಪತ್ರೆಯ ಹಿರಿಯ ಚರ್ಮರೋಗ ತಜ್ಞರಾದ ಡಾ. ಗೌರಿ ಬೆಲ್ಲದ ಹಾಗೂ ಎಸ್.ಡಿ.ಎಂ. ಆಸ್ಪತ್ರೆಯ ಚರ್ಮರೋಗ ವಿಭಾಗದ ಮುಖ್ಯಸ್ಥರಾದ ಡಾ. ನವೀನ ಕೆ. ಎನ್. ಮತ್ತು ಡಾ, ಶರತ್ಚಂದ್ರ ಅಥಣಿಕರ ಉಪಸ್ಥಿತರಿದ್ದರು. ಕಾರಾಗೃಹದ ಸುಮಾರು 180ಕ್ಕೂ ಹೆಚ್ಚು ಬಂಧಿಗಳಿಗೆ ಚರ್ಮರೋಗದ ಬಗ್ಗೆ ತಿಳುವಳಿಕೆ ನೀಡಿ ಉಚಿತ ಔಷಧವನ್ನು ವಿತರಿಸಲಾಯಿತು. ಎಸ್.ಡಿ.ಎಂ. ಆಸ್ಪತ್ರೆಯ ಚರ್ಮರೋಗ ಚಿಕಿತ್ಸಾ ತಂಡದಲ್ಲಿ ಡಾ. ಶ್ವೇತಾ ಪ್ರಭು, ಡಾ. ಸೌಮ್ಯಶ್ರಿ, ಡಾ. ಸಂಜನಾ, ಡಾ. ವಾಣಿ, ಡಾ. ಸುಷ್ಮಾ ಮತ್ತಿತರರು ತಪಾಸಣೆ ನಡೆಸಿದರು.