ಮಣಿಪಾಲ ಮಾಹೆಯ ಕಲಾವಿದರಿಂದ ಧರ್ಮಸ್ಥಳದಲ್ಲಿ ಸಂಗೀತ ಸೇವೆ
Published Date: 24-Sep-2025
ಉಜಿರೆ: ಮಣಿಪಾಲದ ಮಾಹೆಯ ಪ್ರಾಧ್ಯಾಪಕರುಗಳ ತಂಡ ಮಂಗಳವಾರ ರಾತ್ರಿ ಧರ್ಮಸ್ಥಳದಲ್ಲಿ ನವರಾತ್ರಿ ಸಂದರ್ಭ ಪ್ರವಚನ ಮಂಟಪದಲ್ಲಿ ಸಂಗೀತ ಸೇವೆ ಮಾಡಿದರು. ಡಾ. ವಿದ್ಯಾ ಎಸ್. ರಾವ್, ಡಾ. ಭಾಗ್ಯ ಆರ್. ನಾವಡ, ಪ್ರೊ. ರಜಿತ ಕೆ.ವಿ., ಡಾ. ರಮ್ಯ ಎಸ್., ಪ್ರೊ. ಸೌಮ್ಯ ಎಸ್., ಪ್ರೊ. ಪ್ರಥ್ವಿ ಶೆಣೈ, ಡಾ. ಚೈತ್ರ ಎಂ. ಮತ್ತು ಡಾ. ಶಿಲ್ಪಾ ಸುರೇಶ್ ಸುಶ್ರಾವ್ಯ ಸಂಗೀತ ಹಾಡಿದರು. ಹಿನ್ನೆಲೆಯಲ್ಲಿ ವಯಲಿನ್ ವಾದಕರಾಗಿ : ಡಾ. ಸುಹಾಸ್ ಕೌಶಿಕ್, ಮೃದಂಗ ವಾದಕರಾಗಿ : ವಿದ್ವಾನ್ ಬಾಲಚಂದ್ರ ಭಾಗವತ್ ಮತ್ತು ಡಾ. ಕೃಷ್ಣಪ್ರಸಾದ್ ಸಹಕರಿಸಿದರು.